IPL ಪಂದ್ಯಕ್ಕೆ ಬೆಟ್ಟಿಂಗ್: ವಿಜಯಪುರದಲ್ಲಿ ಯುವಕ ಅರೆಸ್ಟ್!

ವಿಜಯಪುರ: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟಿ-20 ಕ್ರಿಕೆಟ್ ಪಂದ್ಯಾವಳಿಯ ವೇಳೆ ಬೆಟ್ಟಿಂಗ್ Vijayapura IPL betting case ನಡೆಸುತ್ತಿದ್ದ ಯುವಕನನ್ನು ಗೋಲಗುಮ್ಮಜ್ ಪೊಲೀಸರು ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ. ಮೇ 08ರಂದು ರಾತ್ರಿ ಸುಮಾರು 8.50 ಗಂಟೆ ಸುಮಾರಿಗೆ ವಿಜಯಪುರ ನಗರದ ಸಿಂದಗಿ ನಾಕಾ ಸಮೀಪ ಸಾರ್ವಜನಿಕ ರಸ್ತೆಯ ಪಕ್ಕದಲ್ಲಿ ಆರೋಪಿತ ಸಚಿನ್ ಮಲ್ಲಪ್ಪ ಮಾದರ (24), ಇಂಡಸ್ಟ್ರಿಯಲ್ ಏರಿಯಾ ನಿವಾಸಿ, ಐಪಿಎಲ್ ಟಿ-20 ಪಂದ್ಯಾವಳಿಯ Delhi Capitals ಹಾಗೂ Kolkata Knight Riders ತಂಡಗಳ […]
ವಿಜಯಪುರದಲ್ಲಿ ಶಿವಶರಣೆ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಶಿವಶರಣೆ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು. ಜಯಂತಿ ಕಾರ್ಯಕ್ರಮದ ಅಂಗವಾಗಿ ಶಿವಶರಣೆ ಮಹಾಸಾಧ್ವಿ ಹೇಮರೆಡ್ಡಿ ಮಲ್ಲಮ್ಮ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಲಾಯಿತು. ಸಂದರ್ಭದಲ್ಲಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ರಾಜಶೇಖರ್ ಡಂಬಳ್, ನಿರ್ಮಿತಿ ಕೇಂದ್ರದ ಯೋಜನೆ ನಿರ್ದೇಶಕರಾದ ಆಕಾಶ್ ತಿಮಶೆಟ್ಟಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ […]
ವಿಜಯಪುರ ಪೊಲೀಸರ ಖಡಕ್ ಆಕ್ಷನ್: ಅಪ್ರಾಪ್ತರ ಬೈಕ್ ಚಾಲನೆಗೆ ₹25 ಸಾವಿರ ದಂಡ

ವಿಜಯಪುರ: ನಗರದಲ್ಲಿ ಅಪ್ರಾಪ್ತರ ವಾಹನ ಚಾಲನೆ minor driving fine ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ವಿಜಯಪುರ ಸಂಚಾರಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಬೈಕ್ ನೀಡಿದ ಮೂವರು ಪೋಷಕರಿಗೆ ನ್ಯಾಯಾಲಯ ತಲಾ ₹25,000 ದಂಡ ವಿಧಿಸಿದ್ದು, ಒಂದು ವರ್ಷದವರೆಗೆ ವಾಹನಗಳ ನೋಂದಣಿ ರದ್ದುಪಡಿಸುವಂತೆ ಆದೇಶಿಸಿದೆ. ಇದರ ಜೊತೆಗೆ ಅಪ್ರಾಪ್ತ ವಯಸ್ಸಿನ ಮೂವರು ಬಾಲಕರಿಗೆ 25 ವರ್ಷ ವಯಸ್ಸಾಗುವವರೆಗೆ ಡ್ರೈವಿಂಗ್ ಲೈಸೆನ್ಸ್ ಅಥವಾ ಲರ್ನಿಂಗ್ ಲೈಸೆನ್ಸ್ ನೀಡಬಾರದು ಎಂದು ನ್ಯಾಯಾಲಯ ಸೂಚಿಸಿದೆ. ಎಲ್ಲೆಲ್ಲಿ ಅಪ್ರಾಪ್ತರು […]
ಸತ್ಯ ತತ್ವಗಳನ್ನು ಜಗತ್ತಿಗೆ ಸಾರಿದವರು ಬಸವಾದಿ ಶರಣರು

ವಿಜಯಪುರ: 12ನೇ ಶತಮಾನದ ಬಸವಾದಿ ಶರಣರು ಭೌತಿಕ ಹಾಗೂ ಅಧ್ಯಾತ್ಮಿಕ ಸತ್ಯ ತತ್ವಗಳನ್ನು ಜಗತ್ತಿಗೆ ನೀಡಿದ ಮಹಾತ್ಮರು ಎಂದು ಉಪನ್ಯಾಸಕಿ ಶಿಲ್ಪಾ ಭಸ್ಮೆ ಅಭಿಪ್ರಾಯಪಟ್ಟರು. ಇಹಪರ ಎಂಬ ಅಖಂಡ ಪರಿಪೂರ್ಣ ನಿತ್ಯ ಸತ್ಯ ಬದುಕಿನ ಶಿವಪಥವನ್ನು ಲೋಕಕ್ಕೆ ನೀಡಿದವರು ಬಸವಾದಿ ಶರಣರು ಎಂದು ಅವರು ಹೇಳಿದರು. ನಗರದ ವೀರಶೈವ ಲಿಂಗಾಯತ ಸಭಾಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಆಯೋಜಿಸಿದ್ದ 76ನೇ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಅವರು ಮಾತನಾಡಿದರು. ಏಕಾಂತ ರಾಮಯ್ಯನವರ ಅನುಭಾವ ಕುರಿತು […]
RTI Act 40 ಸಾವಿರ ಮೇಲ್ಮನವಿ ಇತ್ಯರ್ಥ: ಆಯೋಗದ ದಾಖಲೆ ಸಾಧನೆ

ವಿಜಯಪುರ: ಕಳೆದೊಂದು ವರ್ಷದಲ್ಲಿ ಕರ್ನಾಟಕ ಮಾಹಿತಿ ಹಕ್ಕು ಆಯೋಗವು RTI Act 40 ಸಾವಿರ ದ್ವಿತೀಯ ಮೇಲ್ಮನವಿ ಪ್ರಕರಣಗಳನ್ನು ರಾಷ್ಟ್ರದಲ್ಲೇ ದಾಖಲೆ ಪ್ರಮಾಣದಲ್ಲಿ ಇತ್ಯರ್ಥಪಡಿಸಿದೆ ಎಂದು ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ, ರಾಜಶೇಖರ ಎಸ್ ಹಾಗೂ ಬೆಳಗಾವಿ ಪೀಠದ ಮಾಹಿತಿ ಆಯುಕ್ತರಾದ ಪ್ರಕಾಶ ನಾರಾಯಣ ಚನ್ನಾಳ ಹೇಳಿದರು. ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆ ಕುರಿತು ಅರಿವು ಮೂಡಿಸುವ ವಿಶೇಷ ತರಬೇತಿ ಕಾರ್ಯಾಗಾರದ […]
devarahipparagi-development-mb-patil-inauguration

ವಿಜಯಪುರ: ಕಳೆದ ಮೂರು ವರ್ಷಗಳಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯ ಅವರ ನೇತೃತ್ವದ ನಮ್ಮ ಸರ್ಕಾರ ಎಲ್ಲ ವರ್ಗದ ಜನರ ಉಜ್ವಲ ಭವಿತವ್ಯದ ಆಶಾದೀಪ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಜನಸಾಮಾನ್ಯರ ಬದುಕಿಗೆ ನೆರವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಣಕಾಸು ತಜ್ಞರಾಗಿದ್ದಾರೆ. ಎಲ್ಲ ವರ್ಗದವರ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಿದೆ. ಆರೋಗ್ಯ, ಶಿಕ್ಷಣ ಸೇರಿದಂತೆ ವಿವಿಧ ಎಲ್ಲ ಆಯಾಮಗಳಲ್ಲೂ ನಮ್ಮ ಸರ್ಕಾರ ಅಭಿವೃದ್ಧಿಗೆ ಬದ್ಧವಾಗಿದೆ ಎಂದು ಬೃಹತ್ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ.ಬಿ. ಪಾಟೀಲ […]
Vijayapura Accident: ಶಿವಗಿರಿ ಬಳಿ ಲಾರಿ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲೇ ಸಾವು

ವಿಜಯಪುರ: ವಿಜಯಪುರ-ಉಕ್ಕಲಿ ರಸ್ತೆಯ ಶಿವಗಿರಿ ಪ್ರವೇಶ ದ್ವಾರದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಏಪ್ರಿಲ್ 30ರಂದು ಮಧ್ಯಾಹ್ನ ಸುಮಾರು 3.30 ಗಂಟೆಗೆ ಉಕ್ಕಲಿ ಕಡೆಯಿಂದ ವಿಜಯಪುರ ಕಡೆಗೆ ಬರುತ್ತಿದ್ದ Vijayapura Accident ಲಾರಿ ಚಾಲಕ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ. ಶಿವಗಿರಿ ಪ್ರವೇಶ ದ್ವಾರದ ಸಮೀಪ ಚಹಾ ಅಂಗಡಿ ಮುಂದೆ ವಿಜಯಪುರ ಕಡೆಯಿಂದ ಉಕ್ಕಲಿ ಕಡೆಗೆ ತಮ್ಮ ಸೈಡಿನಲ್ಲಿ ಹೋಗುತ್ತಿದ್ದ ಹಿರೋ ಸ್ಪ್ಲೆಂಡರ್ […]
Vijayapura Ganja Case: ಹರಣಶಿಕಾರಿ ಕಾಲನಿಯಲ್ಲಿ ₹3.79 ಲಕ್ಷ ಗಾಂಜಾ ಜಪ್ತಿ

ವಿಜಯಪುರ: ವಿಜಯಪುರ ನಗರದ ಹರಣಶಿಕಾರಿ ಕಾಲನಿಯಲ್ಲಿ ಗಾಂಜಾ Vijayapura Ganja Case ಮಾರಾಟಕ್ಕೆ ಸಂಗ್ರಹಿಸಿಟ್ಟಿದ್ದ ಆರೋಪಿಗಳ ವಿರುದ್ಧ ಗೋಲಗುಂಬಜ ಪೊಲೀಸ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಭಾರೀ ಪ್ರಮಾಣದ ಗಾಂಜಾವನ್ನು ಜಪ್ತಿ ಮಾಡಿದ್ದಾರೆ. ಏಪ್ರಿಲ್ 30ರಂದು ರಾತ್ರಿ ಸುಮಾರು 8.45 ಗಂಟೆ ಸುಮಾರಿಗೆ ಆರೋಪಿತ ಮನೋಹರ ಚವ್ಹಾಣ ಹಾಗೂ ಇತರರು ತಮ್ಮ ಲಾಭಕ್ಕಾಗಿ ಎಲ್ಲಿಂದಲೋ ಗಾಂಜಾ ತಂದು ವಿಜಯಪುರ ನಗರದ ಹರಣಶಿಕಾರಿ ಕಾಲನಿಯ ಮನೋಹರ ಚವ್ಹಾಣ ಅವರ ಮನೆಯ ಸಮೀಪದ ಖಾಲಿ ಜಾಗದಲ್ಲಿ ಮಾರಾಟ ಮಾಡಲು ಸಂಗ್ರಹಿಸಿಟ್ಟಿದ್ದರು […]
Karmikaru: ಕಾರ್ಮಿಕರು ದೇಶಾಭಿವೃದ್ಧಿಯ ಹರಿಕಾರರು: ಅರಿಕೇರಿಮಠ

ವಿಜಯಪುರ: ದೇಶದ ಆರ್ಥಿಕ ಪ್ರಗತಿಗೆ ಕಾರ್ಮಿಕ karmikaru ಬಂಧುಗಳೇ ನೇರ ಕಾರಣರಾಗಿದ್ದಾರೆ. ಎಲ್ಲ ಜನರು ಸತ್ಯಶುದ್ಧ ಕಾಯಕವನ್ನು ಮಾಡುವರೇ ಅಲ್ಲಿ ವ್ಯಷ್ಠಿ ಮತ್ತು ಸಮಷ್ಠಿಗಳು ಅಭಿವೃದ್ಧಿ ಹೊಂದುತ್ತವೆ. ಮಾಲಿಕರು ಮತ್ತು ದುಡಿದ ವರ್ಗದ ಮಧ್ಯೆ ಸೌಹಾರ್ದಯುತ ವಾತಾವರಣವಿದ್ದಾಗ ಮಾತ್ರ ಪ್ರಗತಿಸಾಧ್ಯವೆಂದುಕೆ.ಆರ್.ಅರಕೇರಿಮಠ ಹೇಳಿದರು. ಅವರು ವೀರಶೈವ ಲಿಂಗಾಯತ ಮಹಾಸಭಾದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ಕಾಯಕದಿನ ಮತ್ತು ದತ್ತಿ ಸಮಾರಂಭ ಕುರಿತು ಮಾತನಾಡಿದರು. ಲಿಂ. ಗುರಪ್ಪ ಬೊಳಿಶೆಟ್ಟಿ ಬಂ. ಚನ್ನಪ್ಪ ಬಿಜ್ಜರಗಿ, ಲಿಂ. ಬಸಪ್ಪ ಸಾಲಕ್ಕಿ ಅವರ […]
MB Patil ಗೆ ಲೋಹಗಾಂವದಲ್ಲಿ ಎತ್ತಿನ ಬಂಡಿ ಮೆರವಣಿಗೆ, ತುಲಾಭಾರ

ವಿಜಯಪುರ: ಜಿಲ್ಲೆಯ ಅನ್ನದಾತರ ಆಶೋತ್ತರಗಳಿಗೆ ಸ್ಪಂದಿಸಿ, ಜಲ ಸಂಪನ್ಮೂಲಗಳ ಪುನಶ್ಚೇತನಕ್ಕೆ ಬದ್ಧತೆ ತೋರಿದ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ MB Patil ಅವರಿಗೆ ಲೋಹಗಾಂವ ಗ್ರಾಮಸ್ಥರು ಎತ್ತಿನ ಬಂಡಿಯಲ್ಲಿ ತುಲಾಭಾರ ಮಾಡುವ ಮೂಲಕ ತಮ್ಮ ಅಪಾರ ಅಭಿಮಾನ ಹಾಗೂ ಕೃತಜ್ಞತೆ ಸಲ್ಲಿಸಿದರು. ಸಣ್ಣ ನೀರಾವರಿ ಇಲಾಖೆಯ ವತಿಯಿಂದ ವಿವಿಧ ಗ್ರಾಮಗಳಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದ ಸರಣಿ ಬಾಂದಾರ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ರೈತರು ಭಾವನಾತ್ಮಕವಾಗಿ […]