ವಿಶ್ವ ಪ್ರವಾಸೋದ್ಯಮ ದಿನಾಚರಣೆ | ನಾಡಿನ ಕಲೆ, ಸಂಸ್ಕøತಿ ಉಳಿಸಿ ಬೆಳೆಸುವ ಕೆಲಸವಾಗಲಿ : ಭಾಂಡಗೆ

ಬಾಗಲಕೋಟೆ: World Tourism Day ಪ್ರಾಚೀನ ಇತಿಹಾಸಕ್ಕೆ ಹೆಸರಾದ ನಮ್ಮ ಭಾರತ ದೇಶದಲ್ಲಿನ ಕಲೆ ಸಂಸ್ಕøತಿ ಹಾಗೂ ವಾಸ್ತುಶಿಲ್ಪಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕೆಂದು ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹೇಳಿದರು.

ಕೂಡಲಸಂಗಮ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಬೇರೆ ಬೇರೆ ದೇಶದ ಸಾಕಷ್ಟು ಜನ ಅಧ್ಯಯನಕ್ಕಾಗಿ ನಮ್ಮ ಭಾರತಕ್ಕೆ ಬರುತ್ತಾರೆ. ವಿದೇಶಕ್ಕೂ ನಾನು ಸಹ ಹೋಗಿಬಂದಿದ್ದು, ಅಲ್ಲಿ ಕೇವಲ ಉತ್ತಮವಾದ ರಸ್ತೆ, ಉದ್ಯಾನವನವನ್ನು ಮಾತ್ರ ನೋಡಬಹುದೇ ವಿನಹಃ ಐಹೊಳೆ, ಪಟ್ಟದಕಲ್ಲಿನಂತಹ ಸ್ಮಾರಕರಗಳನ್ನು ನೋಡಲು ಸಿಗುವದಿಲ್ಲವೆಂದರು.

ಇದನ್ನೂ ಓದಿ: ಕಿವುಡರ 14ನೇ ರಾಜ್ಯಮಟ್ಟದ ಕ್ರೀಡಾಕೂಟ. : ಮೌನ ಕ್ರೀಡಾಕೂಟದ ಕಲರವ

World Tourism Day ವಿಜಯಪುರದಲ್ಲಿ ಗೋಲಗುಂಬಜ ಎಂಬ ಅದ್ಬುತವಾದ ಕಟ್ಟಡ ಕಾಣಬಹುದು. ಇಂತ ಬೃಹತ್ ಕಟ್ಟಡಗಳನ್ನು ಅಂದಿನ ಕಾಲದಲ್ಲಿ ಸಿಮೆಂಟ್ ಕಬ್ಬಿಣವಿಲ್ಲದೇ ನಿರ್ಮಾಣ ಮಾಡಿದ್ದಾರೆ. ಬಾದಮಿ ಗುಹಾಂತರ ದೇವಾಲಯಗಳನ್ನು ಒಂದೇ ಶಿಲೆಯಲ್ಲಿ ಕೆತ್ತನೆ ಮಾಡಿದ್ದಾರೆ. ಇಂತಹ ಕಲೆಯ ಅಧ್ಯಯಕ್ಕೆ ಲಕ್ಷಾನುಗಟ್ಟಲೆ ಖರ್ಚು ಮಾಡಿಕೊಂಡು ವಿದೇಶಿ ಪ್ರವಾಸಿಗರು ಭಾರತಕ್ಕೆ ಆಗಮಿಸುತ್ತಿದ್ದಾರೆ. ಹಿಂದೆ ನಮ್ಮ ದೇಶವನ್ನು ಆಳಿದವರು ಅವಗಳನ್ನು ಒಡೆದು ಹಾಕಿದ್ದಾರೆ. ಅಂತಹ ಶಿಲ್ಪಗಳನ್ನು ಮತ್ತೆ ಮಾಡಲು ಸಾಧ್ಯವಾಗುವದಿಲ್ಲ. ಸುಂದರ ಸಂಸ್ಕøತಿ ಹೊಂದಿದ ನಮ್ಮ ದೇಶವಾಗಿದ್ದು, ಇದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೇಲ್ಲರ ಮೇಲೆ ಇದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿ.ಪಂ ಸಿಇಓ ಶಶಿಧರ ಕುರೇರ ಮಾತನಾಡಿ ಕೂಡಲಸಂಗಮ ಇನ್ನಷ್ಟು ಅಭಿವೃದ್ದಿಗೆ ಪ್ರಾಧಿಕಾರದ ಆಯುಕ್ತರೊಂದಿಗೆ ಚರ್ಚಿಸಿ ಇಲ್ಲಿಯ ಪರಿಸರ ಬಳಕೆ ಮಾಡಿಕೊಂಡು ಅಭಿವೃದ್ದಿ ಪೂರಕವಾದ ಯೋಜನೆಯನ್ನು ರೂಪಿಸಿ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುತ್ತದೆ. ಐತಿಹಾಸಿಕ ತಾಣದಲ್ಲಿ ಅನುಕೂಲಕರವಾದ ವಾತಾವರಣ ಸೃಷ್ಟಿಸಿ ಪ್ರವಾಸಿಗರನ್ನು ಆಕರ್ಷಿಸುವಂತೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: ಗ್ರಾಮ ಆಡಳಿತ ಅಧಿಕಾರಿಗಳಿಂದ ಅನಿರ್ದಿಷ್ಟಾವಧಿ ಮುಷ್ಕರ

ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ನವನಗರದ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾದ್ಯಾಪಕ ಡಾ.ಗುರುಸ್ವಾಮಿ ಹಿರೇಮಠ ಮಾತನಾಡಿ ಅನೇಕ ಸಾಂಸ್ಕøತಿಕ, ಕಲಾತ್ಮಕ ಹಾಗೂ ವೈಜ್ಞಾನಿಕ ಕಲೆಗಳು ನಮ್ಮಲ್ಲಿವೆ. ಕೊಪ್ಪಳದ ಕಿನ್ನಾಳ ಎಂಬ ಗ್ರಾಮ ಗೊಂಬೆಗಳಿಗೆ ಜಗಪ್ರಸಿದ್ದವಾಗಿದೆ. ಅಲ್ಲಿಗೆ ರಶ್ಯಾ ದೇಶದ ಗಂಡು ಮಕ್ಕಳು ಈ ಕಲೆಯ ಅದ್ಯಯನಕ್ಕೆ ಬರುತ್ತಿರುವುದನ್ನು ನೋಡಿದರೆ ಗೊತ್ತಾಗುತ್ತದೆ. ಅಲ್ಲದೇ ನಮ್ಮಲ್ಲಿರುವ ಆಹಾರ ಪದ್ದತಿ, ಆರೋಗ್ಯ ಪದ್ದತಿಯನ್ನು ಕಲಿಯಲು ಬರುತ್ತಿದ್ದಾರೆ. ವಿದೇಶಿಗರು ಈ ದೇಶಕ್ಕೆ ಬಂದು ಅರೆ ಬೆತ್ತಲೇಯಾಗಿ ಅಲೆದಾಡುತ್ತಾರೆ. ಕಾರಣ ಇಲ್ಲಿನ ಬಿಸಿಲಿನ ಕಣಗಳು ಚರ್ಮಕ್ಕೆ ತಾಟಿ ಚರ್ಮ ರೋಗ ನಿವಾರಣೆ ಮಾಡಿಕೊಳ್ಳುತ್ತಾರೆ. ದೇಶಕ್ಕೆ ಆಗಮಿಸಿದ ಪ್ರವಾಸಿಗರಿಗೆ ಸುರಕ್ಷತೆ, ಸ್ವಚ್ಛತೆ ಕೊಡುವ ಕೆಲಸವಾಗಬೇಕು ಎಂದರು.

ಈ ಸಂದರ್ಭದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಪ್ರಬಂಧ, ರಸಪ್ರಶ್ನೆ, ವಿತ್ರಕಲೆ ಹಾಗೂ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು. ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷೆ ಗಂಗಮ್ಮ ರಾಂಪೂರ, ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಗೋಪಾಲ ಹಿತ್ತಲಮನಿ, ಪಂಚಾಯತ ಅಭಿವೃದ್ದಿ ಅಧಿಕಾರಿ ದೀಪಾ ಬೆನಕೊಟಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.


Share the Post:

ಇತ್ತೀಚಿನ ಸುದ್ದಿಗಳು

Senior Students' Association image

Vijayapura News : ಪ್ರಾಚೀನ ಕಾಲದಿಂದ ಪ್ರಸ್ತುತ ಕಾಲದವರೆಗೂ ಪಾವಿತ್ರತೆ ಉಳಿಸಿಕೊಂಡ ವೃತ್ತಿ ಶಿಕ್ಷಕರ ವೃತ್ತಿ; ಅಶೋಕ್ ಹಂಚಲಿ

ವಿಜಯಪುರ: ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಿರಿಯ

Read More »