PDO Suicide: ವಿಜಯಪುರದಲ್ಲಿ ಮುಕ್ತಂಹುಸೇನ್ ಆತ್ಮಹತ್ಯೆ ತನಿಖೆಗೆ ಆಗ್ರಹ

ವಿಜಯಪುರ: ಕರ್ನಾಟಕ ರಾಜ್ಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವಿಜಯಪುರ ಘಟಕವು ಕೊತಬಾಳ ಗ್ರಾಮ ಪಂಚಾಯತಿ ಪಿಡಿಒ ಮುಕ್ತಂಹುಸೇನ್ ಕರಡಿಗುಡ್ಡ ಅವರ ಆತ್ಮಹತ್ಯೆ PDO Suicide ಪ್ರಕರಣದ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರಿಗೆ ಮನವಿ ಸಲ್ಲಿಸಿತು. ಜಿಲ್ಲಾಧ್ಯಕ್ಷ ಎಸ್.ಆರ್. ಕಟ್ಟಿ ಮಾತನಾಡಿ, ಅತಿಯಾದ ಕೆಲಸದ ಒತ್ತಡ, ಲೋಕಾಯುಕ್ತ ತನಿಖೆ ಹಾಗೂ ಹಲವು ತಿಂಗಳುಗಳಿಂದ ವೇತನ ಸಿಗದ ಹಿನ್ನೆಲೆ ಮುಕ್ತಂಹುಸೇನ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು […]