ಬೆಂಗಳೂರು. ಮೇ. 22: ಕೊರೋನಾ ವೈರಸ್ ತಡೆಗಟ್ಟುವಲ್ಲಿ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರ ಹಲವಾರು ನಿಯಮಗಳನ್ನು ಜಾರಿಗೆ ತಂದರು ವೈರಸ್ ಪ್ರಭಾವ ಮಾತ್ರ ನಿಲ್ಲುತ್ತಿಲ್ಲ. ದಿನೇ ದಿನೆ ತನ್ನ ಅಟ್ಟಹಾಸ ಮುಂದುವರೆಸುತ್ತಿದೆ. ದೇಶದಲ್ಲಿ ನಾಲ್ಕನೇ ಹಂತದ ಲಾಕ್ ಡೌನ್ ಜಾರಿಯಲ್ಲಿದೆ. ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗೆ ಅನುವು ಮಾಡಿಕೊಡಲಾಗಿದೆ. ಲಾಕ್ ಡೌನ್ ಸಡಿಲಿಕೆಯಾದ ನಂತರ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1743 ಕ್ಕೆ ಏರಿಕೆಯಾಗಿದೆ. ರಾಜ್ಯ ಸರಕಾರ ಭಾನುವಾರ ಸಂಪೂರ್ಣವಾಗಿ ಕರ್ಪ್ಯೂ ಆದೇಶವನ್ನು ಜಾರಿಗೆ ತಂದಿದೆ.
ಹೀಗಾಗಿ ಭಾನುವಾರ ಏನಿರುತ್ತೆ ? ಎನಿರಲ್ಲ ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ.
ಏನಿರುತ್ತೆ?
- ಅನಾರೋಗ್ಯ ಸಮಸ್ಯೆವುಳ್ಳವರಿಗೆ ಆಸ್ಪತ್ರಗೆ ಹೋಗಲು ಅವಕಾಶ
- ಗರ್ಭಿಣಿ ಸ್ತ್ರೀಯರಿಗೆ ತಪಾಸಣೆಗೆ ಹೋಗಲು ಅವಕಾಶ
- ಹಣ್ಣು, ತರಕಾರಿ, ದಿನಸಿ ಪದಾರ್ಥ, ಮಾಂಸ
- ಆಸ್ಪತ್ರೆ, ಮೆಡಿಕಲ್ ಸ್ಟೋರ್ಸ್, ಪಾರ್ಮಸಿ
- ಡಾಕ್ಟರ್, ನರ್ಸ, ಆಂಬುಲೆನ್ಸ್ ಓಡಾಟಕ್ಕೆ ಅವಕಾಶ
- ಮಾಧ್ಯಮ
ಏನಿರಲ್ಲ?
- ಸಾರ್ವಜನಿಕ ಸಂಚಾರಕ್ಕೆ ನಿರ್ಬಂಧ
- ಬಾರ, ಸಲೂನ್, ಪ್ಯಾನ್ಸಿ ಸ್ಟೋರ್ ಬಂದ
- ಗಾರ್ಮೆಂಟ್ಸ್ ಪ್ಯಾಕ್ಟರಿ, ಕಾರ್ಖಾನೆ, ಕಂಪನಿ
- ಆಟೋ ಟ್ಯಾಕ್ಸಿ ಕ್ಯಾಬ್ ಸೇವೆ ನಿರ್ಬಂಧ
- ನಗರದ ಎಲ್ಲಾ ರಸ್ತೆ ಬಂದ್
- ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದ ಅಂಗಡಿ ಮುಗಟ್ಟು ಬಂದ್
- ಖಾಸಗಿ ವಾಹನ ಬಳಸಿ ಸಂಚರಿಸುವಂತಿಲ್ಲ
- ಪಾರ್ಕ್, ಜಾಗಿಂಗ್, ವಾಕಿಂಗ್ ಇಲ್ಲ ಅವಕಾಶ