Vijayapura News | ಶ್ರೇಷ್ಠ ಭಕ್ತ, ಚಿಂತಕ ಕನಕದಾಸರು

ಜಾತಿ, ಮತ, ಧರ್ಮಗಳ ಹೆಸರಿನಲ್ಲಿ ನಡೆಯುವ ಬೇಧ ಭಾವಗಳನ್ನು ಖಂಡಿಸುತ್ತ ಕುಲ-ಕುಲ ಎಂದು ಹೊಡೆದಾಡದಿರಿ ಅಯ್ಯ, ನಿಮ್ಮ ಕುಲದ ನೆಲೆಯನೇದಾರೂ ಬಲ್ಲಿರಾ

0
52

ವಿಜಯಪುರ: ಜಾತಿ, ಮತ, ಧರ್ಮಗಳ ಹೆಸರಿನಲ್ಲಿ ನಡೆಯುವ ಬೇಧ ಭಾವಗಳನ್ನು ಖಂಡಿಸುತ್ತ ಕುಲ-ಕುಲ ಎಂದು ಹೊಡೆದಾಡದಿರಿ ಅಯ್ಯ, ನಿಮ್ಮ ಕುಲದ ನೆಲೆಯನೇದಾರೂ ಬಲ್ಲಿರಾ ಬಲ್ಲಿರಾ ಎಂದು ಜಾತಿ, ಕುಲಧರ್ಮ, ಬದುಕಿದೆನು ಬದುಕಿದೆನು ಭವ ಎನಗೆ ಹಿಂಸಿಸಿತ್ತು, ಹೀಗೆ ಕನಕದಾಸ ರು ದಾಸ ಸಾಹಿತ್ಯವನ್ನು ರಚಿಸಿ ದಾರ್ಶನಿಕರಾಗಿ ಜನ ಸಾಮಾನ್ಯರ ಜಾತಿ ಪದ್ಧತಿ ನಿರ್ಮೂಲ ಮಾಡಿದವರು ಎಂದು ಕನ್ನಡ ಉಪನ್ಯಾಸ ಡಾ. ಮಲ್ಲಿಕಾರ್ಜುನ ಮೇತ್ರಿ ಹೇಳಿದರು.

ಇದನ್ನೂ ಓದಿ: Vijayapura News | ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ  ಆನ್‍ಲೈನ್ ನೋಂದಣಿಗೆ ಅವಕಾಶ

ಅಖಿಲ ಭಾರತ ವೀರಶೈವ ಲಿಂಗಾಯತ ಸಭಾ ಭವನದಲ್ಲಿ ನಡೆದ ಶಿವಾನುಭವ ಗೋಷ್ಠಿಯಲ್ಲಿ ಕನಕದಾಸ ರ ಬದುಕು ಮತ್ತು ಅನುಭಾವ ಕುರಿತು ಉಪನ್ಯಾಸ ನೀಡಿ ಕನಕದಾಸರು 16ನೇ ಶತಮಾನದಲ್ಲಿ ಇದ್ದಂತವರು ವ್ಯಾಸರಾಯರ ನೆಚ್ಚಿನ ಶಿಷ್ಯರು, ಶ್ರೇಷ್ಠ, ಸಂತರು ಕೀರ್ತನಕಾರರು, ಹರಿ ನಾಮಸ್ಮರಣೆಯನ್ನೇ ಜೀವನದ ಉಸಿರಾಗಿಸಿಕೊಂಡು ತಾಯಿ ಹೃದಯದ ಗುರುಗಳ ವಾತ್ಸಲ್ಯವನ್ನು, ಪ್ರೀತಿಯನ್ನು ಅನುಭವಿಸಿದವರು. ಬಸವಾದಿ ಶರಣರ ನೆಲೆ ಪ್ರಭಾವ, ಕಾರ್ಮಿಕ ನೆಲೆಯ ಚಿಂತನೆ, ವಚನ ಸಾಹಿತ್ಯದ, ಮಾರ್ಗದಲ್ಲಿ ನಡೆದು ವಿಜಯನಗರದ ಸಾಮ್ರಾಜ್ಯದಲ್ಲೆಲ್ಲ ಸಂಚರಿಸುತ್ತ ಕಾವ್ಯಗಳನ್ನು ರಚಿಸುತ್ತ ಸಮಾಜದ ಅಂಕುಡೊಂಕುಗಳನ್ನು ತಿದ್ದುತ್ತ ಜನರನ್ನು ಜಾಗೃತಿಗೊಳಿಸಿದಂತಹ ಕನಕದಾಸರು 316 ಕೀರ್ತನೆಗಳು ಅವೆಲ್ಲವೂ ಆತ್ಮಶುದ್ಧಿಗಾಗಿ ಶ್ರೇಷ್ಠ ಕಾಯಕ ಚಿಂತನೆಗಾಗಿ ರಚಿತವಾದಂತವುಗಳು ಎಂದರು.

ಜಿಲ್ಲಾ ಘಟಕದ ಅಧ್ಯಕ್ಷರಾದ ವಿ.ಸಿ. ನಾಗಠಾಣ ಮಾತನಾಡಿ ಕನಕದಾಸರು ಪುರಂದರದಾಸರ ಸಮಕಾಲಿನವರು ದಾಸ ಸಾಹಿತ್ಯದ ಅಶ್ವಿನಿ ದೇವತೆಗಳು ಎಂದೇ ಹೆಸರಾದವರು ಶ್ರೇಷ್ಠ ಸಂತರು ಕೀರ್ತನಕಾರರು, ಸಮಾಜದ ಬದಲಾವಣೆಗೆ ಶ್ರಮ ಪಟ್ಟವರು. ನಾವು ಕನಕದಾಸರರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.

ಇದನ್ನೂ ಓದಿ: Vijayapura News | ಜಿಲ್ಲಾಡಳಿತದಿಂದ ಸಂತ ಶ್ರೇಷ್ಠ ಭಕ್ತ ಕನಕದಾಸ ಜಯಂತಿ ಆಚರಣೆ

ಇದೇ ಸಂದರ್ಭಧಲ್ಲಿ ಸುವರ್ಣ ಕರ್ನಾಟಕ-50 ಪ್ರಶಸ್ತಿ ಪಡೆದ ಸಮಾಜ ಸೇವಕಿ ಮಲ್ಲಮ್ಮ ಯಾಳವಾರ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸುರೇಶ ಗೊಣಸಗಿ, ಸಿನೆಟ ಸದಸ್ಯರಾಗಿ ಆಯ್ಕೆಯಾದ ಪಾರ್ವತಿ ಗೊಣಸಗಿ ಅವರನ್ನು ಸನ್ಮಾನಿಸಲಾಯಿತು.

ಎಂ.ಜಿ. ಯಾದವಾಡ, ಅಪ್ಪಾಸಾಹೇಬ ಕೋರಿ, ಜ್ಯೋತಿ ಬಾಗಲಕೋಟ, ಬಸವರಾಜ ಒಂಟಗೂಡಿ, ಬಿ.ಟಿ. ಈಶ್ವರಗೊಂಡ, ಕಾಶೀನಾಥ ಅಣೆಪ್ಪನವರ, ಡಾ. ವಿ.ಡಿ. ಐಹೊಳ್ಳಿ, ಸಹದೇವ ನಾಡಗೌಡರ, ಅಮರಣ್ಣವರ, ಬ್ಯಾಕೋಡ ದಂಪತಿಗಳು ಅಂಕಲಗಿ ದಂಪತಿಗಳು, ಗಂಗಾಧರ ಸಾಲಕ್ಕಿ, ಪರಶುರಾಮ ಪೋಳ, ಡಾ. ಅಮೀರುದ್ಧಿನ ಖಾಜಿ, ರಾಜೇಂದ್ರ ಕೌಜಲಗಿ, ಅಮರೇಶ ಸಾಲಕ್ಕಿ ರಮೇಶ ತೇಲಿ ಉಪಸ್ಥಿತರಿದ್ದರು. ಸಾಹಿತಿ ಸಂಗಮೇಶ ಬದಾಮಿ ಕಾರ್ಯಕ್ರಮ ನಿರ್ವಹಿಸಿದರು. ವಿಠ್ಠಲ ತೇಲಿ ವಂದಿಸಿದರು.


LEAVE A REPLY

Please enter your comment!
Please enter your name here