ವಿಜಯಪುರ : ಹಣಕಾಸು ಮಸೂದೆ (ಮೌಲ್ಯಮಾಪನ ಕಾಯ್ದೆ) 2025 ಅನ್ನು ರದ್ದುಗೊಳಿಸಬೇಕು. ಹೊಸ ಪಿಂಚಣಿ ಯೋಜನೆಯನ್ನು ರದ್ದುಗೊಳಿಸಬೇಕು ಮತ್ತು ಎಲ್ಲಾ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ವ್ಯವಸ್ಥೆಯನ್ನು ಪುನಃಸ್ಥಾಪಿಸಬೇಕು. 8ನೇ ಕೇಂದ್ರ ವೇತನ ಆಯೋಗದ ಪ್ರಯೋಜನಗಳನ್ನು ಡಿಸೆಂಬರ್ 31, 2025 ಕ್ಕಿಂತ ಮೊದಲು ನಿವೃತ್ತರಾದ ಎಲ್ಲರಿಗೂ ವಿಸ್ತರಿಸಬೇಕು ಎನ್ನುವ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಅಖಿಲ ಭಾರತ ನಿವೃತ್ತ ನೌಕರರ ಒಕ್ಕೂಟದ ಕರೆಯ ಮೇರೆಗೆ ವಿಜಯಪುರ ಜಿಲ್ಲಾ ನಿವೃತ್ತ ನೌಕರರ ಒಕ್ಕೂಟದ ಪದಾಧಿಕಾರಿಗಳು ವಿಜಯಪುರ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಮೆರವಣಿಗೆಯು ಆನಂದ ಮಹಲ್ದಿಂದ ಆರಂಭಗೊಂಡು ಘೋಷಣೆಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಗೆ ವರೆಗೆ ತಲುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಚಂದ್ರಶೇಖರ ಲೆಂಡಿ ಮಾತನಾಡಿ, ಎಲ್ಲಾ ರಾಜ್ಯಗಳಲ್ಲಿನ ತುಟ್ಟಿ ಭತ್ಯೆಯನ್ನು ಕೇಂದ್ರ ಸರ್ಕಾರಿ ಪಿಂಚಣಿದಾರರ ಮಟ್ಟಕ್ಕೆ ಹೆಚ್ಚಿಸಬೇಕು. ಪಿಂಚಣಿ ಕೌಂಟೇಶನ್ ಮೊತ್ತವನ್ನು 15 ವರ್ಷದಿಂದ 11 ವರ್ಷಗಳವರೆಗೆ ಇಳಿಸಬೇಕು. ನೌಕರರ ಹಿತಾಸಕ್ತಿಗಳಿಗೆ ಸಂಬAಧಿಸಿದ ನ್ಯಾಯಾಲಯದ ತೀರ್ಪುಗಳನ್ನು ಸಾಮಾನ್ಯೀಕರಿಸಬೇಕು. ರೈಲು ಪ್ರಯಾಣ, ವಿಮಾನ ಪ್ರಯಾಣ, ವೋಲ್ವೋ, ಎಸಿ ಬಸ್ಗಳು ಮತ್ತು ಖಾಸಗಿ ಸಹಕಾರಿ ಬಸ್ ದರಗಳ ಮೇಲಿನ ರಿಯಾಯಿತಿಗಳನ್ನು ಪುನಃಸ್ಥಾಪಿಸಬೇಕು ಎಂದರು.
ಈ ಸಂದರ್ಭದಲ್ಲಿ ಸುರೇಶ ಜೀಬಿ ಮಾತನಾಡಿ, ಎಲ್ಲಾ ರಾಜ್ಯಗಳು ದೇಶದ ಎಲ್ಲಾ ಪಿಂಚಣಿದಾರರಿಗೆ ವೈದ್ಯಕೀಯ ವಿಮೆಯನ್ನು ಒದಗಿಸುವ ಮೂಲಕ ಆರೋಗ್ಯ ರಕ್ಷಣೆಯನ್ನು ಒದಗಿಸಬೇಕು. ಅದಕ್ಕೆ ತಕ್ಕಂತೆ ಪಿಂಚಣಿ ವಯಸ್ಸನ್ನು ಹೆಚ್ಚಿಸಿ. 65 ವರ್ಷ ವಯಸ್ಸಿನ ನಂತರ 10%, 70 ವರ್ಷಗಳು 20%, 75 ವರ್ಷಗಳು 30%, 80 ವರ್ಷಗಳು 50%, 85 ವರ್ಷಗಳು 70%, 90 ವರ್ಷಗಳು 90% ಮತ್ತು 95 ವರ್ಷಗಳ ನಂತರ 100% ನೀಡಬೇಕು. ನಾಲ್ಕು ಹೊಸ ಅಪಾಯಕಾರಿ ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಎಂ.ಎಂ. ಪಾಟೀಲ ಮಾತನಾಡಿ, ಅಔಗಿIಆ-19 ಅವಧಿಯಲ್ಲಿ 18 ತಿಂಗಳ ತುಟ್ಟಿ ಭತ್ಯೆಯ ಬಾಕಿಯನ್ನು ಬಡ್ಡಿಯೊಂದಿಗೆ ಪಾವತಿಸಬೇಕು ಎಂದರು.
ಈ ಸಂದರ್ಭದಲ್ಲಿ ಎನ್.ಕೆ. ಮನಗೊಂಡ, ಆರ್.ಎಸ್.ಮೆಣಸಗಿ, ವ್ಹಿ.ಎಂ.ಬೆಳ್ಳುAಡಗಿ, ಜಿ.ಬಿ. ಅಂಗಡಿ, ಎಸ್.ಜಿ.ಮುರನಾಳ, ಪಿ.ಜಿ.ಕ್ಯಾತನ, ಜಿ.ಜಿ. ಯಜುರ್ವೇದ, ಎಸ್.ಎಸ್. ಮುದಬಾಳ, ಜಿ.ಎ.ಶಿಂಧೆ, ಎಸ್. ಎ. ಬಿರಾದಾರ, ಎಸ್.ಎಸ್. ಯರಗಲ್ಲ, ವಿ.ಎಂ.ಘೋಷಣ, ಎಂ.ಎA.ಬೇಪಾರಿ, ಎಸ್.ವೈ., ಅವಟಿ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.






