ವಿಜಯಪುರ : Chief Minister / Police ಧಾರವಾಡದ ಹೆಚ್ಚುವರಿ ಪೋಲೀಸು ವರಿಷ್ಠಾಧಿಕಾರಿಗಳಾದ ನಾರಾಯಣ ಭರಮನಿಯರ ಅವರ ಜೊತ ಅಸಭ್ಯ ವರ್ತನೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾರ್ವಜನಿಕವಾಗಿ ಕ್ಷಮೆಯಾಚನೆ ಮಾಡುವಂತೆ ಆಗ್ರಹಿಸಿ ಗೌರವಾನ್ವಿತ ರಾಜ್ಯಪಾಲರಿಗೆ ವಿಜಯಪುರ ಜಿಲ್ಲಾಧಿಕಾರಿಗಳ ಮುಖಾಂತರ ಜಿಲ್ಲಾ ಯುವ ಪರಿಷತ್ ವತಿಯಿಂದ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಪರಿಷತ್, ಅಧ್ಯಕ್ಷರಾದ ಶರಣು ಸಬರದ ಅವರು ಮಾತನಾಡಿ, ಅತ್ಯಂತ ಗೌರವಾನ್ವಿತ ಪೋಲೀಸ ನೌಕರಿ ಮಾಡುತ್ತಿರುವ ಹಿರಿಯ ಪೋಲೀಸ ಅಧಿಕಾರಿ, ಧಾರವಾಡದ ಹೆಚ್ಚುವರಿ ಪೋಲೀಸ ವರಿಷ್ಠಾಧಿಕಾರಿಗಳಾದ ನಾರಾಯಣ ಭರಮನಿಯರ ಜೊತೆಗೆ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆದುಕೊಂಡ ರೀತಿ ಇಡೀ ನಾಗರಿಕ ಸಮಾಜ ತೆಲೆತಗ್ಗಿಸುವಂತಾಗಿದೆ.
ಇದನ್ನೂ ಒದಿ: Vijayapura News : ಹಿರಿಯ ಕಲಾವಿದರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ – ಪ್ರೋ. ಶರಣಗೌಡ ಪಾಟೀಲ ಅಭಿಮತ
Chief Minister / Police ಬೆಳಗಾವಿಯ ಘಟನೆಯಿಂದ ಭರಮನಿ ಅಂತಹ ಅಧಿಕಾರಿಗಳಿಗೆ ಆಗುವ ಮಾನಸಿಕ ಹಿಂಸೆ ಅಷ್ಟಿಷ್ಟಲ್ಲ. ರಾಜಕಾರಣಿಗಳನ್ನು ತಮ್ಮ ಮನೆಯ ಹೆಂಡತಿ, ಮಕ್ಕಳು ಹಾಗೂ ಪಾಲಕರನ್ನು ಬಿಟ್ಟು ಹೊತ್ತಿಲ್ಲದ ಹೊತ್ತಿನಲ್ಲಿ ಒಬ್ಬ ಪೋಲೀಸ ಆಧಿಕಾರಿ ಸರಕಾರದ ಆಸ್ತಿ ಎನ್ನುವಂತೆ ಅದೆಲ್ಲ ರೀತಿಯ ಸೇವೆಗೆ ಕಂಕಣ ಬದ್ಧರಾಗಿ ನಿಲ್ಲುವವರ ಪರಿಸ್ಥಿತಿಯೇ ಹಿಂಗಾದರೆ, ಅದೇ ಇಲಾಖೆಯ ಪೇದೆಯ ಗತಿ ಇನ್ನೇನು ಆಗಬೇಡ..? ಸಧ್ಯ ಇದು ಸಾರ್ವಜನಿಕವಾಗಿ ಚರ್ಚೆ ಆಗುತ್ತಿದೆ. ಇಂತಹ ರಾಜಕಾರಿಣಿಗಳ ದುರ್ವರ್ತನೆಯಿಂದ ಪೋಲೀಸ ಇಲಾಖೆಯ ಆತ್ಮಸ್ಥರ್ಯ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣಗೊಳ್ಳುತ್ತಿದೆ.
ಸಂಗಮೇಶ ಹೌದೆ (ವಕೀಲರು) ಮಾತನಾಡಿ, ಬೆಳಗಾವಿಯ ಮುಖ್ಯಮಂತ್ರಿಗಳ ನೇತೃತ್ವದ ಸಭೆಯಲ್ಲಿ ಆದ ಪೋಲೀಸ ಅಧಿಕಾರಿಯ ದುರ್ವರ್ತನೆ ಘಟನೆಯ ಕುರಿತು ಇನ್ನಾದರೂ ಪ್ರತಿಭಟನೆಯ ಅವಶ್ಯಕತೆ ಇದೆ. ಪೋಲೀಸ ಇಲಾಖೆಯ ರಾಜ್ಯ ಮಟ್ಟದ ಹಿರಿಯ ಅಧಿಕಾರಿಗಳು ಪ್ರತಿಭಟಿಸದೇ ಇದ್ದರೆ ಇಂತಹ ರಾಜಕಾರಿಣಿಗಳ ಕೈಯಲ್ಲಿ ಪೋಲೀಸ ಇಲಾಖೆ ಪುಟ್ಬಾಲ್ ಆಗುತ್ತಿದೆ. ಈ ಕುರಿತು ಪೋಲೀಸ ಇಲಾಖೆಯ ಅಧಿಕಾರಿಗಳಿಗೆ ಗೌರವ ಕೊಡುವಲ್ಲಿ ಮುಖ್ಯಮಂತ್ರಿಗಳು ದಾರಿ ತಪ್ಪುತ್ತಿದ್ದು, ಹಿರಿಯ ಅಧಿಕಾರಿಗಳಿಗೆ ಗೌರವ ಕೊಡುವದನ್ನು ಇತರೆ ರಾಜಕಾರಣಿಗಳಿಗೆ ಮುಖ್ಯಮಂತ್ರಿಗಳು ತಿಳಿಸಬೇಕೆ ಹೊರತು ಅವರೇ ಈ ರೀತಿ ಅಗೌರವ ತೋರಿಸುವದು ಸಮಂಜಸವಲ್ಲ.
ಇದನ್ನೂ ಓದಿ: Vijayapura News : ರಿಕ್ಕಿ ರೈ ಮೇಲೆ ದಾಳಿ ಜಯ ಕರ್ನಾಟಕ ಸಂಘಟನೆ ಖಂಡನೆ
ಇದರಿಂದ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಇನ್ನಾದರೂ ಮುಖ್ಯಮಂತ್ರಿಗಳಿಗೆ ಸಂಯಮವನ್ನು ಕಾಯ್ದುಕೊಂಡು ವರ್ತಿಸಬೇಕು. ಇಷ್ಟು ದೊಡ್ಡ ಪ್ರಮಾಣದ ಪ್ರಮಾದ ಆದರೂ ಸಹ ಗೃಹ ಮಂತ್ರಿಗಳು ನನ್ನ ಗಮನಕ್ಕೆ ಬಂದಿಲ್ಲವೆಂದು ಹಾರಿಕೆ ಉತ್ತರ ನೀಡಿದ್ದರಿಂದ ಇವರು ಸಹ ಅಧಿಕಾರಿಗಳಿಗೆ ಗೌರವ ಕೊಡುವದಿಲ್ಲ ಎನ್ನುವದು ಗೊತ್ತಾಗುತ್ತದೆ. ಆದ್ದರಿಂದ ರಾಜ್ಯದ ಗೌರವಾನ್ವಿತ ಹುದ್ದೆಯಲ್ಲಿರುವ ಮುಖ್ಯಮಂತ್ರಿಗಳು ಸಾರ್ವಜನಿಕ ಕ್ಷಮೆ ಕೇಳಬೇಕೆಂದು ಆಗ್ರಹಿಸುತ್ತೇವೆ.
ಈ ಸಂದರ್ಭದಲ್ಲಿ ಶಿವಾನಂದ ಭುಯ್ಯಾರ, ರವಿ ಬಿರಾದಾರ (ನಾಗಠಾಣ), ಮಹೇಶ ಬಿದನೂರ, ಬಾಪುಗೌಡ ಬಿ. ಬಿರಾದಾರ (ವಕೀಲರು), ಬಾಬು ಹಿಪ್ಪರಗಿ (ವಕೀಲರು), ಆಕಾಶ ಸಬರದ, ಇನ್ನಿತರರು ಉಪಸ್ಥತರಿದ್ದರು.