ವಿಜಯಪುರ: ಭಾರತೀಯ ಬೌದ್ಧ ಮಹಾಸಭಾ, ಸಮತಾ ಸೈನಿಕ ದಳ ಹಾಗೂ ಮಹಿಳಾ ಘಟಕ, ವಿಜಯಪುರ ವತಿಯಿಂದ. ವರ್ಷಾವಾಸ ಸಮಾರೋಪ ಸಮಾರಂಭ ದ ನಿಮಿತ್ಯವಾಗಿ ಸಂಘ ದಾನ ಪುಣ್ಯ ಪೂಜಾ ಮಹೋತ್ಸವ ಧಮ್ಮ ಕಾರ್ಯಕ್ರಮವನ್ನು ದಿನಾಂಕ: 17-11-2024 ರಂದು ಬೆಳಿಗ್ಗೆ 10.00 ಗಂಟೆಗೆ ವಿಜಯಪುರ ನಗರದ ಕೃಷಿ ತಂತ್ರಜ್ರ ಸಂಸ್ಥೆ, ಕನಕದಾಸ ಬಡಾವಣೆ, ರಸ್ತೆ, ಜಿಲ್ಲಾ ಪಂಚಾಯತ ಕಚೇರಿ ಹತ್ತಿರ, ವಿಜಯಪುರ ಇಲ್ಲಿ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: Vijayapura News | ಡಿಸೆಂಬರ್ 14ರಂದು ರಾಷ್ಟ್ರೀಯ ಲೋಕ ಅದಾಲತ್ – ಶಿವಾಜಿ ಅನಂತ ನಲವಾಡೆ
ಅಂದು ಬೆಳಿಗ್ಗೆ-9:00 ಘಂಟೆ ನಗರದ ಮನುಗೂಳಿ ರಸ್ತೆ ಬಿ.ಡಿ.ಎ ಕ್ರಾಸ್ ಹತ್ತಿರವಿರುವ ಡಾ.ಬಾಬಾಸಾಹೇಬ ಅಂಬೇಡ್ಕರ್ ಮೂರ್ತಿಗೆ ಮಾಲಾರ್ಪಣೆ ಮತ್ತು ಗೌರವ ವಂದನೆ ಸಮತಾ ಸೈನಿಕರಿಂದ ಹಾಗೂ ಮುಂಜಾನೆ 9:30 ಘಂಟೆಗೆ ತಥಾಗತ ಗೌತಮ ಬುದ್ಧ, ಪರಮ ಪೂಜ್ಯ ಬೋದಿ ಸತ್ವ ಡಾ, ಬಿ. ಆರ್. ಅಂಬೇಡ್ಕರವರ ಭಾವಚಿತ್ರದ ಭವ್ಯ ಮೆರವಣಿಗೆ ಬೆಳ್ಳಿ ರಥದಲ್ಲಿ ಜರುಗಲಿದೆ.
ವರ್ಷಾವಾಸ ಸಮಾರೋಪ ಸಮಾರಂಭ ಬೆಳಿಗ್ಗೆ 10.00 ಗಂಟೆಗೆ ನಡೆಯುವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಪೂಜ್ಯ ಭದಂತ ಪ್ರಜ್ಞಾಶೀಲ ಥೇರೋ ಮಾರ್ಗದರ್ಶಕರು, ಬದ್ಧಗಯಾ ಮುಕ್ತಿ ಆಂದೋಲನ ಬಿಹಾರ್, ಪೂಜ್ಯ ಭದಂತ ಭೊಧಿದತ್ತ ಥೇರೋ ಸಂಯೋಜಕರು, ನಲಂದಾ ಬೌದ್ಧ ವಿಶ್ವವಿದ್ಯಾಲಯ, ಚಾಮರಾಜನಗರ, ಪೂಜ್ಯ ಬಿಕ್ಕುಣಿ ಸುಮನಾ ಥೇರಿ ಚೇತವನ ಬದ್ದ ವಿಹಾರ ಕಲಬುರಗಿ, ಆರ್ಯಾಜ ಧಮ್ಮದಿನ್ನಾ ಬುದ್ದ ವಿಹಾರ ಅಣದೂರ ಬೀದರ ಇವರು ವಹಿಸುವರು.
ಇದನ್ನೂ ಓದಿ: Vijayapura News | ನವೆಂಬರ್ 20ರಂದು ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾವಳಿ
ಅಧ್ಯಕ್ಷತೆಯನ್ನು ಆಯ ಬಸವರಾಜ ಛಲವಾದಿ, ಉಪನಿರ್ದೇಶಕರು, ಪಶು ಸಂಗೊಪನಾ ಇಲಾಖೆ, ವಿಜಯಪುರ, ಮುಖ್ಯ ಅತಿಥಿಗಳಾಗಿ ಆಯ್.ಡಾ.ಅಶೋಕ ಗೊಣಸಗಿ, ಉಪನಿರ್ದೇಶಕರು, ಪಶು ಸಂಗೋಪನಾ ಇಲಾಖೆ, ವಿಜಯಪುರ, ಆಯ್. ಬಸವರಾಜ ಹೋಳ್ಕರ ಸಂಘಟನಾ ಕಾರ್ಯದರ್ಶಿಗಳು (ಬಿ.ಎಸ್.ಐ.) ಉತ್ತರ ಕರ್ನಾಟಕ, ಆಯ್. ಡಾ. ಸುಜಾತಾ ಚಲವಾದಿ, ಸಹಾಯಕ ಪ್ರಾಧ್ಯಾಪಕರು, ಎಸ್.ಕೆ. ಮಹಾವಿದ್ಯಾಲಯ, ತಾಳಿಕೋಟಿ, ಉಪನ್ಯಾಸಕರಾಗಿ ಆಯ್. ಬುದ್ಧಘೋಷ್ ದೇವೇಂದ್ರ ಹೆಗ್ಗಡೆ, ಸಂಯೋಜಕರು, ಅಖಿಲ ಭಾರತ ಬೌದ್ಧ ವೇದಿಕೆ, ಕರ್ನಾಟಕ ಆದಕಾರಣ ಭಾರತೀಯ ಬೌದ್ದ ಮಹಾಸಭೆಯ ಪದಾಧಿಕಾರಿಗಳು ಕಾರ್ಯಕರ್ತಗಳು, ಪ್ರಗತಿಪರ ಚಿಂತಕರು, ದಲಿತ ಸಂಘಟನೆಯ ಮುಖಂಡರುಗಳು, ಸೇರಿದಂತೆ ಅಂಬೇಡ್ಕರ್ ಅನುಯಾಯಿಗಳು, ಆಗಮಿಸಿ ಈ ಸಂಭ್ರಮದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಅಧ್ಯಕ್ಷರು, ಭಾರತೀಯ ಬೌದ್ಧ ಮಹಾಸಭಾ, ವಿಜಯಪುರ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.