ವಿಜಯಪುರ: ಹಾಲುಮತ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವಂತೆ ಆಗ್ರಹಿಸಿ ಮೇಘಾಲಯ ರಾಜ್ಯಪಾಲರಾದ ಸಿ.ಎಚ್. ವಿಜಯಶಂಕರ ರವರಿಗೆ ವಿಜಯಪುರ ನಗರ ಘಟಕ ಕುರುಬರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನಗರ ಘಟಕ ಅಧ್ಯಕ್ಷರಾದ ರಾಜು ಕಗ್ಗೋಡ ರವರು ಮತನಾಡಿ, ಕರ್ನಾಟಕ ರಾಜ್ಯದಲ್ಲಿ ಹಾಲುಮತ ಜನಾಂಗದ ಜನರು ಸುಮಾರು ಶೇ.40 ರಷ್ಟು ಜನಸಂಖ್ಯೆ ಇದ್ದು, ಇಲ್ಲಿಯವರೆಗೆ ನಮ್ಮ ಸಮುದಾಯಕ್ಕೆ ರಾಜಕೀಯವಾಗಿ, ಆರ್ಥಿಕವಾಗಿ ಹಾಗೂ ಭೌಗೋಳಿಕವಾಗಿ, ಶೈಕ್ಷಣಿಕವಾಗಿ ನಮ್ಮ ಸಮಾಜವನ್ನು ಹಿಂದಿಕುತ್ತಾ ಬಂದಿದ್ದು, ಎಲ್ಲ ಕ್ಷೇತ್ರಗಳಲ್ಲಿ ನಮಗೆ ಅನ್ಯಾಯವಾಗುತ್ತಾ ಬಂದಿರುತ್ತದೆ.
ಇದನ್ನೂ ಓದಿ: Vijayapura News | ವಿಜಯಪುರದಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ನಾಲ್ವರ ಬಂಧನ
ಸದರಿ ನಮ್ಮ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವಂತೆ ಕಳೆದ 8-10 ವರ್ಷಗಳಿಂದ ಸಭೆ ಸಮಾರಂಭ, ಆಮರಣ ಉಪವಾಸ, ಕಾಲ್ನಡಿಗೆ, ಮುಖಾಂತರ ಹೋರಾಟ ಮಾಡಿದರೂ ಸಹ ಇನ್ನುವರೆಗೆ ನಮ್ಮ ಸಮಾಜಕ್ಕೆ ನ್ಯಾಯ ದೊರಕಿರುವದಿಲ್ಲ.
ಇದರಿಂದ ನಮ್ಮ ಸಮಾಜವು ಎಲ್ಲ ಸ್ಥರಗಳಿಂದಲೂ ಹಿಂದೆ ಉಳಿದಿರುತ್ತದೆ. ಇದರಿಂದ ನಾವು ರಾಜ್ಯದಲ್ಲಿ ಶೇ.40 ರಷ್ಟು ಜನಸಂಖ್ಯೆ ಇದ್ದರೂ ಸಹ ಮೀಸಲಾತಿ ದೃಷ್ಟಿಯಿಂದ ಹಿಂದಿರುತ್ತೇವೆ.
ಕಾರಣ ನಮ್ಮ ಹಾಲುಮತ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವಂತೆ ರಾಜ್ಯ ಸರಕಾರ / ಕೇಂದ್ರ ಸರಕಾರದ ಗಮನಕ್ಕೆ ತಂದು ನಮಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿಕೊಂಡರು.
ಇದನ್ನೂ ಓದಿ: Vijayapura News | ಗುರುನಮನ ಮಹೋತ್ಸವ | ಶ್ರೀ ಸಿದ್ದೇಶ್ವರ ಸ್ವಾಮೀಜಿಯವರು ಜಗತ್ತನ್ನೇ ಗೆದ್ದಂತವರು | ಮಹೇಶ ಮಾಶಾಳ
ಈ ಸಂದರ್ಭದಲ್ಲಿ ಪೂಜಾರಿಗಳು, ನಾಗಠಾಣ ಮಾಳಿಂಗರಾಯ, ಶಂಕರ ಪೂಜಾರಿ, ರಾಜು ಬಿರಾದಾರ, ಅಹಿಂದ ಅಧ್ಯಕ್ಷರಾದ ಮಾಳು ಗೂಗದಡ್ಡಿ, ಸುರೇಶ ಡೊಂಬಾಳಿ, ರಮೇಶ ಕಾಲೇಬಾಗ, ಯಲ್ಲಪ್ಪ ನುಚ್ಚನವರ, ಬಸು ವಾಡೇದ, ಮಾಂತೇಶ ಬೇವೂರ, ಶಂಕರ ಗೌಳಿ, ಶೇಖರ ನಾಗರಳ್ಳಿ ಇನ್ನಿತರರು ಇದ್ದರು.