ಜಮಖಂಡಿ: ಸಾಹಿತ್ಯ ಸೋಗಡನ್ನು ಅರ್ಥೈಸಿಕೊಳ್ಳಲು ಹಳಗನ್ನಡ ಜ್ಞಾನ ಅವಶ್ಯವಾಗಿದ್ದು ಹಳಗನ್ನಡ Old Kannada literature ಬಗ್ಗೆ ನೀರ್ಲಕ್ಷ ಬೇಡ ಹಳಗನ್ನಡದ ಜ್ಞಾನ ಅವಶ್ಯ ಎಂದು ಶಾಸಕ ನಾಡೋಜ ಡಾ.ಜಗದೀಶ ಗುಡಗುಂಟಿ ಹೇಳಿದರು.
ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಬಾಗಲಕೋಟೆ, ಕಸಾಪ ತಾಲೂಕ ಘಟಕ ಜಮಖಂಡಿ, ಬಾಗಲಕೋಟೆ ಜಿಲ್ಲಾ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಹಾಗೂ ಜಮಖಂಡಿಯ ಬಾಲಕೆಯರ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯ ಪ್ರೌಢಶಾಲಾ ವಿಭಾಗ ಇವರ ಸಹಯೊಗದಲ್ಲಿ ಶುಕ್ರವಾರ ಪ್ರೌಡಶಾಲಾ ವಿಭಾಗದ ಜ್ಞಾನಸಭಾಂಗಣದಲ್ಲಿ ಡಾ.ಡಿ.ಎಲ್.ನರಸಿಂಹಚಾರ್ ದತ್ತಿನಿಧಿ ಅಂಗವಾಗಿ ಕನ್ನಡ ಶಿಕ್ಷಕರಿಗೆ 4 ದಿನಗಳ ‘ಹಳಗನ್ನಡ ಸಾಹಿತ್ಯ ಬೋಧನಾ ತರಬೇತಿ ಶಿಬಿರಕ್ಕೆ Old Kannada literature ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಇದನ್ನೂ ಓದಿ: Vijayapura News | ಶಿಕ್ಷಣ ಕ್ಷೇತ್ರಕ್ಕೆ ಮೌಲಾನಾ ಅಜಾದ ಅವರ ಕೊಡುಗೆ ಅಪಾರ – ಪ್ರೊ.ಸುರೇಶ ಸಮ್ಮಸಗಿ
ದೇಶದಲ್ಲಿ ಶ್ರೇಷ್ಠವಾದ ನಮ್ಮ ಕನ್ನಡ ಭಾಷೆಗೆ ಇಂದು ದಕ್ಕೆ ತರುವಂತ ಕಾಲಗಟ್ಟದಲ್ಲಿ ನಾವಿದ್ದು, ಅದರಲ್ಲಿ ಹಳಗನ್ನಡ ವಿಷಯವನ್ನು ಅರ್ಥೈಸಿಕೊಂಡು ಬೋಧನೆ ಮಾಡುವುದು ಕಷ್ಟಸಾಧ್ಯವಾಗಿರುವ ಇಂದಿನ ಸಂದರ್ಭದಲ್ಲಿ ಹಂಪಿ ವಿಶ್ವವಿದ್ಯಾಲಯದ ಹಸ್ತಪ್ರತಿಶಾಸ್ತ್ರ ವಿಭಾಗದ ಕಾರ್ಯ ಶ್ಲಾಘನೀಯ
ಹಳಗನ್ನಡದ ಭಾಷಾಕೌಶಲ್ಯವನ್ನು ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯ ಭಾಷಾ ಶಿಕ್ಷಕರ ಮೇಲಿದೆ, ಪ್ರಾಚೀನತೆ ಹೊಂದಿದ ಕನ್ನಡ ಸಂಸ್ಕøತಿ ಉಳಿಸಿ ಬೆಳಸಬೇಕಾಗಿದೆ, ಹಳಗನ್ನಡ ಸಾಹಿತ್ಯದ ಗಟ್ಟಿತನ ಬಿಟ್ಟುಹೋದರೆ ಮುಂದಿನ ಪೀಳಿಗೆಗೆ ಕನ್ನಡ ಕಲಿಸುವುದು ಕಠಿಣವಾಗುತ್ತದೆ.ಆದ್ದರಿಂದ ಹಳಗನ್ನಡ ಬಗ್ಗೆ ನೀರ್ಲಕ್ಷಬೇಡಾ ಎಂದರು.
ವಿಶ್ರಾಂತ ಕುಲಪತಿಗಳು ಭಾಷಾ ವಿದ್ವಾಂಸರಾದ ಡಾ.ಎ.ಮುರಗೆಪ್ಪ ಅವರು ತಮ್ಮ ಆಶಯ ನುಡಿ ಮಾತನಾಡಿ ಬೇರೆ ಭಾಷೆಗಳ ಪ್ರಭಾವದ ಒತ್ತಡ ಸಮಯದಲ್ಲಿ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ನಮ್ಮ ಶಿಕ್ಷಕರು ಅರಿತುಕೊಂಡು ಪಾಠ ಬೋಧನೆ ಮಾಡುವ ಪರಂಪರೆ ರೂಢಿಸಿಕೊಳ್ಳಬೇಕು. ಮಕ್ಕಳ ಕಲಿಕೆಯಲ್ಲಿ ಭಾಷಾ ಪ್ರೌಢಿಮೆ ಮುಖ್ಯವಾಗಿದ್ದು, ಹಳಗನ್ನಡ ಸಾಹಿತ್ಯದಲ್ಲಿರುವ ಪದಗಳನ್ನು ಬಿಡಿಸಿ ಓದುವ ಭಾಷಾ ಅಭಿರುಚಿಯನ್ನು ಶಿಕ್ಷಕರು ಮಕ್ಕಳಿಗೆ ತಿಳಿಸಿಕೊಡುವ ಕೆಲಸ ಮಾಡಬೇಕು ಎಂದರು.
ಇದನ್ನೂ ಓದಿ: Vijayapura News | ಭಾರತೀಯ ವೈದ್ಯಕೀಯ ಸಂಘದಿಂದ ಸಾರ್ವಜನಿಕ ಆರೋಗ್ಯ ವಿಭಾಗಕ್ಕೆ ಆಯ್ಕೆ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹಂಪಿ ಕನ್ನಡ ವಿಶ್ವವಿದ್ಯಾಯದ ಕುಲಪತಿಗಳಾದ ಡಾ.ಡಿ.ವಿ.ಪರಮಶಿವಮೂರ್ತಿ ಅವರು ಮಾತನಾಡಿ ಕಾಲಕ್ರಮೇಣ ಶಿಕ್ಷಕರು ಸಂಶೋಧನಾ ಪ್ರಬಂದಗಳ ಅಧ್ಯಯನ ಅವಲೋಕಿಸಿ ಹೆಚ್ಚಿನ ಜ್ಞಾನವನ್ನು ಮಕ್ಕಳಿಗೆ ನೀಡಬೇಕಾಗಿದೆ, ಹಳಗನ್ನಡ ಸಾಹಿತ್ಯವೆಂದರೆ ಅದು ನಮ್ಮ ಪೂರ್ವಜರ ಇತಿಹಾಸ, ಕನಸು,ಪರಂಪರೆಯನ್ನು ಹಾಗೂ ಪ್ರಾಚೀನತೆ ಅದ್ಯಯನ ಮಾಡಿದಂತೆ, ಹೊಸಗನ್ನಡದಲ್ಲಿ ಇಲ್ಲದಂತಹ ಅನೇಕ ಅಂಶಗಳನ್ನು ಭಾಷಾ ಗಟ್ಟಿತನವನ್ನು ಹಳಗನ್ನಡದಲ್ಲಿ ಕಾಣಬಹುದಾಗಿದೆ, ಆದ್ದರಿಂದ ಇಂದಿನ ಶಿಕ್ಷಕರಿಗೆ ಹಳಗನ್ನಡ ಸಾಹಿತ್ಯ ಬೋಧನೆ ಶಿಬಿರ ಅಗತ್ಯವಾಗಿದೆ ಎಂದರು.
ಕನ್ನಡ ವಿ.ವಿ ಹಸ್ತಪ್ರತಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರು, ಶಿಬಿರದ ಮುಖ್ಯಸ್ಥರಾದ ಡಾ.ವೀರೇಶ ಬಡಿಗೇರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಬಾಗಲಕೋಟೆ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಆನಂದ ದೇಶಪಾಂಡೆ, ಶಿರಸಂಗಿ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಅಧ್ಯಕ್ಷರಾದ ಪ್ರೊ.ಪಿ.ಬಿ.ಬಡಿಗೇರ, ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷರಾದ ಶಿವಾನಂದ ಶೆಲ್ಲಿಕೇರಿ, ಸಂತೋಷ ತಳಕೇರಿ.ಜಮಖಂಡಿ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ.ಕೆ.ಬಸನ್ನವರ ಉಪ ಪ್ರಾಚಾರ್ಯರಾದ ಮಹಾಂತೇಶ ನರಸನಗೌಡರ.ಹಿರಿಯ ಸಾಹಿತಿ ತಾತಾಸಾಹೇಬ್ ಬಾಂಗೆ, ಸಿದ್ದಣ್ಣ ಉತ್ನಾಳ, ಜಿಲ್ಲಾ ಗೌರವ ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಳನ್ನವರ, ಸಂಗಮೇಶ ಬಡಿಗೇರ, ಹಾಗೂ ನಾಡಿನ ವಿವಿಧ ಭಾಗಗಳಿಂದ ವಿದ್ವಾಂಸರು, ಸಂಪನ್ಮೂಲ ವ್ಯಕ್ತಿಗಳು ಶಿಬಿರದಲ್ಲಿ ಉಪಸ್ಥಿತರಿದ್ದರು. ಬಿ,ಸಿ,ಮಲಕನ್ನವರ,ಎ.ಎಸ್.ಬಾಗಿ ಕಾರ್ಯಕ್ರಮ ನಿರೂಪಿಸಿದರು, 4ದಿನಗಳ ಕಾಲ ನಡೆಯುವ ಶಿಬಿರದಲ್ಲಿ 80 ಜನ ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ,
ಕಾರ್ಯಕ್ರಮಕ್ಕೂ ಮುಂಚೆ ನಗರದ ರಮಾ ನಿವಾಸದಿಂದ ಶಿಬಿರದ ಸ್ಥಳದ ವರೆಗೆ ಕನ್ನಡ ಭುವನೇಶ್ವರಿ ಮೇರವಣಿಗೆ ಜರುಗಿತು, ಕಾರ್ಯಕ್ರಮದ ಪ್ರಾರಂಭದಲ್ಲಿ ಓಲೆ ಮಠದ ಲಿಂಗೈಕ್ಯ ಡಾ.ಚೆನ್ನಬಸವ