Vijayayapura News | ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜಯ ಕರ್ನಾಟಕ ಸಂಘಟನೆ ಧರಣಿ ಸತ್ಯಾಗ್ರಹ : 3ನೇ ದಿನಕ್ಕೆ

ವಿಜಯಪುರ ವಿಮಾನ ನಿಲ್ದಾಣಕ್ಕೆ ಶ್ರೀ ಬಸವೇಶ್ವರ ಹೆಸರು ಗಾಂಧಿ ವೃತ್ತದ ನವೀಕರಣ, ರೈಲ್ವೆ ನಿಲ್ದಾಣಕ್ಕೆ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಹೆಸರನ್ನು ಮರುನಾಮಕರಣ ಹಾಗೂ ವಿಜಯಪುರ ನಗರದ ಕಿತ್ತೂರ ರಾಣಿ ಚನ್ನಮ್ಮ ರಂಗ ಮಂದಿರ ನವೀಕರಗೊಳಿಸಬೇಕು ಎಂದು ಹೋರಾಟ.

0
34

ವಿಜಯಪುರ: ವಿಜಯಪುರ ವಿಮಾನ ನಿಲ್ದಾಣಕ್ಕೆ ಶ್ರೀ ಬಸವೇಶ್ವರ ಹೆಸರು ಗಾಂಧಿ ವೃತ್ತದ ನವೀಕರಣ, ರೈಲ್ವೆ ನಿಲ್ದಾಣಕ್ಕೆ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಹೆಸರನ್ನು ಮರುನಾಮಕರಣ ಹಾಗೂ ವಿಜಯಪುರ ನಗರದ ಕಿತ್ತೂರ ರಾಣಿ ಚನ್ನಮ್ಮ ರಂಗ ಮಂದಿರ ನವೀಕರಗೊಳಿಸಿ ನಾಟಕ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಜಯ ಕರ್ನಾಟಕ ಸಂಘಟನೆ ಹಮ್ಮಿಕೊಂಡಿರುವ ಧರಣಿ ಸತ್ಯಾಗ್ರಹ ಇಂದಿಗೆ 3ನೇ ದಿನಕ್ಕೆ ಕಾಲಿಟ್ಟಿದೆ.

ಇದನ್ನೂ ಓದಿ: Vijayapura News | ಶಿವಾನುಭವ ಗೋಷ್ಠಿ | ಜೀವನ ಅಮೃತ ನೀಡಿದವರು – ಬಸವಾದಿ ಶರಣರು

ಈ ಸಂದರ್ಭದಲ್ಲಿ ಶ್ರೀ ಷ.ಬ್ರ.ಡಾ, ಗುರುಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಈ ಮೂರು ಬೇಡಿಕೆಗಳು ಬಹಳಷ್ಟು ಹಳೆಯದಾಗಿದ್ದು, ಇಲ್ಲಿಯವರೆಗೆ ಯಾವೊಂದು ಸಂಘಟನೆಗಳು ಈ ಬಗ್ಗೆ ಜಿಲ್ಲಾಡಳಿತದ ಕಣ್ತೆರೆಯುವ ಕೆಲಸಕ್ಕೆ ನಮ್ಮಿಂದ ಸಂಪೂರ್ಣ ಬೆಂಬಲ ವಿದ್ದು, ಈ ಮೂರು ಬೇಡಿಕೆಗಳು ಬಹುಮುಖ್ಯ ಬೇಡಿಕೆಗಳಾಗಿದ್ದು, ಇವುಗಳನ್ನು ಈಡೇರಿಸುವವರೆಗೆ ಈ ಧರಣಿ ಸತ್ಯಾಗ್ರಹ ಕೊನೆಗೊಳ್ಳುವದಿಲ್ಲ ಎನ್ನುವದನ್ನು ಜಿಲ್ಲಾಡಳಿತ ಹಾಗೂ ಸರಕಾರ ಅರಿತುಕೊಳ್ಳಬೇಕೆಂದು ತಿಳಿಸಿದರು.

ಜಿಲ್ಲಾಧ್ಯಕ್ಷರಾದ ಸಂಗಮೇಶ ಗೌಡ ದಾಶ್ಯಾಳ ಮಾತನಾಡಿ, ನಾವು ಚಿಕ್ಕವರಾಗಿದ್ದಲೂ ಸಹ ಗಾಂಧಿವೃತ್ತವು ಇಲ್ಲಿಯವರೆಗೆ ಪುನಶ್ಚೇತನಗೊಂಡಿಲ್ಲ. ಎತ್ತಾವತ್ತಾಗಿದೆ. ಇಲ್ಲಿ ಜಿಲ್ಲಾಡಳಿತದ ನಿರ್ಲಕ್ಷ್ಯ ಧೋರಣೆ ಕಂಡು ಬರುತ್ತಿದೆ. ಹಾಗೂ ನಡೆದಾಡುವ ದೇವರಾದ ಪೂಜ್ಯ ಶ್ರೀಗಳು ಎಂದಿಗು ನಮ್ಮ ಮನದಲ್ಲಿ ಅಚ್ಚಳಿಯದಂತೆ ಇದ್ದು, ಇವರು ತಮ್ಮ ಜೀವಿತ ಅವಧಿಯಲ್ಲಿ ತಮ್ಮ ಹೆಸರು ಮುಂಚೂಣಿಯಲ್ಲಿರುವಂತೆ ಹೋರಾಡಿದವರಲ್ಲಿ ಆಸೆ ಪಟ್ಟವರೂ ಅಲ್ಲ ಇಂತಹ ಮಹನೀಯರ ಹೆಸರು ರೈಲ್ವೆ ನಿಲ್ದಾಣಕ್ಕೆ ಹಾಗೂ ವಿಮಾನ ನಿಲ್ಧಾಣಕ್ಕೆ ಕಾಯಕಯೋಗಿ ಬಸವಣ್ಣನವರ ಹೆಸರು ಮತ್ತು ನಾಡಿನ ಸಂಸ್ಕøತಿಯನ್ನು ಬಿಂಬಿಸುವ ನಾಟಕಗಳು ಇತ್ತೀಚಿಗೆ ಮರೆಯಾಗುತ್ತಿದೆ.

ಇದನ್ನೂ ಓದಿ: Vijayapura News | ಡೋಣಿ ನದಿ ಹೂಳೆತ್ತುವ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಲಿ – ಸಂಸದ ರಮೇಶ ಜಿಗಜಿಣಗಿ

ಜಯ ಕರ್ನಾಟಕ ಸಂಘಟನೆ ಈ ಮುಂಚೆ ಕಿತ್ತೂರ ರಾಣಿ ಚೆನ್ನಮ್ಮ ರಂಗ ಮಂದಿರ ಸ್ಥಗಿತಗೊಂಡು ದಶಕಗಳೇ ಕಳೆದಿವೆ. ಅದನ್ನು ಪುನಃ ನವೀಕರಣಗೊಳಿಸಿ ಸಂಗೀತ ಪ್ರೇಮಿಗಳಿಗೆ ನಾಟಕ ಪ್ರೀಯರಿಗೆ ನಾಟಕ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಕು. ಇದರಿಂದ ರಂಗಭೂಮಿಯನ್ನೇ ನಂಬಿಕೊಂಡಿರುವ ರಂಗಕರ್ಮಿಗಳಿಗೆ ಹೊಸ ಜೀವನ ನೀಡಿದಂತಾಗುತ್ತದೆ. ಆದ್ದರಿಂದ ಈ ಎಲ್ಲ ಬೇಡಿಕೆಗಳು ಈಡೇರಿರುವವರೆಗೆ ನಾವು ಈ ಹೋರಾಟವನ್ನು ಕೊನೆಗೊಳಿಸುವದಿಲ್ಲವೆಂದು ಹಾಗೂ ಈ ವಿಷಯವಾಗಿ ಜಿಲ್ಲಾಡಳಿತ, ಸರಕಾರದ ಸಚಿವರು ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

ಪಿಂಟು ಗಬ್ಬೂರ, ಸಿದ್ದರಾಜ ಹೋಳಿ, ಮುಕಾದಾಸ್ ಇನ್ನಾಮದಾರ, ಚನ್ನಪ್ಪಗೌಡ ಎಸ್, ಬಿರಾದಾರ, ಶ್ರೀ ಚನ್ನಪ್ಪಗೌಡ ಎಸ್, ಬಿರಾದಾರ, ರೀಯಾಜ ಪಾಂಡು, ಶಿವರಾಜಗೌಡ ಪಾಟೀಲ, ಆನಂದ ಹೂನ್ನೂರ, ಉಮೇಶ ಚಲವಾದಿ, ಅಶೋಕ ಕೊಡಗ, ಮೀಣಾ ಕುಂದನಗಾರ, ಶರಣು ಹೂಗಾರ, ಬಸವರಾಜ ಸಿಂಗನಳ್ಳಿ, ಸಿದ್ರಾಮಪ್ಪ ಅವಟಿ, ಸಂತೋಷ ಮನಗೂಳಿ ಹಾಗೂ ಜಿಲ್ಲಾ ಮತ್ತು ತಾಲೂಕಾ ಪದಾಧಿಕಾರಿಗಳು ಉಪಸ್ಥಿತರಿದ್ದರು,


LEAVE A REPLY

Please enter your comment!
Please enter your name here