ವಿಜಯಪುರ | ಭಗತ್ ಸಿಂಗ್‌ರ ದೇಶ ಪ್ರೇಮ ಯುವಕರಿಗೆ ಪ್ರೇರಣೆ | ಮಲ್ಲಿಕಾರ್ಜುನ್ ಭೃಂಗಿಮಠ

ಅಪ್ರತಿಮ ಹೋರಾಟಗಾರ ಕ್ರಾಂತಿಯ ಕಿಡಿ ಭಗತ್ ಸಿಂಗ್‌ರ ದೇಶ ಪ್ರೇಮ ಯುವಕರಿಗೆ ಪ್ರೇರಣೆ ಎಂದು ನ್ಯಾಯವಾದಿ ಸಾಹಿತಿ ಮಲ್ಲಿಕಾರ್ಜುನ್ ಭೃಂಗಿಮಠ ಹೇಳಿದರು.

0
57
Bhagat Singh Jayanti image

ವಿಜಯಪುರ: ರಕ್ತದ ಕಣಕಣಗಳಲ್ಲಿಯೂ ರಾಷ್ಟ್ರ ಪ್ರೇಮವನ್ನು ತುಂಬಿಕೊಂಡು ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಪ್ರಾಣವನ್ನೇ ಮುಡುಪಾಗಿಟ್ಟ ಅಪ್ರತಿಮ ಹೋರಾಟಗಾರ ಕ್ರಾಂತಿಯ ಕಿಡಿ ಭಗತ್ ಸಿಂಗ್‌ರ Bhagat Singh Jayanti ದೇಶ ಪ್ರೇಮ ಯುವಕರಿಗೆ ಪ್ರೇರಣೆ ಎಂದು ನ್ಯಾಯವಾದಿ ಸಾಹಿತಿ ಮಲ್ಲಿಕಾರ್ಜುನ್ ಭೃಂಗಿಮಠ ಹೇಳಿದರು.

ನಗರದ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಸ್ವಾಮಿ ವಿವೇಕಾನಂದ ಯುವ ಬ್ರಿಗೇಡ್ ಮತ್ತು ಭಾರತ ವೇದಿಕೆ ಚಾರಿಟೇಬಲ್ ಫೌಂಡೇಶನ್ ಸಹಯೋಗದಲ್ಲಿ ಹಮ್ಮಿಕೊಂಡ ದೇಶಪ್ರೇಮಿ ಭಗತ್ ಸಿಂಗನ ಜಯಂತೋತ್ಸವದ ಕಾರ್ಯಕ್ರಮದಲ್ಲಿ ಭಗತ್ ಸಿಂಗನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಇದನ್ನೂ ಓದಿ: ಬಬಲೇಶ್ವರದಲ್ಲಿ ಶಿಕ್ಷಕರ ದಿನೋತ್ಸವ 2024 ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭ ಕಾರ್ಯಕ್ರಮ

ಮುಖ್ಯ ಅತಿಥಿ ಸಾಹಿತಿ ಪ್ರೋ. ಎ ಎಚ್ ಕೊಳಮಲಿ ಸ್ವಾತಂತ್ರ ಹೋರಾಟಗಾರ ಭಗತ್ ಸಿಂಗನ Bhagat Singh Jayanti ಕುರಿತು ವಿಶೇಷ ಉಪನ್ಯಾಸವನ್ನು ನೀಡಿ ದೇಶಕ್ಕೆ ಸ್ವಾತಂತ್ರ್ಯವನ್ನು ತಂದು ಕೊಡುವುದೇ ಭಗತ್ ಸಿಂಗನ ಗುರಿ ಮತ್ತು ಛಲವಾಗಿತ್ತು ಬಾಲದಿಂದಲೂ ದೇಶಪ್ರೇಮವನ್ನು ಒಳಗೊಂಡಿದ್ದನು, ದುಷ್ಟ ಬ್ರಿಟಿಷರನ್ನು ಹೊಡೆದು ಓಡಿಸುವುದೇ ನನ್ನ ಬಲವಾದ ಛಲ ಎಂದು ಹೋರಾಡಿ ಕೇವಲ 24 ವರ್ಷದಲ್ಲಿ ದೇಶಕ್ಕಾಗಿ ಪ್ರಾಣವನ್ನು ತ್ಯಾಗ ಮಾಡಿದ ಅಪ್ಪಟ ದೇಶಪ್ರೇಮಿ ಭಗತ್ ಸಿಂಗನ ದೇಶ ಅಭಿಮಾನ ಮೆಚ್ಚುವಂತದ್ದು ಇಂದಿನ ಯುವಕರು ದೇಶಕ್ಕಾಗಿ ದುಡಿಯಬೇಕು ದೇಶಕ್ಕಾಗಿ ಮಡಿಯಬೇಕು ತಾಯಿ ಹಾಗು ತಾಯಿ ನಾಡಿಗಾಗಿ ಹೋರಾಡುವ ಯುವ ಪಡೆಯ ಅವಶ್ಯಕತೆ ಇದೆ ಎಂದು ವಿಶೇಷ ಉಪನ್ಯಾಸದಲ್ಲಿ ಹೇಳಿದರು.

ಇದನ್ನೂ ಓದಿ: ವಿಜಯಪುರ ಕೋರ್ಟ್‌ನಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ಅರ್ಜಿ ಆಹ್ವಾನ

ಫೌಂಡೇಶನದ ಅಧ್ಯಕ್ಷ ಸುನಿಲ ಜೈನಾಪುರ ಪ್ರಾಸ್ತಾವಿಕವಾಗಿ ಮಾತನಾಡಿ ದೇಶದ ಭವಿಷ್ಯ ಯುವಕರ ಕೈಯಲ್ಲಿದೆ ದೇಶ ಕಟ್ಟುವಲ್ಲಿ ಯುವಕರು ಕಂಕಣ ಬದ್ಧರಾಗಿ ನಿಲ್ಲಬೇಕು ಇಂದಿನ ಯುವಕರಲ್ಲಿ ಭಗತ್ ಸಿಂಗನ ದೇಶ ಅಭಿಮಾನ ಬೆಳೆಯಬೇಕೆಂದರು.

ಗುರು ಗಚ್ಚಿನ್‍ಮಠ, ಸಂಗಮೇಶ್ ಜಾಧವ, ಶಂಕರ್ ಹಾಲಳ್ಳಿ, ಸಂತೋಷ ಹೆಗಡೆ,ಅಮಿತ ನಾಯ್ಕೋಡಿ, ಸಂಜು ಹೂಗಾರ್,ಕಿರಣ ಕೆಂಗನಗುತ್ತಿ ಅವಿನಾಶ್ ಮೆಹಿದ್ರಕರ್, ವಿಜಯ್ ಮುರಗಾನೂರ, ಸುಧೀರ್, ಪ್ರಸಾದ್ ಪಾಟೀಲ್, ಪ್ರೇಮ ನಿಡೋಣಿ, ಯೋಗೇಶ್ ಹೊನಕೇರಿ, ಮುಂತಾದವರು ಉಪಸ್ಥಿತರಿದ್ದರು,


LEAVE A REPLY

Please enter your comment!
Please enter your name here