Bagalkote News | ವಿಕಲಚೇತನರ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಸಚಿವ ತಿಮ್ಮಾಪೂರ

ಕೈ, ಕಾಲು, ಕಣ್ಣು ಎಲ್ಲ ಅಂಗಾಂಗಳು ಸರಿಯಾಗಿ ಇದ್ದರೂ ಎಷ್ಟೋ ಜನರು ತಮ್ಮ ಜೀವನ ವ್ಯರ್ಥವಾಗಿ ಕಳೆದವರು ಇದ್ದಾರೆ - ಸಚಿವ ತಿಮ್ಮಾಪೂರ

0
56

ಬಾಗಲಕೋಟೆ: ವಿಶ್ವ ವಿಕಲಚೇತನರ ದಿನಾಚರಣೆ ಅಂಗವಾಗಿ ರವಿವಾರ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ವಿಕಲಚೇತನರ ಕ್ರೀಡಾಕೂಟ Disabled Sports Event ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳಿಗೆ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ.ಬಿ. ತಿಮ್ಮಾಪೂರ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ವಿಶೇಷಚೇತರನ್ನು Disabled Sports Event ಉದ್ದೇಶಿಸಿ ಮಾತನಾಡಿದ ಅವರು ವಿಕಲಚೇತನರು ಕೂಡ ನಾಡಿನ ನಾಯಕರಾಗಬೇಕೆಂಬುದು ನನ್ನ ಕನಸಾಗಿದೆ. ಈ ನಿಟ್ಟಿನಲ್ಲಿ ವಿಶೇಷಚೇತನರು ಇಂದಿನಿಂದಲೇ ರಾಜಕಾರಣದಲ್ಲಿ ಆಸಕ್ತಿ ವಹಿಸಿಕೊಂಡು ತಮಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಂತೆ ಮೀಸಲಾತಿ ನೀಡಬೇಕು ಎಂದು ರಾಜ್ಯಪಾಲರಿಗೆ ರಾಷ್ಟ್ರಪತಿಗಳಿಗೆ ಒತ್ತಾಯಿಸಬೇಕು, ವಿಕಲಚೇತನರು ರಾಜಕಾರಣಕ್ಕೆ ಬರಬೇಕು ಅದಕ್ಕೆ ನಮಗೂ ಟೀಕೆಟ್ ನೀಡಿ ನಾವೂ ಗೆಲ್ಲುತ್ತೆವೆ ಎಂಬ ಬೇಡಿಕೆ ಇಡಬೇಕು.

ಇದನ್ನೂ ಓದಿ: Vijayapura News | ಗ್ಯಾಸ್ ಸಿಲಿಂಡರ್ ಬಳಸುವಾಗ ಅಗತ್ಯ ಸುರಕ್ಷಾ ಮುನ್ನೆಚ್ಚರಿಕಾ ಕ್ರಮವಹಿಸಿ: :ವಿನಯಕುಮಾರ ಪಾಟೀಲ

ನಿಮ್ಮ ಹಕ್ಕುಗಳನ್ನು ಪಡೆಯಲು ರಾಜ್ಯ, ರಾಷ್ಟ್ರ ನಾಯಕರಾಗಬೇಕು. ಕೆಲವು ವರ್ಷಗಳ ಹಿಂದೆ ರಾಜೀವ ಗಾಂಧಿ, ಪಿ.ವಿ.ನರಸಿಂಹರಾವ್ ಅವರು ಪ್ರಧಾನಮಂತ್ರಿ ಆಗಿದ್ದಂತಹ ಸಂದರ್ಭದಲ್ಲಿ ಆಂದ್ರಪ್ರದೇಶ ರಾಜ್ಯದ ವಿಶೇಷಚೇತನಾಗಿದ್ದ ಜೈಪಾಲ್ ರೆಡ್ಡಿಯವರು ವ್ವಿಲ್ ಚೇರ್ ಮೇಲೆ ಓಡಾಡಿಯೇ ಸುಮಾರು ಇಪ್ಪತ್ತೈದು ಮೂವತ್ತು ವರ್ಷ ವಿವಿಧ ಖಾತೆಗಳ ಕೇಂದ್ರ ಮಂತ್ರಿಯಾಗಿ ಎಲ್ಲ ಹುದ್ದೆಗಳನ್ನು ನಿಬಾಯಿಸಿದ್ದರು. ಅವರಂತೆ ಬಾಗಲಕೋಟೆ ವಿಶೇಷಚೇತನರು ಕೂಡ ಮಿಂಚಬೇಕು ಎಂದರು.

ಕೈ, ಕಾಲು, ಕಣ್ಣು ಎಲ್ಲ ಅಂಗಾಂಗಳು ಸರಿಯಾಗಿ ಇದ್ದರೂ ಎಷ್ಟೋ ಜನರು ತಮ್ಮ ಜೀವನ ವ್ಯರ್ಥವಾಗಿ ಕಳೆದವರು ಇದ್ದಾರೆ ಅವರನ್ನು ಅಂಗವಿಕಲರು ಎನ್ನಬೇಕಾಗುತ್ತದೆ. ನಿಮ್ಮ ವಿಕಲತೆಯನ್ನು ಮರೆಮಾಚಿ ದೈರ್ಯದಿಂದ ಮುನ್ನುಗ್ಗಲು ಛಲ ತೊಟ್ಟಲ್ಲಿ ಸಾಧನೆಯ ದಾರಿ ಸರಳವಾಗಿರುತ್ತದೆ. ಇತರ ಕ್ರೀಡಾಪಟುಗಳಿಗಿಂತ ವಿಶೇಷಚೇತನ ಕ್ರೀಡಾಪಟುಗಳು ಪ್ಯಾರಾ ಒಲಂಪಿಕ್ ನಲ್ಲಿ ಭಾಗವಹಿಸಿ 29 ಕ್ರೀಡೆಗಳಲ್ಲಿ ಈ ದೇಶದ ಕೀರ್ತಿ ಪತಾಕಿಯನ್ನು ಹಾರಿಸಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

ಶಾಸಕ ಭೀಮಸೇನ್ ಚಿಮ್ಮನಕಟ್ಟಿ ಅವರು ಮಾತನಾಡಿ ವಿಶೇಷಚೇತನರಿಗೆ ಅನುಕಂಪ ಅಥವಾ ಅಯ್ಯೋ ಪಾಪ ಎನ್ನುವ ಭಾವನೆ ತೋರದೆ ಅವಕಾಶ ನೀಡುವ ಕೆಲಸವಾಗಬೇಕಾಗಿದೆ. ವಿಶೇಷಚೇತನರಿಗೆ ದೇವರು ವಿಶೇಷವಾದ ಶಕ್ತಿಯನ್ನು ನೀಡಿರುತ್ತಾನೆ ಎಂಬ ನಂಬಿಕೆ ಇದೆ. ದೇವರು ನೀಡಿರುವಂತಹ ಸಂಗೀತ, ಚಿತ್ರಕಲೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ರಾಜ್ಯ ರಾಷ್ಟ್ರಮಟ್ಟದ ಕಲಾವಿದರಾಗಿ ಬಲಿಷ್ಠರಾಗಬೇಕು ಎಂದರು.

ಇದನ್ನೂ ಓದಿ: Vijayapura News | ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ: ಸೇವಾ ಮನೋಭಾವನೆಗೆ ಕರೆ

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಭಾಕರ ಕವಿತಾಳ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಗುರುಪಾದ ಡೂಗನವರ, ಜಿಲ್ಲಾ ವಿಕಚೇತನರ ಕಲ್ಯಾಣಾಧಿಕಾರಿ ಮಹಾಂತೇಶ ಕುರಿ, ಅಂಗವಿಕಲರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ರಾಜು ತೇರದಾಳ, ಕಾರ್ಯದರ್ಶಿ ರಘು ಹುಬ್ಬಳ್ಳಿ ಸೇರಿದಂತೆ ಇತರರು ಇದ್ದರು.


LEAVE A REPLY

Please enter your comment!
Please enter your name here