ವಿಜಯಪುರ: ಹಬ್ಬದ ಆಚರಣೆ ಹೆಸರಲ್ಲಿ ವ್ಯಾಪಾರಿಗಳು, ಉದ್ಯಮಿಗಳು ಹಾಗೂ ಅಂಗಡಿಕಾರರಿಂದ ಪೊಲೀಸ ರಿಂದ ಹಣ ವಸೂಲಿ ತಡೆಯುವ ಕುರಿತು ಕರ್ನಾಟಕ ರಾಷ್ಟ್ರ ಸಮಿತಿಯ ವತಿಯಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರು, ವಿಜಯಪುರ ಇವರಿಗೆ ಮನವಿ ಸಲ್ಲಿಸಲಾಯಿತು.
ಭಾರತ ಬಹುತ್ವದ ದೇಶ. ಅನೇಕ ಧರ್ಮಗಳು, ಆಚರಣೆಗಳು, ಸಂಪ್ರದಾಯಗಳಿಂದ ಕೂಡಿದ ಭಾರತದಲ್ಲಿ ಭಾವೈಕ್ಯತೆಯಿಂದ, ಸೌಹಾರ್ದತೆಯಿಂದ ಹಬ್ಬ ಹರಿದಿನಗಳನ್ನು ಆಚರಿಸಲಾಗುತ್ತದೆ. ಅನೇಕ ವ್ಯಾಪಾರಿಗಳು ಮತ್ತು ಉದ್ಯಮಿಗಳು ತಮ್ಮ ತಮ್ಮ ಅಂಗಡಿ ಮುಂಗಟ್ಟುಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ಅದೇ ರೀತಿ ಸರ್ಕಾರಿ ಕಚೇರಿಗಳಲೂ , ಹಬ್ಬ ಹರಿದಿನಗಳನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಆದರೆ ಕೆಲವು ಪೊಲೀಸ ರು ಹಬ್ಬ – ಹರಿದಿನಗಳ ಹೆಸರಲ್ಲಿ ಹಣ ವಸೂಲಿ ದಂಧೆಗಿಳಿದಿರುವ ಆರೋಪ ಕೇಳಿ ಬರುತ್ತಿದೆ.
ಇದನ್ನೂ ಓದಿ: ಶಿಕ್ಷಕರ ದಿನೋತ್ಸವ | 19 ಜನ ಪ್ರಾಂಶುಪಾಲರಿಗೆ ಸನ್ಮಾನ ಗುಣಾತ್ಮಕ ಶಿಕ್ಷಣ ನೀಡಿ ರಾಜ್ಯದ ಗಮನ ಸೆಳೆದಿರುವುದು ಶ್ಲಾಘನೀಯ
ಪ್ರತಿ ವರ್ಷ ದಸರಾ ಆಚರಣೆಯ ಆಯುಧ ಪೂಜೆ ಸಂದರ್ಭದಲ್ಲಿ ಪೊಲೀಸ ಇಲಾಖೆಯಲ್ಲಿ ವಿಶೇಷ ರೀತಿಯಲ್ಲಿ ಪೂಜೆ ನೆರವೇರಿಸಲಾಗುತ್ತದೆ. ಆದರೆ ಈ ಆಚರಣೆಗೆ ವ್ಯಾಪಾರಿಗಳಿಂದ ಉದ್ಯಮಿಗಳಿಂದ ಖುಷಿ ಹೆಸರಲ್ಲಿ ಸಾವಿರಾರು ರೂಪಾಯಿ ಬಲವಂತವಾಗಿ ಪಡೆದುಕೊಳ್ಳಲಾಗುತ್ತಿದೆ ಎಂದು ಅಂಗಡಿಕಾರರು ಅಳಲು ತೋಡಿಕೊಳ್ಳುತ್ತಿದ್ದಾರೆ. ಪೊಲೀಸ್ ಸಿಬ್ಬಂದಿಯ ಈ ಕಾನೂನು ಬಾಹಿರ ಕೃತ್ಯದಿಂದಾಗಿ ವ್ಯಾಪಾರಸ್ಥರು ಯಾರಾದರೂ ಈ ಆಚರಣೆಗಳು ಬಂದವೋ ಎಂದು ಶಪಿಸುವಂತಾಗಿದೆ.
ಇದೊಂದು ಹಿಂಸೆಯಾಗಿ ಪರಿಣಮಿಸಿದ್ದು, ಬಹಿರಂಗವಾಗಿ ಹೇಳಿಕೊಳ್ಳಲೂ ಆಗದೇ ಹಣ ಕೊಡುವ ಸಾಮಥ್ರ್ಯವೂ ಇಲ್ಲದೇ ಒಳಗೊಳಗೇ ಸಂಕಟ ಅನುಭವಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ವ್ಯಾಪಾರಸ್ಥರು ಕೆಆರ್ಎಸ್ ಪಕ್ಷದ ಮುಂದೆ ತಮ್ಮ ಸಂಕಟ ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ವಿಜಯಪುರ ಜಿಲ್ಲಾ ಹಮಾಲರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯ
ಹೀಗಾಗಿ ದಕ್ಷ ಪ್ರಾಮಾಣಿಕತೆಗೆ ಹೆಸರಾದ ಕರ್ನಾಟಕ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಉದ್ಯಮಿಗಳು ವ್ಯಾಪಾರಿಗಳಿಂದ ಹಣ ವಸೂಲಿ ಮಾಡುವುದನ್ನು ತಡೆಯಬೇಕೆಂದು ಆಗ್ರಹಪಡಿಸಿದರು. ಈ ಸಮಯದಲ್ಲಿ ಅಬ್ದುಲ ಹಮೀದ ಇನಾಮದಾರ, ದುರ್ಗಪ್ಪ ಬೂದಿಹಾಳ ಶ್ರೀನಿವಾಸ ಹಿಪ್ಪರಗಿ, ರಜಿಯಾ ಬಿಜಾಪುರ್, ಪ್ರವೀಣ್ ರಾಯಗೊಂಡ ಇನ್ನಿತರರು ಉಪಸ್ಥಿತರಿದ್ದರು.