ವಿಜಯಪುರ : ದಿ. ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸೇಬಿಲಿಟಿ (ಎಪಿಡಿ) ಸಂಸ್ಥೆಯ ವಿಜಯಪುರ ಎಚ್.ಸಿ.ಎಲ್. ಪೌಂಡೇಷನ್, ಅಲ್ ಅಮೀನ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವಿಜಯಪುರ ಜಿಲ್ಲಾ ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವಿಜಯಪುರ, ಕನಾಟಕ ರಾಜ್ಯ ಬೆನ್ನುಹುರಿ ಅಪಘಾತದ ಅಂಗವಿಕಲರ ಸಂಘ ವಿಜಯಪುರ ಹಾಗೂ ಅನೌಪಾಚಾರಿಕ ಶಿಕ್ಷಣ ಸಂಸ್ಥೆ ವಿಜಯಪುರ ಸಹಯೋಗದೊಂದಿಗೆ, ವಿಶ್ವ ಬೆನ್ನಹುರಿ ಅಪಘಾತ ದಿನಾಚರಣೆಯ ಅಂಗವಾಗಿ 3 ದಿನ ಬೆನ್ನು ಹುರಿ ಅಪಘಾತಕ್ಕೋಳಗಾದ ವ್ಯಕ್ತಿಗಳಿಗೆ ಆರೋಗ್ಯ ತಪಾಸಣೆ ಮತ್ತು ವ್ಯಾಯಾಮ ತರಬೇತಿ ಕಾರ್ಯಕ್ರಮವು ಅಲ್-ಅಮೀನ ಆಸ್ಪತ್ರೆಯಲ್ಲಿ ಆಗಷ್ಟ 26 ರಿಂದ 28 ರವರೆಗೆ ಜರುಗಿತು.
ಇದನ್ನೂ ಓದಿ: ಮಹಿಳೆ ಕಾನೂನು ಅರಿವು: ನಾಯಕತ್ವ ಗುಣ – ನಾಗಲಕ್ಷ್ಮೀ
ಕಾರ್ಯಕ್ರಮವನ್ನು ಮೆಡಿಕಲ್ ಅಲ್ ಅಮೀನ ಆಸ್ಪತ್ರೆಯಲ್ಲಿ ಸುಪ್ರಿಡೆಂಟ್ ಆದ ಡಾ. ಜಿಲಾಣಿ ಅವಟಿ ಮಾತನಾಡಿ, ಬೆನ್ನುಹುರಿ ಅಪಘಾತ ಆದ ವ್ಯಕ್ತಿಗಳನ್ನು ಹೊರತರಲು ಹಾಗೂ ಆರೋಗ್ಯ ತಪಾಸಣೆ ಹಾಗೂ ಸ್ವಯಂ ಉದ್ಯೋಗ ಹಾಗೂ ಇನ್ನೀತರರ ಕಾರ್ಯಕ್ರಮಗಳನ್ನು ಎಪಿಡಿ ಸಂಸ್ಥೆ ಮಾಡುತ್ತಾ ಬಂದಿದೆ. ಈ ಸಂಸ್ಥೆಯುಪ್ರಮಾಣಿಕವಾಗಿ 12 ವರ್ಷಗಳಿಂದ ಸತತವಾಗಿ ಕಾರ್ಯಕ್ರಮ ನಿರ್ವಹಿಸುತ್ತಿದೆ. ನಾವು ಪ್ರತಿವರ್ಷ ಎಪಿಡಿಗೆ ಸಹಕಾರ ನೀಡುತ್ತಾ ಬಂದಿರುತ್ತೇವೆ ಇನ್ನು ಮುಂದೆ ಯಾವುದೇ ರೀತಿ ಸಹಕಾರ ಮಾಡುತ್ತೇವೆ ಎಂದು ಭವರಸೆ ನೀಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ವಿಕಲ ಚೇತನ ಮತ್ತು ಹಿರಿಯ ನಾಗರಿಕರು ಸಬಲೀಕರಣ ಇಲಾಖೆಯ ಅಧಿಕಾರಿಗಳಾದ ಶ್ರೀಮತಿ ಸವಿತಾ ಕಾಳೆ ಮಾತನಾಡಿ, ವಿಕಲಚೇತನರಿಗೆ ಅನುಕಂಪ ಬೇಡಾ ಅವಕಾಶ ಕೊಡಿ ಎಂದು ತಿಳಿಸಿದರು. ಮತ್ತು ಇವರೆಲ್ಲರೂ ಮಾನಸಿಕವಾಗಿ ಸದೃಢರಿದ್ದಾರೆ. ಎಲ್ಲಾ ಕೆಲಸಗಳನ್ನು ಮಾಡುವ ಚಲ ಅವರಲ್ಲಿದೆ. ನೀವು ಮನಸ್ಸು ಮಾಡಿದರೆ ಏನೆಲ್ಲಾ ಕೆಲಸಗಳನ್ನು ಮಾಡಲು ಶಕ್ತಿ ಇದೆ ಎಂದು ಆತ್ಮ ವಿಶ್ವಾಸ ತುಂಬಿದರು. ಹಾಗೂ ಎಲ್ಲಾ ಇಲಾಖೆಯಲ್ಲಿ ಇರುವ 5% ಅನುದಾನದ ಬಗ್ಗೆ ಮಾಹಿತಿ ನೀಡಿದರು.
ಏನೇ ನಿಮ್ಮ ಕೆಲಸ ಕಾರ್ಯಗಳಿದ್ದಾರೆ. ತೊಂದರೆಗಳಿದ್ದರೆ. ನನ್ನನ್ನು ಖುದ್ದಾಗಿ ಬೇಟಿಯಾಗಿ ನಿಮ್ಮ ಸಮಸ್ಯೆ ಪರಿಹಾರ ಮಾಡಿಕೊಡುತ್ತೆನೆ ಎಂದರು. ನಿಮ್ಮ ಸಹಾಯಕ್ಕೆ ನಿಮ್ಮೊಂದಿಗೆ ನಾನು ಯಾವಾಗಲು ಜೊತೆಯಾಗಿ ಇರುತ್ತೇವೆ ಎಂದು ತಿಳಿಸಿದರು. ಅನೌಪಚಾರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಪಾದರ್ ಟಿಓಲ್ ಮಚಾದೋ ಇವರು ಮಾತನಾಡಿ, ಅಲ್-ಅಮೀನ ಆಸ್ಪತ್ರೆಯಲ್ಲಿ ಬೆನ್ನಹುರಿ ಅಪಘಾತ ವ್ಯಕ್ತಿಗಳನ್ನು ಉದ್ದೇಶಿಸಿ ಮಾತನಾಡಿದರು. ಹಾಗೂ ಎಪಿಡಿ ಸಂಸ್ಥೆ ಬಗ್ಗೆ & ಅಲ ಅಮೀನ ಆಸ್ಪತ್ರೆ ಬಗ್ಗೆ ಮಾತನಾಡಿದರು. ಇದರ ಜೊತೆಗೆ 30 ಜನ ಪಲಾನುಭವಿಗಳಿಗೆ ನ್ಯೂಟ್ರೇಶನ್ ಫುಡ್ ವಿತರಣೆ ಮಾಡಿದರು. ಯಾವುದೇ ರೀತಿ ಸಹಾಯವನ್ನು ಕೇಳಿದರೆ ನಿಮ್ಮೊಂದಿಗೆ ನಾವೆಲ್ಲರೂ ಇರುತ್ತೇವೆ ಎಂದು ಧ್ಯೇರ್ಯ ತುಂಬಿದರು.
ಇದನ್ನೂ ಓದಿ: ಎಫ್ಎಕ್ಯೂ ಗುಣಮಟ್ಟ: ಹೆಸರುಕಾಳು 8682 ರೂ.,ಸೂರ್ಯಕಾಂತಿ 7280 ರೂ.
ರೇಮೆನ್ ಪೌಂಡೇಶನ್ ಸಂಸ್ಥೆಯ ಪರೋಜ ಇನಾಮದಾರ ಮತ್ತು ಸಂಸ್ಥೆಯ ಪದಾಧಿಕಾರಿಗಳು ಬಂದು ವಿಕಲಚೇತನ ಪಲಾನುಭವಿಗೆ ಒಬ್ಬರಿಗೆ ಧನ ಸಹಾಯವನ್ನು ಪೌಂಡೇಶನ್ ವತಿಯಿಂದ ಸಹಿರಾ ಬೋರಗಿ, ಅವರು ಸಹಾಯ ಮಾಡುತ್ತಾ ಮಾನವಿಯತೆಯನ್ನು ಮೆರೆದರು. ನಿಮೀಶ ಆಚಾರ್ಯ ಇವರು ಬೆನ್ನುಹುರಿ ಅಪಘಾತ ವಿಕಲಚೇತನರ ಸಂಘದ ಜಿಲ್ಲೆಯ ಗೌರವ ಅಧ್ಯಕ್ಷರು ಇವರು ಕೂಡಾ ಇಬ್ಬರು ಫಲಾನುಭವಿಗಳಿಗೆ ಸ್ವ ಉದ್ಯೋಗ ಮಾಡಲು ಆರ್ಥಿಕ ಸಹಾಯ ಮಾಡಿದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಿಸ್ಟರ್ ಅಮಲಾ, ಸನ್ ಜೋಶಪ್ ಆರೋಗ್ಯ ಕೇಂದ್ರ ವಿಜಯಪುರ, ಅಲ್ ಅಮೀನ ಆಸ್ಪತ್ರೆಯಲ್ಲಿ ವಿಜಯಪುರದ ಪಿಆರ್ಓ ಡಾ. ಶಾಹೀನಾ ಕುಡಚಿ, ಅಲ್ ಅಮೀನ ವೈಧ್ಯಾಧಿಕಾರಿಗಳಾದ ಡಾ. ಅಬಜೀತ ಮುಲ್ಲಾ, ವಿಜಯಪುರ ಲೋಕಲ್ ಯುಆರ್ಡಬ್ಲ್ಯೂಗಳು, ಎಪಿಡಿ ಸಂಸ್ಥೆ ಬೀದರ ಜಿಲ್ಲೆಯಿಂದ ಅಂಬಾದಾಸ ಇವರು ಕೂಡಾ ಭಾಗವಹಿಸಿದರು. ವಿಜಯಪುರದ ಎಪಿಡಿ ಈರಮ್ಮ ಹಾದಿಮನಿ ನಿರೂಪಿಸಿದರು. ಸುನೀತಾ ರಾಠೋಡ ಪ್ರಾರ್ಥಿಸಿದರು, ಕುಶಾಲ ವಾಲಿಕಾರ ಸ್ವಾಗತಿಸಿದರು, ಕಲಬುರ್ಗಿ ಎಪಿಡಿ ಶಿವಶಂಕರ ವಂದಿಸಿದರು. ಈ ಕಾರ್ಯಕ್ರಮದಲ್ಲಿ ಬೆನ್ನುಹುರಿ ಅಫಘಾತಕ್ಕೊಳಗಾದ ವ್ಯಕ್ತಿಗಳು 20 ಜನ ಶಿಬಿರದಲ್ಲಿ ಪಾಲ್ಗೊಂಡಿದ್ದರು.