ಬದುಕು ಹುಡುಕದಿರು…ಎಸ್.ಪಿ.ಯಂಭತ್ನಾಳ

ಜನರ ನುಡಿ ಕೇಳದಿರು ದೇವರ ಕರುಣೆ ಬೇಡದಿರು ಇಲ್ಲಿ ಯಾರಿಂದೇನಾಗದು ಆಗುವುದೆಲ್ಲ ಆಗುವುದು ಬದುಕು ಯಾರನು ನಂಬಿ ಬದುಕದಿರು ನಿನ್ನನ್ನು ನೀನು ನಂಬದೇ ಇರದಿರು ಮುನ್ನುಗ್ಗಲು ಕೆಚ್ಚೆದೆಯೊಂದಿರಲಿ ಉಳಿದದ್ದೆಲ್ಲವೂ ಅಳಿಯಲಿ ಹುಟ್ಟು ಏಕೆ! ಬದುಕು ಏಕೆ! ಸಾವು ಏಕೆ೦ದು ಬದುಕು ಹುಡಕದಿರು ಹುಟ್ಟುವಾಗ ಹುಟ್ಟಿದೆ ಬದುಕಿರುವಷ್ಟು ಬದುಕು ಸಾಯುವಾಗ ಸಾಯಲಿ ಚಿಂತೆಯೊಂದು ಬಾರದಿರಲಿ ಮನ ತುಂಬಿ ನಿಂತ ಮನದ ತೃಪ್ತಿಯ ಸಿರಿತನ ಕಳೆದುಕೊಳ್ಳದಿರು ಯಾರಿಂದೇನು ಬಯಸದಿರು ಬಯಸಿದ್ದೆಲ್ಲವೂ ವ್ಯರ್ಥವೆಂದು ತಿಳಿದಿರು ಒಂದು ಕ್ಷಣ ಜಗವರಿತು ನೋಡು ಏನಿಹುದಿಲ್ಲಿ! […]
ನುಡಿಸದಿರು ನುಡಿಯದ ವೀಣೆ

ನುಡಿಸದಿರು ನುಡಿಯದ ವೀಣೆ ನುಡಿಸದಿರು ನುಡಿಯದಿರುವ ವೀಣೆ ನಿನ್ನಾಸೆಯ ಸ್ವರವು ವೀಣೆಯೊಳಿಲ್ಲ ಇನ್ನೇಕೆ ಬೇಕು ನುಡಿಸುವ ಭ್ರಾಂತಿ ಕಾಣದೇನು ಹರಿದು ಹೋದ ತಂತಿ! ನೂರು ಕನಸು ಕಟ್ಟಬೇಡ ಹುಚ್ಚ ಮನಸು ಬೆನ್ನ ಹತ್ತಬೇಡ…. ವೀಣೆಯೊಳಿಲ್ಲ ನಾದವು ನುಡಿಸಬಲ್ಲೇನು ರಾಗವ ನೊಂದ-ಬೆಂದ ಒಡಲಿಗೆ ಬೇಕು ಮಧುರ ರಾಗವು ರಾಗ ನುಡಿಯದ ವೀಣೆಯೊಳು ಅನುರಾಗ ಲಯವು ಹೊಮ್ಮಿತೇನು! ವೀಣೆ ನುಡಿದು-ನುಡಿದು ಜೀವವಿಲ್ಲ ಜೀವವಿಲ್ಲದ ವೀಣೆ ನುಡಿಸಿ ದರಿದ್ರನಾಗಬೇಡ ವೀಣೆ ಬಿಟ್ಟ ಮೇಲೆ ಏಳು ಭ್ರಾಂತಿ ಕಳೆದು ಮನಕೆ ಮುಕ್ತಿ ದೊರಕೀತು
ಪ್ರೀತಿಸುವ ಜೀವವಿದೆ

ಬೀಸುವ ಎಳೆ ಗಾಳಿಯಲ್ಲಿ ನಿನ್ನ ಸ್ಪರ್ಶ ಬಂದಿದೆ ಗಗನ ತುಂಬ ಚುಕ್ಕಿಯರಳಿವೆ ನೆನಪು ಬಂದು ಮತ್ತೆ ಪ್ರೀತಿ ಚಿಗುರಿದೆ ಸುಳಿ-ಗಾಳಿ ಬೀಸಿ ಪ್ರಕೃತಿ ಒಡಲು ಸೊಬಗು-ಬೆಡಗು ತುಂಬಿ ನೆನಪು ಬಂದು ಮತ್ತೆ ಕಣ್ಣೀರ ಕಡಲ ಉಕ್ಕಿದೆ. ಎಳೆ ಗಾಳಿ ಬೀಸಿದರೆ ನಿನ್ನ ಸ್ಪರ್ಶವೇಕೆ ಬಂತು ಹೋಗಿಲ್ಲವೇನು ಪ್ರೀತಿ ಸತ್ತು ತಂಗಾಳಿಯಲಿ ತಂಗಾಳಿಯಾಗಿ ಸ್ಪರ್ಶಿಸದಿರು ತಂಗಾಳಿಯ ಹಾಗಾಗಬೇಡ ಬಿಗಿದಪ್ಪಿಕೊಂಡ ಪ್ರೀತಿಗೆ ಬರಡಾಗಬೇಡ ತಂಗಾಳಿಯ ನಿನ್ನ ಸ್ಪರ್ಶವಾಗಿ ನೆನಪು ಬಂದು ಮತ್ತೆ ಭಾವ ತುಂಬಿ ಕವಿತೆ ಮೂಡಿದೆ. ಹೊಟ್ಟೆಯುರಿಸುವ, ಮನವ […]
ಬದುಕು ಹುಡುಕದಿರು

ಜನರ ನುಡಿ ಕೇಳದಿರು ದೇವರ ಕರುಣೆ ಬೇಡದಿರು ಇಲ್ಲಿ ಯಾರಿಂದೇನಾಗದು ಆಗುವುದೆಲ್ಲ ಆಗುವುದು ಯಾರನು ನಂಬಿ ಬದುಕದಿರು ನಿನ್ನನ್ನು ನೀನು ನಂಬದೇ ಇರದಿರು ಮುನ್ನುಗ್ಗಲು ಕೆಚ್ಚೆದೆಯೊಂದಿರಲಿ ಉಳಿದದ್ದೆಲ್ಲವೂ ಅಳಿಯಲಿ ಹುಟ್ಟು ಏಕೆ! ಬದುಕು ಏಕೆ! ಸಾವು ಏಕೆಂದು ಬದುಕು ಹುಡಕದಿರು ಹುಟ್ಟುವಾಗ ಹುಟ್ಟಿದೆ ಬದುಕಿರುವಷ್ಟು ಬದುಕು ಸಾಯುವಾಗ ಸಾಯಲಿ ಚಿಂತೆಯೊಂದು ಬಾರದಿರಲಿ ಮನ ತುಂಬಿ ನಿಂತ ಮನದ ತೃಪ್ತಿಯ ಸಿರಿತನ ಕಳೆದುಕೊಳ್ಳದಿರು ಯಾರಿಂದೇನು ಬಯಸದಿರು ಬಯಸಿದ್ದೆಲ್ಲವೂ ವ್ಯರ್ಥವೆಂದು ತಿಳಿದಿರು ಒಂದು ಕ್ಷಣ ಜಗವರಿತು ನೋಡು ಏನಿಹುದಿಲ್ಲಿ! ಏನಿಲ್ಲದ […]