ವಿಜಯಪುರ : ಇಂಗ್ಲೀಷ್ ಭಾಷೆ ಕುರಿತು ಹೆದರಿಕೆ, ಅಳುಕು ಬೇಡ – ಪ್ರಾಂಶುಪಾಲ ಡಾ. ಎಸ್.ಎಲ್. ಪಾಟೀಲ ಅಭಿಮತ

ಇಂಗ್ಲೀಷ್ ಕೂಡ ಒಂದು ಸರಳ ಭಾಷೆಯಾಗಿದೆ. English language ವ್ಯಾಕರಣಕ್ಕೆ ಆದ್ಯತೆ ನೀಡದೆ ಮೊದಲು ಮಾತನಾಡಲು ಪ್ರಾರಂಭಿಸಿ ಆಮೇಲೆ ಎಲ್ಲವೂ ತಾನೇ ಬರುತ್ತದೆ.

0
14

ವಿಜಯಪುರ: ಇಂಗ್ಲೀಷ್ ಕೂಡ ಒಂದು ಸರಳ ಭಾಷೆಯಾಗಿದೆ. English language ವ್ಯಾಕರಣಕ್ಕೆ ಆದ್ಯತೆ ನೀಡದೆ ಮೊದಲು ಮಾತನಾಡಲು ಪ್ರಾರಂಭಿಸಿ ಆಮೇಲೆ ಎಲ್ಲವೂ ತಾನೇ ಬರುತ್ತದೆ. ಇಂಗ್ಲೀಷ್ ಕುರಿತಾದ ಹೆದರಿಕೆ, ಕೀಳರಿಮೆ ಹೋಗಬೇಕು ಅಂದಾಗ ಮಾತ್ರ ನಾವು ಇಂಗ್ಲೀಷ್‍ನಲ್ಲಿ ಮಾತನಾಡಲು, ಬರೆಯಲು ಸಾಧ್ಯ ಎಂದು ಸರಕಾರಿ ಪ್ರಥಮ ದರ್ಜೆ ವಸತಿ ಕಾಲೇಜು ಹಡಲಗೇರಿಯ ಪ್ರಾಂಶುಪಾಲರಾದ ಡಾ. ಎಸ್.ಎಲ್. ಪಾಟೀಲ ಹೇಳಿದರು.

ಅವರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವಿಜಯಪುರ ಇಲ್ಲಿನ ಆಂತರಿಕ ಗುಣಮಟ್ಟ ಭರವಶಾ ಕೋಶ ಹಾಗೂ ಪ್ರೇರಣಾ ಸಂಯುಕ್ತಾಶ್ರಯದಲ್ಲಿ ಜರುಗಿದ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡಿದರು.

ಇದನ್ನೂ ಓದಿ: “ಬಸನಗೌಡ ಪಾಟೀಲ ಯತ್ನಾಳರ ಉಚ್ಛಾಟನೆ: ಕರ್ನಾಟಕ ರಾಜಕೀಯದಲ್ಲಿ ಹೊಸ ತಿರುವು”

ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಡಾ. ರಾಘವೇಂದ್ರ ಗುರ್ಜಾಲ ಕಂಪ್ಯೂಟರ್ ಜ್ಞಾನ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತೀರಾ ಅವಶ್ಯಕವಾಗಿದೆ. ವಿದ್ಯಾರ್ಥಿನಿಯರು ಕಂಪ್ಯೂಟರ್ ಜ್ಞಾನ ಪಡೆದುಕೊಳ್ಳುವ ಮುಖಾಂತರ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಆರ್.ಎಸ್. ಕಲ್ಲೂರಮಠ ಮಾತನಾಡಿ ಇಂಗ್ಲೀಷ ಜ್ಞಾನ ಹಾಗೂ ಕಂಪ್ಯೂಟರ್ ಜ್ಞಾನ ಎರಡೂ ಸಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಅತೀ ಅವಶ್ಯವಾಗಿದ್ದುಇಂತಹ ಕಾರ್ಯಗಾರ ಹಾಗೂ ಉಪನ್ಯಾಸಗಳ ಸದುಪಯೋಗ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಇದನ್ನೂ ಓದಿ: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಬಸನಗೌಡ ಪಾಟೀಲ ಯತ್ನಾಳ ಖಂಡನೆ

English language ಆಂತರಿಕ ಗುಣಮಟ್ಟ ಭರವಶಾ ಕೋಶದ ಸಂಚಾಲಕರಾದ ಡಾ. ಚಿದಾನಂದ ಎಸ್. ಆನೂರ ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸಿದರು. ಆಂತರಿಕ ಗುಣಮಟ್ಟ ಭರವಶಾ ಕೋಶದ ಸಹಸಂಚಾಲಕರಾದ ಡಾ. ಆನಂತ ಪದ್ಮನಾಭ ಸರವಂದಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಆನಂದ ಕುಲಕರ್ಣಿ ವಂದಿಸಿದರು. ಪ್ರೊ. ಪಿ.ಬಿ. ಬಿರಾದಾರ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಡಾ. ರಾಜಶೇಖರ ಬೆನಕನಹಳ್ಳಿ, ಡಾ. ಎಂ.ಆರ್. ಕೆಂಭಾವಿ, ಪ್ರೊ. ನಾತುರಾಮ ಜಾಧವ, ಪ್ರೊ. ಆಸೀಫ ರೋಜಿನದಾರ, ಪ್ರೊ. ರಮೇಶ ಬಳ್ಳೊಳ್ಳಿ, ಡಾ. ಭಾರತಿ ಹೊಸಟ್ಟಿ, ಪ್ರೊ. ಅರ್ಪಿತಾ ಪಾಟೀಲ ಹಾಗೂ ಇತರ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here