Nutrition campaign : ಸಮಾಜಕ್ಕೆ ಆರೋಗ್ಯವಂತ ಮಗು ಅವಶ್ಯ : ಶಶಿಧರ ಕುರೇರ

ಮಕ್ಕಳಲ್ಲಿರುವ ಅಪೌಷ್ಠಿಕತೆಯನ್ನು ತಡೆಯಲು ಸರಕಾರ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಗರ್ಭಿಣಿ, ಬಾಣಂತಿಯರ ನಿರ್ವಹಣೆಗೆ ಸಹ ಸೌಲಭ್ಯಗಳಿದ್ದು, ಅವುಗಳನ್ನು ತಲುಪಿಸುವ ಜವಾಬ್ದಾರಿ ಅಂಗನವಾಡಿ ಕಾರ್ಯಕರ್ತೆಯರದ್ದಾಗಿದೆ.

0
50
Nutrition campaign image

ಬಾಗಲಕೋಟೆ: ಮಕ್ಕಳು ಬೆಳೆಯುವ ಹಂತದಲ್ಲಿಯೇ Nutrition campaign ಉತ್ತಮ ಆರೋಗ್ಯವಂತರಾಗಿ ಬೆಳೆದಲ್ಲಿ ಮಾತ್ರ ಅವರ ಮುಂದಿನ ಭವಿಷ್ಯ ರೂಪಿಸಲು ಸಾದ್ಯವಾಗುತ್ತದೆ ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಹೇಳಿದರು.
Nutrition campaign imageನವನಗರದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ತಾಲೂಕಾ ಆಡಳಿತ, ನಗರಸಭೆ ಹಾಗೂ ಶಿಶು ಅಭಿವೃದ್ದಿ ಯೋಜನೆ ಸಹಯೋಗದಲ್ಲಿ ಹಮ್ಮಿಕೊಂಡ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಚಿಕ್ಕ ವಯಸ್ಸಿನಿಂದಲೇ ಆರೋಗ್ಯಕರ ಆಹಾರ ಪದ್ದತಿ ಮತ್ತು ಪೌಷ್ಠಿಕಾಂಶದ ಬಗ್ಗೆ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ ಎಂದರು.
ಇದನ್ನೂ ಓದಿ: Vishwakarma Jayanti : ಸೆಪ್ಟೆಂಬರ್ 17ರಂದು ವಿಶ್ವಕರ್ಮ ಜಯಂತಿ
ಮಕ್ಕಳಲ್ಲಿರುವ ಅಪೌಷ್ಠಿಕತೆಯನ್ನು Nutrition campaign ತಡೆಯಲು ಸರಕಾರ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಗರ್ಭಿಣಿ, ಬಾಣಂತಿಯರ ನಿರ್ವಹಣೆಗೆ ಸಹ ಸೌಲಭ್ಯಗಳಿದ್ದು, ಅವುಗಳನ್ನು ತಲುಪಿಸುವ ಜವಾಬ್ದಾರಿ ಅಂಗನವಾಡಿ ಕಾರ್ಯಕರ್ತೆಯರದ್ದಾಗಿದೆ. ಮಗು ಹುಟ್ಟುವ ಪೂರ್ವ ಹಾಗೂ ನಂತರದಲ್ಲಿ ಏನು ಕೊಡಬೇಕು ಎಂಬುದನ್ನು ತಿಳಿಯಬೇಕಿದೆ. ಸರಕಾರದ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಕಾರ್ಯವಾಗಬೇಕು. ಅಂದಾಗ ಮಾತ್ರ ಪೋಷಣ ಅಭಿಯಾನದ ಉದ್ದೇಶ ಸಫಲವಾಗುತ್ತದೆ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ ಮಾತನಾಡಿ ಮುಂದಿನ ಪೀಳಿಗೆಗೆ ಆರೋಗ್ಯಕರ ಭವಿಷ್ಯವನ್ನು ಖಾತ್ರಿಪಡಿಸುವ ಸಲುವಾಗಿ ಉತ್ತಮ ಪೋಷಣೆ ಅತೀ ಅವಶ್ಯವಾಗಿದೆ. ಇದರಿಂದ ಸದೃಡ ಮಕ್ಕಳು, ಸದೃಡ ಭಾರತವನ್ನು ನಿರ್ಮಿಸಲು ಸಾಕಾರವಾಗುತ್ತದೆ. ಅಂಗನವಾಡಿಯಲ್ಲಿ ಮಗುವಿಗೆ ನೀಡುವ ಆಹಾರ ಚಟವಟಿಕೆಗಳು ಅವರ ಆರೋಗ್ಯದ ಮೇಲೆ ಪರಿಣಾಮ ಭೀರುತ್ತದೆ. ಇದರಿಂದ ಸದೃಡರನ್ನಾಗುವಂತೆ ಮಾಡಿ ಅವರ ಭವಿಷ್ಯ ರೂಪಿಸಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: Narega Scheme : ಅಂತರ್ಜಲ ಮಟ್ಟ ಹೆಚ್ಚಿಸಲು ವಿವಿಧ ಕಾಮಗಾರಿಗಳನ್ನು ಕೈಗೊಳ್ಳಿ: ವಿಕಾಸ ಡೋಗ್ರಾ ಸೂಚನೆ
ಜಿ.ಪಂ ಉಪಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ ಮಾತನಾಡಿ ಈ ಪೋಷಣ ಅಭಿಯಾನದ ಉದ್ದೇಶ ಮಕ್ಕಳಿಗಾಗಿ, ಹದಿಹರೆಯದ ಹೆಣ್ಣು ಮಕ್ಕಳಿಗಾಗಿ ಕೊಡಬೇಕಾಗಿರುವುದು ಅವಶ್ಯ ಏಕೆಂದರೆ, ಪೌಷಕಾಂಶ ಮಕ್ಕಳ ಬೆಳೆವಣಿಗೆಗೆ ಸಹಕಾರಿಯಾದರೆ ಹದಿಹರೆಯದ ಹೆಣ್ಣು ಮಕ್ಕಳು ಮದುವೆಯಾಗಿ ಮಗುವಿಗೆ ಜನ್ಮ ನಿಡುವ ಸಮಯದಲ್ಲಿ ರಕ್ತಸ್ರಾವದಿಂದ ಬಳಲಬಾರದೆಂಬ ಉದ್ದೇಶದಿಂದ ಸರಕಾರ ಇಂತಹ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕೇವಲ ಕಾರ್ಯಕ್ರಮಕ್ಕೆ ಸೀಮಿತವಾಗಿರದೇ ನಿರಂತರ ಈ ಕಾರ್ಯ ಮುಂದುವರೆಯಬೇಕಾಗಿದೆ ಎಂದರು.

ವಿಷಯ ತಜ್ಞೆ ಡಾ.ರಮೀತ ಬಿ.ಇ ಮಾತನಾಡಿ ಗರ್ಭಾವಸ್ಥ ಮಹಿಳೆಗೆ ಪೌಷ್ಠಿಕ ಆಹಾರದ ಅವಶ್ಯಕತೆ ಇದ್ದು, ಮನೆಯಲ್ಲಿ ಉಪಯುಕ್ತವಾಗ ಪದಾರ್ಥಗಳನ್ನು ಬಳಸಿಕೊಂಡು ನಿಯಮಿತ ಸಮಯದಲ್ಲಿ ಸೇವಿಸುತ್ತಾ ಬಂದಲ್ಲಿ ಮಗುವಿನ ಜೊತೆಗೆ ತಾಯಿಯು ಸಹ ಆರೋಗ್ಯದಿಂದಿರಲು ಸಾಧ್ಯವಾಗುತ್ತದೆ. ಕಲಬೆರಕೆ ಆಹಾರ, ವಿಶ್ರಾಂತಿ ರಹಿತ ಜೀವನ ಇವುಗಳಿಂದ ಅಶಕ್ತತೆ ಉಂಟಾಗುವುದು. ಜಾಹೀರಾತುಗಳಿಗೆ ಮಾರು ಹೋಗಿ ರಾಸಾಯನಿಕ ಯುಕ್ತ ಔಷಧಿಗಳನ್ನು ಸೇವಿಸುವುದು ಕೂಡಾ ಒಳ್ಳೇಯದಲ್ಲವೆಂದರು.

ಈ ಸಂದರ್ಭದಲ್ಲಿ 5 ಜನ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿರ್ದೇಶಕ ಕೆ.ಪ್ರಭಾಕರ, ನಿರೂಪನಾಧಿಕಾರಿ ಮಂಜುನಾಥ, ಶಿಶು ಅಭಿವೃದ್ದಿ ಯೋಜನಾಧಿಕಾರಿ ರಮೇಶ ಸೂಳಿಕೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪೂರ್ವದಲ್ಲಿ ವಿವಿಧ ಪೌಷ್ಠಿಕ ಆಹಾರ ಪದಾರ್ಥಗಳ ಪ್ರದರ್ಶ ಮಾಡಲಾಯಿತು.


  ಲೋಕದಲ್ಲಿ ಯಾವ ಮಾನವನೂ ಪೂರ್ಣ ಸುಖಿಯೂ ಅಲ್ಲ. ಪೂರ್ಣ ದು:ಖಿಯೂ ಅಲ್ಲ.                                                                  -ಗೌತಮ ಬುದ್ಧ

LEAVE A REPLY

Please enter your comment!
Please enter your name here