ವಿಜಯಪುರ: ನಗರದ ಖ್ಯಾತ ಕಿಡ್ನಿ ತದ್ಯರಾದ ಡಾ. ಸುರೇಶ್ ಕಾಗಲ್ಕರ್ ಅವರನ್ನು ಭಾರತೀಯ ವೈದ್ಯಕೀಯ ಸಂಘದ ಸಾರ್ವಜನಿಕ ಆರೋಗ್ಯ ವಿಭಾಗದ, ರಾಜ್ಯ ಚೇರ್ಮನ್ ರಾಗಿ ಭಾರತಿಯ ವೈದ್ಯಕಿಯ ಸಂಘದಿಂದ ಇತ್ತೀಚೆಗೆ ಯಲಹಂಕದ ಸಮ್ಮೇಳನದ ಸಭೆಯಲ್ಲಿ 2024 ಮತ್ತು 25 ರ ಅವಧಿಗೆ ರಾಜ್ಯ ಚೇರ್ಮನ್ ರಾಗಿ ಆಯ್ಕೆ ಮಾಡಲಾಯಿತು ಎಂದು ಸಂಘದ ರಾಜ್ಯಾಧ್ಯಕ್ಷರಾದ ಡಾಕ್ಟರ್ ಚಿನಿವಾಲರ ಹಾಗೂ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಡಾ. ಸುರಿರಾಜು, ಡಾಕ್ಟರ್ ವೀರಭದ್ರಯ್ಯ, ರಾಜ್ಯ ಶಾಖೆಯ ಪತ್ರದಲ್ಲಿ ತಿಳಿಸಿದ್ದಾರೆ. ಭಾರತೀಯ ವೈದ್ಯಕೀಯ ಸಂಘ ರಾಜ್ಯ ಶಾಖೆ ವತಿಯಿಂದ ಅಭಿನಂದನೆಗಳನ್ನು ತಿಳಿಸಿದ್ದಾರೆ. ಭಾರತೀಯ ವೈದ್ಯಕೀಯ ಸಂಘ ವಿಜಯಪುರ ಶಾಖೆ ಹಾಗೂ ವೈದ್ಯಕೀಯ ತಂಡ ಹರ್ಷವನ್ನು ವ್ಯಕ್ತಪಡಿಸಿದ್ದಾರೆ.






