ವಿಜಯಪುರ: ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ (ಜಾತಿ ಗಣತಿ) ವರದಿ Caste Census Report ಜಾರಿಗೊಳಿಸಲು ಒತ್ತಾಯಿಸಿ ಜಿಲ್ಲಾ ಅಹಿಂದ ಮುಖಂಡರ ವತಿಯಿಂದ ರಾಜ್ಯದ ಮುಖ್ಯಮಂತ್ರಿಗಳಿಗೆ ವಿಜಯಪುರ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ: Vijayapura News | ಉಚ್ಛ ನ್ಯಾಯಾಲಯದ ಆದೇಶವನ್ನು ಪಾಲಿಸುವಂತೆ ತಳವಾರ ಮಹಾಸಭಾ ಆಗ್ರಹ
ರಾಜ್ಯದ ಎಲ್ಲಾ ಜಾತಿಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿ ತಯಾರಿಸಲಾಗಿರುವ ಸಮೀಕ್ಷಾ ವರದಿಯನ್ನು ಜಾರಿಗೊಳಿಸಲು ರಾಜ್ಯ ಸರ್ಕಾರ ವಿಳಂಬ ಮಾಡುವ ಅಗತ್ಯವಿಲ್ಲ . ಸುಮಾರು 159 ಕೋಟಿ ರೂ.ಗಳನ್ನು ಖರ್ಚು ಮಾಡಿ ತಯಾರಿಸಿರುವ ಈ ವರದಿಯು ತಕ್ಷಣ ಜಾರಿಯಾಗಬೇಕು . ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಹೇಳಿರುವುದು ಸ್ವಾಗತಾರ್ಹ.
Caste Census Report ರಾಜ್ಯದಲ್ಲಿ ದಿವಂಗತ ದೇವರಾಜ ಅರಸು ಅವರು ಹಾವನೂರ ಆಯೋಗ ರಚಿಸಿ ಹಿಂದುಳಿದ ವರ್ಗಗಳ ಆಧ್ಯಯನಕ್ಕೆ ಮುನ್ನುಡಿ ಬರೆದರು. ಅದರಂತೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಮೀಸಲಾತಿಯನ್ನು ಶೇ.73 ಕ್ಕೆ ಏರಿಸುವ ಪ್ರಯತ್ನವನ್ನು ಮಾಡಿದರು. ಹೀಗಾಗಿ ಹಿಂದಿನಿಂದಲೂ ಸಾಮಾಜಿಕ ನ್ಯಾಯದ ಪರವಾಗಿರುವ ಕರ್ನಾಟಕ ಈಗ ಜಾತಿ ಗಣತಿ ಅಥವಾ ರಾಜ್ಯದ ಎಲ್ಲಾ ಜಾತಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಿ ಸಮೀಕ್ಷಾ ವರದಿಯನ್ನು ತಯಾರಿಸಿರುವುದು ಇಡೀ ದೇಶಕ್ಕೆ ಮಾದರಿಯಾಗಿದೆ.
ಇದನ್ನೂ ಓದಿ: Vijayapura News | ಕಿತ್ತೂರರಾಣಿ ಚನ್ನಮ್ಮ ಜ್ಯೋತಿ ರಥಕ್ಕೆ ಚಾಲನೆ – ಟಿ.ಭೂಬಾಲನ
ಈ ಜಾತಿ ಗಣತಿಯ ವರದಿ ಜಾರಿಗೆ ಬಂದರೆ ಜಾತಿಗಳ ವಸ್ತು ಸ್ಥಿತಿ ತಿಳಿಯಲಿದ್ದು, ಸರ್ಕಾರಗಳು ಅದಕ್ಕೆ ಪೂರಕವಾಗಿ ಕಾರ್ಯಕ್ರಮಗಳನ್ನು ರೂಪಿಸಬಹುದು. ರಾಜ್ಯದ 7 ಕೋಟಿ ಜನಸಂಖ್ಯೆಯ ಅಧ್ಯಯನವಾಗಿರು ವುದರಿಂದ ಜಾತಿ ಗಣಿತಯನ್ನು ಸರ್ಕಾರ ಒಪ್ಪಿಕೊಳ್ಳುವುದರಿಂದ ಎಲ್ಲಾ ಜಾತಿಗಳಿಗೂ ಒಂದಲ್ಲ ಒಂದು ರೀತಿಯಲ್ಲಿ ಅನುಕೂಲವಾಗಲಿದೆ.
ಈ ವರದಿಯು ಸಂಗ್ರಹಿಸಿದ ವಿಧಾನವನ್ನು ತಜ್ಞರ ಸಮಿತಿ ಮತ್ತು ಐಐಎಂ ಸಂಸ್ಥೆಗಳು ದೃಢೀಕರಿಸಿವೆ. ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಜಾತಿ ಗಣತಿ ನಡೆಸುವುದಾಗಿ ವಾಗ್ದಾನ ನೀಡಿತ್ತು ಎನ್ನುವುದನ್ನು ಮರೆಯಬಾರದು. ಕೊಟ್ಟ ಮಾತಿನಂತೆ ನಡೆಯಬೇಕು. ಇದಕ್ಕೆ ಕೆಲವರು ಆಕ್ಷೇಪ ಎತ್ತಿದರೆ ಅದನ್ನು ಒಪ್ಪಬೇಕೋ ಅಥವಾ ಬಿಡಬೇಕೋ ಎನ್ನುವುದು ಸಚಿವ ಸಂಪುಟದ ಸಭೆಯ ಅಧಿಕಾರ ಆದರೆ ವರದಿಯನ್ನು ಮಂಡಿಸರ್ಲೆ ಬಾರದು ಎಂಬುದು ಸರ್ವಾಧಿಕಾರಿ ಧೋರಣೆಯಾಗುತ್ತದೆ. ಇಂತಹ ಜೊಳ್ಳು ಬೆದರಿಕೆಗೆ ಮಣೆಹಾಕದೆ ಮಾನ್ಯ ಮುಖ್ಯಮಂತ್ರಿಯವರು ವರದಿಯನ್ನು ಒಪ್ಪಿ ಬಿಡುಗಡೆಗೊಳಿಸಬೇಕೆಂದು ಈ ಮೂಲಕ ಸಮಸ್ಯೆ ಶೋಷಿತ ಸಮುದಾಯಗಳ ಪರವಾಗಿ ಜಿಲ್ಲಾ ಅಹಿಂದ ಘಟಕ ಒತ್ತಾಯಿಸುತ್ತದೆ.
ಈ ಸಂದರ್ಭದಲ್ಲಿ ಎಸ್.ಎಂ.ಪಾಟೀಲ (ಗಣಿಯಾರ), ಸೋಮನಾಥ ಕಳ್ಳಿಮನಿ, ಸಂಜು ವೈ.ಕಂಬಾಗಿ, ಅಕ್ರಮ ಮಾಶ್ಯಾಳಕರ, ಕಾಮೇಶ ಉಕ್ಕಲಿ, ಮಲ್ಲು ಬಿದರಿ, ದಾದಾಪೀರ ಬಡಕಲ್, ಭೀಮನಗೌಡ ಹಳಿಮನಿ, ನಿರ್ಮಲಾ ಹೊಸಮನಿ, ಸಚಿತಾ ವಗ್ಗರ, ಭೀಮು ಉತ್ನಾಳ, ಮಲ್ಲು ಕಾಮನಕೇರಿ, ಭೀರಪ್ಪ ಜುಮನಾಳ ಇನ್ನಿತರರು ಇದ್ದರು.


















