ವಿಜಯಪುರ: Chennamma Vijayotyotsa ಚೆನ್ನಮ್ಮ ವಿಜಯೋತ್ಯೋತ್ಸವದ ಅಂಗವಾಗಿ ಶಾಂತಿನಿಕೇತನ ಪ್ರಾಥ ಮಿಕ ಪ್ರೌಢಶಾಲೆ ಆಶ್ರಮ ರಸ್ತೆ ವಿಜಯಪುರದ ಸಭಾಂಗಣದಲ್ಲಿ ಚೆನ್ನಮ್ಮ ವಿದ್ಯಾವರ್ಧಕ ಸಂಸ್ಥೆ ಉತ್ನಾಳ, ಈ ಸಂಸ್ಥೆಯಿಂದ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟನೆ ನಡೆಯಿತು.
ಎಲ್ಲ ಅತಿಥಿಗಳೊಂದಿಗೆ ಸಸಿಗೆ ನೀರೆಯುವ ಮೂಲಕ ಮತ್ತು ಚೆನ್ನಮ್ಮಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವುದರ ಜೊತೆಗೆ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಡಾ ಶ್ರದ್ದಾನಂದ ಸ್ವಾಮೀಜಿಗಳು ಶಿವಾನಂದ ಮಠ ಸದಲಗಾ ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು.
ಇದನ್ನೂ ಓದಿ: Vijayapura News | PDJ ಶಾಲೆಯ ವಿದ್ಯಾರ್ಥಿಗಳು ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ
Chennamma Vijayotyotsa ಅಧ್ಯಕ್ಷರಾದ ಪ ಗು ಸಿದ್ದಾಪುರ ಮಕ್ಕಳ ಸಾಹಿತಿಗಳು ಮುಳುವಾಡ, ಮುಖ್ಯ ಅತಿಥಿಗಳಾಗಿ ಬಸವರಾಜ್ ಫ ಯಲಿಗಾರ, ಆSP ವಿಜಯಪುರ, ಅತಿಥಿಗಳಾದ ಡಾ, ಸುರೇಶ್ ಬಿರಾದಾರ, ಚೇರ್ಮನ್ನರು ಶಾಂತಿನಿಕೇತನ ಶಿಕ್ಷಣ ಸಮೂಹ ಸಂಸ್ಥೆ ವಿಜಯಪುರ, ರಾಜಶೇಖರ್ ದೈವಾಡಿ, ಕಚೇರಿ ಅಧ್ಯಕ್ಷರು ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ, ಇಂಡಿ, ಮತ್ತು ಸಹಾಯಕ ನಿರ್ದೇಶಕ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಜಯಪುರ, ಸಂಸ್ಥೆಯ ಅಧ್ಯಕ್ಷರಾದ, ಶ್ರೀ ಬಸವರಾಜ ನಂ ಬಾಗೇವಾಡಿ,ಸಾ ಉತ್ನಾಳ, ಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ತಂಗ್ಗೆವ್ವ ನಂ ಬಾಗೇವಾಡಿ, ಪ್ರಧಾನ ಕಾರ್ಯದರ್ಶಿಗಳಾದ, ಶ್ರೀಮತಿ ಸುರೇಖಾ ಷ ಬಾಗಲಕೋಟ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: Vijayayapura News | ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜಯ ಕರ್ನಾಟಕ ಸಂಘಟನೆ ಧರಣಿ ಸತ್ಯಾಗ್ರಹ : 3ನೇ ದಿನಕ್ಕೆ
ರಾಜ್ಯ ಮಟ್ಟದ 21 ಸಾಧಕರಿಗೆ ಕೆಳದಿ ರಾಣಿ ಚನ್ನಮ್ಮ ಪ್ರಶಸ್ತಿ ಹಾಗೂ ವಿಶೇಷ ಪ್ರಶಸ್ತಿ 18ಸಾಧಕರಿಗೆ ಬೆಳವಡಿ ರಾಣಿ ಮಲ್ಲಮ್ಮ ಪ್ರಶಸ್ತಿ ಹಾಗೂ ಜೀವಮಾನ ಸಾಧನೆಗಾಗಿ 13 ಸಾಧಕರಿಗೆ ಕಿತ್ತೂರಾಣಿ ಚೆನ್ನಮ್ಮ ಪ್ರಶಸ್ತಿ ನೀಡಿ, ಗಣ್ಯಮಾನ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. ಶ್ರೀಮತಿ ಜ್ಯೋತಿ ಬಾಗೇವಾಡಿ ನಿರೂಪಿಸಿ, ವಂದಿಸಿದರು.






