ಪತ್ರಿಕೋಧ್ಯಮ ಯಾವುದೇ ಇತರ ಉಧ್ಯಮಗಳಂತೆ ಲಾಭ-ನಷ್ಟಗಳ ಲೆಕ್ಕಾಚಾರದ ಉಧ್ಯಮವಲ್ಲ. ಅದೊಂದು ಜವಾಬ್ದಾರಿಯುತ ಕರ್ತವ್ಯಗಳನ್ನು ನಿರ್ವಹಿಸುವ ಹೊಣೆಗಾರಿಕೆ ಹೊರುವ ವೃತ್ತಿ. ಸಮಾಜದ, ಸರ್ಕಾರದ ಓರೆಕೊರೆಗಳ ಮೇಲೆ ಬೆಳಕು ಚಲ್ಲುವ ದೀವಟಿಗೆ. ನ್ಯಾಯದ, ಸತ್ಯದ ಪರ ನಿಲ್ಲಬೇಕಾದ ಅಂತಃಸಾಕ್ಷಿ. ಇಂತಹ ಉದಾತ್ತ ದ್ಯೇಯೋದ್ದೇಶ ಇಟ್ಟುಕೊಂಡು ಆರಂಭಿಸಿದ ಪತ್ರಿಕೆ “ಕರಿಜನ” ಪಾಕ್ಷಿಕ ಪತ್ರಿಕೆ.
ಕಳೆದ 7-8 ವರ್ಷಗಳಿಂದ ಏಳು ಬೀಳುಗಳ ಮಧ್ಯ ಸಾಗಿ ಬಂದಿದ್ದು ನಿಜಕ್ಕೂ ಸಂತಸದ ಸಂಗತಿ. ಆತ್ಮೀಯ ಓದುಗರು ಹಿತೈಷಿಗಳು ಪ್ರೋತ್ಸಾಹ,ಬೆಂಬಲ ಇರುವವರೆಗೆ ನಿರಂತರವಾಗಿ ನ್ಯಾಯ, ಸತ್ಯ, ನೊಂದ ಜನರ ಧ್ವನಿಯಾಗಿ ಮುಂದೆಯೂ ಇರುತ್ತದೆ.
ಆತ್ಮೀಯ ಓದುಗರ ಮತ್ತು ಹಿತೈಷಿಗಳ ನಿರಂತರ ಒತ್ತಾಯ ಮತ್ತು ಬೇಡಿಕೆಯ ಕಾರಣದಿಂದ ಇಷ್ಟು ವರ್ಷ ಕೇವಲ ಮುದ್ರಣಗೊಂಡು ಓದುಗರನ್ನು ತಲುಪುತ್ತಿದ್ದ “ಕರಿಜನ” ಪಾಕ್ಷಿಕ ಪತ್ರಿಕೆ ಇನ್ನು ಮುಂದೆ ವೆಬ್ ಸೈಟ್ ನಲ್ಲೂ ಓದುಗರಿಗೆ ಲಭ್ಯವಾಗಲಿದೆ. ತಮ್ಮ ಹೊಗಳಿಕೆ, ಟೀಕೆ, ವಿಮರ್ಷೆಗಳೆಲ್ಲವೂ ನಮಗೆ ಪುರಸ್ಕಾರಗಳು. ಧನ್ಯವಾದಗಳು.