ಸಿಡಿ ಪ್ರಕರಣ: ರಾಜ್ಯ ಮಹಿಳಾ ಆಯೋಗ ಸಂತ್ರಸ್ಥ ಯುವತಿಯ ರಕ್ಷಣೆ

0
192

ಬೆಂಗಳೂರು ಮಾ 14: ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮಿಳಾ ನಾಯ್ಡು, ಯುವತಿ ವಿಡಿಯೋ ಹೇಳಿಕೆಯಲ್ಲಿ ತನಗೆ ಬೆದರಿಕೆ ಇರುವುದಾಗಿ, ರಕ್ಷಣೆ ನೀಡುವಂತೆ ಕೋರಿದ್ದಾಳೆ. ಅಲ್ಲದೇ ಪ್ರಕರಣದಿಂದ ತನಗೆ ಹಾಗೂ ತನ್ನ ಕುಟುಂಬ ಎದುರಿಸುತ್ತಿರುವ ನೋವು, ಸಮಸ್ಯೆ ಬಗ್ಗೆ ವಿವರಿಸಿದ್ದಾಳೆ. ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಹೇಳಿದ್ದಾಳೆ. ಈ ಹಿನ್ನೆಲೆಯಲ್ಲಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮೋಟೋ ಕೇಸ್ ದಾಖಲಿಸಿಕೊಳ್ಳಲಾಗಿದ್ದು, ಯುವತಿ ಹಾಗೂ ಆಕೆಯ ಕುಟುಂಬಕ್ಕೆ ರಕ್ಷಣೆ ನೀಡಲು ಸಿದ್ಧ ಎಂದು ಹೇಳಿದ್ದಾರೆ.

ಯುವತಿ ಹಾಗೂ ಆಕೆ ಕುಟುಂಬದವರು ಧೈರ್ಯಕಳೆದುಕೊಳ್ಳಬಾರದು. ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ಎಲ್ಲವನ್ನೂ ಎದುರಿಸಬೇಕು ಎಂದು ಧೈರ್ಯ ತುಂಬಿದ್ದಾರೆ.


ambedkar image

LEAVE A REPLY

Please enter your comment!
Please enter your name here