Vijayapura News : ಹಿರಿಯ ಕಲಾವಿದರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ – ಪ್ರೋ. ಶರಣಗೌಡ ಪಾಟೀಲ ಅಭಿಮತ

ರಂಗಭೂಮಿಗೆ ವಿಜಯಪುರ ಜಿಲ್ಲೆಯ ಕೊಡುಗೆ ಅಪಾರ. ಹಂದಿಗನೂರು ಸಿದ್ರಾಮಪ್ಪ, ಶ್ರೀರಂಗರನ್ನು ಹಿಡಿದು ಇಂದಿನ ಎಸ್. ಎಂ. ಖೇಡಗಿ, ಎಲ್.ಬಿ ಶೇಖ ಮಾಸ್ತರರವರೆಗೆ ವೃತ್ತಿ ರಂಗಭೂಮಿ ಬೆಳೆದು ಬಂದದ್ದು ಒಂದು ಇತಿಹಾಸ. -ಶರಣಗೌಡ ಪಾಟೀಲ

0
10

ವಿಜಯಪುರ: ರಂಗಭೂಮಿಗೆ ವಿಜಯಪುರ ಜಿಲ್ಲೆಯ ಕೊಡುಗೆ ಅಪಾರ. ಹಂದಿಗನೂರು ಸಿದ್ರಾಮಪ್ಪ, ಶ್ರೀರಂಗರನ್ನು ಹಿಡಿದು ಇಂದಿನ ಎಸ್. ಎಂ. ಖೇಡಗಿ, ಎಲ್.ಬಿ ಶೇಖ ಮಾಸ್ತರರವರೆಗೆ ವೃತ್ತಿ ರಂಗಭೂಮಿ ಬೆಳೆದು ಬಂದದ್ದು ಒಂದು ಇತಿಹಾಸ. Ranga Vaibhav Havyasi Natak ಇದಕ್ಕೆ ಪೂರಕವಾಗಿ ಹವ್ಯಾಸಿ ರಂಗಭೂಮಿಯೂ ತನ್ನದೇಯಾದ ಕೊಡುಗೆ ನೀಡಿದೆ. ಅಂತಹ ಹಿರಿಯ ಕಲಾವಿದರನ್ನು ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಶರಣಗೌಡ ಪಾಟೀಲ ಅಭಿಪ್ರಾಯಪಟ್ಟರು.

ನಗರದ ಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ರಂಗವೈಭವ ಹವ್ಯಾಸಿ ನಾಟಕ ತಂಡದವರು ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ದಿ. ಶ್ರೀನಿವಾಸ ತಾವರಗೇರಿ, ಅಶೋಕ ಬಾದರದಿನ್ನಿ, ವಿಶ್ವೇಶ್ವರಯ್ಯ ಸುರಪುರ, ಡಾ. ಸತೀಶ ಜಿಗಜಿನ್ನಿ, ಜಿ.ಎನ್ ದೇಶಪಾಂಡೆ, ಜಗದೀಶ ಗಲಗಲಿ ಹಾಗೂ ಅಂಬಾದಾಸ ಜೋಶಿ ಮುಂತಾದ ಹವ್ಯಾಸಿ ಕಲಾವಿದರು ನಾಟಕಗಳ ಪ್ರದಶಿ9ಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.

ಇದನ್ನೂ ಓದಿ: Vijayapura News : ರಿಕ್ಕಿ ರೈ ಮೇಲೆ ದಾಳಿ ಜಯ ಕರ್ನಾಟಕ ಸಂಘಟನೆ ಖಂಡನೆ 

Ranga Vaibhav Havyasi Natak ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ. ಮಾಧವ ಗುಡಿ ಮಾತನಾಡಿ ಆಧುನಿಕ ಜಂಜಾಟಗಳ ಮಧ್ಯೆದಲ್ಲಿಯೂ ಸಹ ಇಂತಹ ಹವ್ಯಾಸಿ ಕಲಾ ತಂಡಗಳು ನಾಟಕಗಳನ್ನು ಪ್ರದರ್ಶಿಸುವ ಮೂಲಕ ಜನರಲ್ಲಿ ನಾಟಕಗಳ ಬಗ್ಗೆ ಅಭಿರುಚಿ ಮೂಡಿಸುವ ಕಾರ್ಯ ಮಾಡುತ್ತಿರುವುದು ಸ್ತುತ್ಯಾರ್ಹ ಎಂದರು.

ಇದೇ ಸಂದರ್ಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ನೀನಾಸಂ ಹಿರಿಯ ಪದವೀಧರ ಡಾ. ಸಂಗಮೇಶ ಮೇತ್ರಿ ಮಾತನಾಡಿ ವಿಜಯಪುರ ಜಿಲ್ಲೆ ರಂಗಭೂಮಿಯ ತವರೂರು. ಇಲ್ಲಿ ಅನೇಕ ಕಲಾವಿದರಿದ್ದು, 30 ವರ್ಷಗಳ ನನ್ನ ನಾಟಕ ಕ್ಷೇತ್ರದ ಕಲೆಯನ್ನು ಗುರುತಿಸಿ ಇಂದು ವಿಜಯಪುರದಲ್ಲಿ ನನ್ನನ್ನು ಗೌರವಿಸಿದ ರಂಗವೈಭವ ತಂಡದ ಸದಸ್ಯರಿಗೆ ನಾನು ಆಭಾರಿಯಾಗಿದ್ದೇನೆ. ರಂಗ ವೈಭವ ತಂಡದ ಕಾರ್ಯ ನಿರಂತರವಾಗಿ ಸಾಗಲಿ ಎಂದು ಆಶಿಸಿ ಶುಭ ಹಾರೈಸಿದರು.

ಇದನ್ನೂ ಓದಿ: Vijayapura News : ದೇಶದ ನಾಗರಿಕರಿಗೆ ಸಮಾನತೆ ಪ್ರತಿಪಾದಿಸಿದ ಡಾ. ಬಿ.ಆರ್. ಅಂಬೇಡ್ಕರ

ವೇದಿಕೆಯಲ್ಲಿ ಜಗದೀಶ ಗಲಗಲಿ, ಡಾ. ವ್ಹಿ.ಡಿ. ಐಹೊಳ್ಳಿ, ವಿಶ್ವೇಶ್ವರಯ್ಯ ಮಠಪತಿ, ಅಪ್ಪಣ್ಣ ನಾಯಕ, ವಿಜಯಕುಮಾರ ಪಟ್ಟಣಶೆಟ್ಟಿ ಹಾಗೂ ಉದಯ ಬೆಳ್ಳೆಣ್ಣವರ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರಾದ ವಿದ್ಯಾಧರ ಸಾಲಿ, ಪೊನ್ನಪ್ಪ ಕಡೇಮನಿ, ಚಂದ್ರು ನಿಂಬಾಳ ಸೇರಿದಂತೆ ಮಹಾವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ಪ್ರವೀಣ ಡೋಣೂರ ಪ್ರಾರ್ಥಿಸಿದರು. ಡಾ ಸುಮಾ ಬೋಳರೆಡ್ಡಿ ಸ್ವಾಗತಿಸಿದರು. ರಂಗ ವೈಭವದ ಅಧ್ಯಕ್ಷ ಅಂಬಾದಾಸ ಜೋಶಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿಜಯಕುಮಾರ ಸಜ್ಜನ ವಂದಿಸಿದರು.


LEAVE A REPLY

Please enter your comment!
Please enter your name here