Vijayapura News | ಎಲ್ಲಾ ಮುಗಿದ ಮೇಲೆ ಟೀಂ ಮಾಡಿದ್ದಾರೆ | ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಕ್ರೋಶ

ಎಲ್ಲಾ ಮುಗಿದ ಮೇಲೆ ಟೀಂ ಮಾಡಿದ್ದಾರೆ, ಇದು ಕಾಟಾಚಾರಕ್ಕೆ ಮಾಡಿದ ಟೀಂ ಹಾಗಾಗಿ ನಾನು ಹಾಗೂ ಲೋಕಸಭಾ ಸದಸ್ಯರು ಬಿಜೆಪಿ ತಂಡಕ್ಕೆ ಬಹಿಷ್ಕಾರ ಹಾಕಿದ್ದೇವೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದರು.

0
27
ಬಸನಗೌಡ ಪಾಟೀಲ್ ಯತ್ನಾಳ image

ವಿಜಯಪುರ: ವಕ್ಫ್ ನೋಟಿಸ್ ವಿಚಾರಕ್ಕೆ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಜನರಿಗೆ ಆಗುತ್ತಿರುವ ಅನ್ಯಾದ ಕುರಿತಾಗಿ ಮಾಹಿತಿ ಪಡೆಯಲು ಬಿಜೆಪಿ ತಂಡ ರಚಿಸಿದ್ದು, ಎಲ್ಲಾ ಮುಗಿದ ಮೇಲೆ ಟೀಂ ಮಾಡಿದ್ದಾರೆ, ಇದು ಕಾಟಾಚಾರಕ್ಕೆ ಮಾಡಿದ ಟೀಂ ಹಾಗಾಗಿ ನಾನು ಹಾಗೂ ಲೋಕಸಭಾ ಸದಸ್ಯರು ಬಿಜೆಪಿ ತಂಡಕ್ಕೆ ಬಹಿಷ್ಕಾರ ಹಾಕಿದ್ದೇವೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದರು.

ವಿಜಯಪುರ ನಗರದಲ್ಲಿ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಅವರು, ಇಲ್ಲಿ ನಾನು ಶಾಸಕ ಹಾಗೂ ನಮ್ಮ ಲೋಕಸಭಾ ಸದಸ್ಯರಿದ್ದಾರೆ, ನಮ್ಮಿಬ್ಬರನ್ನ ಬಿಟ್ಟು ಸಮಿತಿ ಮಾಡಲಾಗಿದೆ, ಇದು ನಿಜವಾಗಿ ಹೋರಾಟ ಮಾಡುವವರನ್ನು ತುಳಿದಂತಾಗುತ್ತದೆ, ವಿಜೇಂದ್ರನ ಕಾರ್ಯಕ್ರಮವೇ ನಮ್ಮನ್ನ ತುಳಿಯುವ ಕಾರ್ಯಕ್ರಮ. ಪೂಜ್ಯ ತಂದೆಯವರು ಅದನ್ನೇ ಮಾಡಿದರು ಪೂಜ್ಯ ತಂದೆಯವರ ಮಗನೂ ಅದನ್ನೇ ಮಾಡುತ್ತಿದ್ದಾರೆ ಎಂದು ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ ಕಿಡಿಕಾರಿದರು.

ಇದನ್ನೂ ಓದಿ: Vijayapura News | ಅಧ್ಯಾಪಕರ ‘ಸಾಮರ್ಥ್ಯ ವೃದ್ಧಿ’ ಕಾರ್ಯಾಗಾರಗಳು ಮಹತ್ವಪೂರ್ಣವಾದದ್ದು – ಡಾ.ಬಿ.ಎಮ್.ಪಾಟೀಲ್

ವಕ್ಫ್ ವಿಚಾರವಾಗಿ ಈ ಹಿಂದೆ ವಿಧಾನಸಭೆಯಲ್ಲಿ ನಾನೇ ಮಾತನಾಡಿದೆ, ನಾನು ವಿಧಾನಸಭೆಯಲ್ಲಿ ಮಾತನಾಡಿದ್ದರ ಕುರಿತು ದಾಖಲೆ ಇದೆ, ಸಹಿ ಮಾಡಿದ್ದ ಯಾರೊಬ್ಬರೂ ವಿಧಾನಸಭೆಯಲ್ಲಿ ವಕ್ಪ್ ಬಗ್ಗೆ ಮಾತನಾಡಲು ಮುಂದೆ ಬಂದಿರಲಿಲ್ಲ, ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಿಎಂ ಬಸವರಾಜ್ ಬೊಮ್ಮಾಯಿ ಅವರು ನನ್ನನ್ನು ಕರೆಯಿಸಿ ವಕ್ಫ್ ಕುರಿತು ಮಾತನಾಡಲು ಹೇಳಿದರು. ಯಾರೋ ಮಾತನಾಡಲು ರೆಡಿ ಇಲ್ಲ ಅಧ್ಯಯನ ಮಾಡಿಲ್ಲ, ನೀವೇ ಮಾತನಾಡಿ ಎಂದು ಹೇಳಿದ್ದಕ್ಕೆ ನಾನು ದಾಖಲೆಗೆ ಸಹಿ ಮಾಡಿ ಮಾತನಾಡಿದೆ, ರಾಜ್ಯದಲ್ಲಿ ವಕ್ಪ್ ಕುರಿತು ಹೋರಾಟ ಆರಂಭಿಸಿದ್ದೆ ನಾನು ಈಗ ನಮ್ಮನ್ನು ತುಳಿಯುವ ಪ್ರಯತ್ನ ವಿಜಯೇಂದ್ರ ಟೀಮ್ ಮಾಡುತ್ತಿದೆ ಅದು ಎಂದಿಗೂ ಸಾಧ್ಯವಿಲ್ಲ ಎಂದು ಅವರು ಕುಟುಕಿದರು.

ಈ ಹಿಂದೆ ಯಡಿಯೂರಪ್ಪ ಸಿಎಂ ಇದ್ದಾಗ ಜಮೀರ್ ಅಹ್ಮದ್ ಖಾನ್ ಗೆ 1,000 ಕೋಟಿ ರೂಪಾಯಿ ಅನುದಾನ ನೀಡಿದ್ದರು. ಇದನ್ನು ನಾನು ಪ್ರಸ್ತಾಪಿಸಿ ವಿರೋಧ ಮಾಡಿದ್ದಕ್ಕೆ ಅದನ್ನು ವಾಪಸ್ ಪಡೆದರು. ಪೂಜ್ಯ ತಂದೆಯವರು ಜಮೀರ್ ಗೆ ಸಾವಿರ ಕೋಟಿ ರೂಪಾಯಿ ಅನು ದಾನ ನೀಡಿದ್ದರು ಎಂದು ವಿಜಯೇಂದ್ರ ಟೀಮ್ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: Bagalkote News | ಏಕಲವ್ಯ – ವೈದ್ಯಕೀಯ ಭಿತ್ತಿಚಿತ್ರ ಪ್ರದರ್ಶನ ಸ್ಪರ್ಧೆ| ಡಾ.ವೀರಣ್ಣ ಚರಂತಿಮಠರಿಂದ ಅಭಿನಂಧನೆ

ವಕ್ಫ್ ಆಸ್ತಿ ಕುರಿತು ರಾಜ್ಯದಲ್ಲಿ ಹಾಗೂ ದೇಶದಲ್ಲಿ ತಪ್ಪು ಮಾಹಿತಿ ನೀಡುತ್ತಿದ್ದಾರೆ, ವಿಜಯ ಪುರದಲ್ಲಿ 11000 ಎಕರೆ ವಕ್ಫ್ ಆಸ್ತಿ ಎಂದು ಹೇಳಿದ್ದ ಸಚಿವರು ಈಗ 16,000 ಎಕರೆ ಎಂದು ಹೇಳುತ್ತಿದ್ದಾರೆ, ಇದೇ ಮುಂಬರುವ ನವ್ಹೆಂಬರ್ ಮೂರರ ಒಳಗೆ ರೈತರ ಪಹಣಿಯಲ್ಲಿ ವಕ್ಫ್ ಎಂದು ನಮದಾಗಿದ್ದನ್ನು ತೆಗೆಯಬೇಕು, ಇಲ್ಲವಾದರೆ ಉಗ್ರ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಜಮೀರ್ ಅಹ್ಮದ್ ಖಾನ್‌ಗೆ ಶಾಸಕ ಯತ್ನಾಳ್ ಎಚ್ಚರಿಕೆ ನೀಡಿದರು.

ಬಸನಗೌಡ ಪಾಟೀಲ್ ಯತ್ನಾಳ ವಕ್ಪ್ ವಿಚಾರದಲ್ಲಿ ಡಿಸಿ ನೇತೃತ್ವದ ಟಾಸ್ಕ ಪೋರ್ಸ್ ರಚನೆ ಮಾಡಿರೋ ಜಿಲ್ಲಾ ಉಸ್ತುವಾರಿ ಸಚಿವರ ಕ್ರಮಕ್ಕೆ ಸ್ವಾಗತ. ಆದರೆ ನವ್ಹೆಂಬರ್ ಮೂರರ ಒಳಗೆ ರೈತರ ಪಹಣಿಯಲ್ಲಿದ್ದ ವಕ್ಪ್ ಎಂದು ನಮೂದಾಗಿರೋನ್ನು ತೆಗೆಯಬೇಕು. ವಿಜಪುರದಲ್ಲಿ ಡಿಸಿ ಆಫೀಸ್ ಸೇರಿದಂತೆ ಹಲವಾರು ಸರ್ಕಾರಿ ಕಚೇರಿಗಳು ವಕ್ಪ್ ಎಂದು ಆಗಿವೆ, ಇವೆಲ್ಲ ತೆರವು ಆಗಬೇಕು, ವಕ್ಫ್ ಎಂದು ನಮೂದಾಗಿರುವುದನ್ನು ತೆಗೆಯದಿದ್ದರೆ ಏನಾದರೂ ಅನಾಹುತವಾದರೆ ಅದಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಜಮೀರ್ ಅಹ್ಮದ್ ಖಾನ್ ಕಾರಣ ಎಂದು ಗುಡುಗಿದರು.

ಇದನ್ನೂ ಓದಿ: Vijayapura News | ಬಸವಾದಿ ಶರಣರ ವಿಚಾರಗಳೆ ಬದುಕಿಗೆ ಆದರ್ಶ – ಶಂಕರ ಬಿದರಿ

ಸಿಪಿ ಯೊಗೀಶ್ವರಗೆ ಅನ್ಯಾಯವಾಗಿದೆ:
ಬಿಜೆಪಿಯಲ್ಲಿದ್ದ ಸಿ ಪಿ ಯೊಗೀಶ್ವರಗೆ ಅನ್ಯಾಯವಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಶಾಸಕ ಯತ್ನಾಳ್, ಹಿಂದೆ 17 ಜನ ಶಾಸಕರು ಬಿಜೆಪಿಗೆ ಬಂದು ಯಡಿಯೂರಪ್ಪ ಸಿಎಂ ಆಗಲು ಕಾರಣ ಯೊಗೀಶ್ವರ. ವಿಜಯೇಂದ್ರಜೀ ಆಗಿರಲಿಲ್ಲಾ, ಪೌಡರ್ ಸ್ನೋ ಹೊಡಕೊಂಡು ಓಡಾಡುತ್ತಿದ್ದರು, ಅವರನ್ನು ಈಗಾ ಮಾಡ್ಯಾರು, ಪಕ್ಷದ ದುರ್ದೈವ, ಇಂಥ ಅಡ್ಜಸ್ಟ್ಸ್ಟಮೆಂಟ್ ಗಳದ್ದೇ ಕಾಲವಿದೆ ಎಂದು ವಿಜಯೇಂದ್ರ ವಿರುದ್ದ ಯತ್ನಾಳ ಅಸಮಾಧಾನ ವ್ಯಕ್ತಪಡಿಸಿದರು.

ಸಿಗ್ಗಾಂವಿ ಗೆಲುವು ಖಚಿತ:
ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲೋದು ಖಚಿತ, ಅಲ್ಲಿ ಹಿಂದೂ ವರ್ಸಸ್ ಸಾಬರು ಎಂಬಂತಾಗಿದೆ, ಪಂಚಮಸಾಲಿ ಎಂದಲ್ಲಾ ಬಿಡೋದು, ಹಿಂದೂ ಬಚೇಗಾತೋ ಹಮ್ ಬಚೇಗಾ ಇಲ್ಲವಾದರೆ ಯಾವ ರೆಡ್ಡಿ, ಪಂಚ ಮಸಾಲಿ, ಗಾಣಿಗ, ದಲಿತರು ಯಾರೂ ಉಳಿಲ್ಲಾ , ಈಗಾ ವಕ್ಪ್ ವಿಚಾರ ನೋಡುತ್ತಿದ್ದೀರಲ್ಲಾ, ನಾವು ಜಗಳವಾಡುತ್ತಾ ಹೋದರೆ ಸಬ್ ಹಮಾರಾ ಹೈ ಎನ್ನುತ್ತಾರೆ, ಯಾವೋ ಒಬ್ಬ ಮುಲ್ಲಾ ನಾಲ್ಕೈದು ರಾಜ್ಯದಲ್ಲಿ ಮುಸ್ಲಿಂಮರು ಬಹುಸಂಖ್ಯಾರಾಗಿದ್ದೇವೆ ಹಿಂದೂಗಳು ಖಾಲಿ ಮಾಡಿ ಎಂದಿದ್ದಾನೆ, ಆತನ ಮೇಲೆ 17 ಕ್ರಿಮಿನಲ್ ಕೇಸ್ ಇವೆ ಆತಾ ಹೇಳಿ ದ್ದಾನೆ, ಬಾಂಗ್ಲಾದಲ್ಲಿ ಹೇಗಾಗುತ್ತಿದೆ ಹಾಗಾಗಿ ನಾವು ಜಾತಿ ಬೇಧ ಭಾವ ಬಿಟ್ಟು ಒಂದಾಗಬೇಕು ಎಂದು ಅವರು ಹೇಳಿದರು.

ಇದನ್ನೂ ಓದಿ: Vijayapura News | ನಾಗರಿಕ ಸೌಲಭ್ಯ ವಸತಿ ನಿಲಯ ಕಟ್ಟಡದ ಸದುಪಯೋಗವಾಗಬೇಕು : ಡಾ. ಸುಧಾಮೂರ್ತಿ

ದೀಪಾವಳಿ ಹಬ್ಬದ ನಿಯಮಗಳಿಗೆ ಸರ್ಕಾರಕ್ಕೆ ಎಚ್ಚರಿಕೆ:
ದೀಪಾವಳಿ ಹಬ್ಬದಲ್ಲಿ ಕೇವಲ ಎರಡು ಗಂಟೆ ಮಾತ್ರ ಪಟಾಕಿ ಹೊಡೆಯಬೇಕೆಂದು ಸರ್ಕಾರದ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿದ ಶಾಸಕ ಯತ್ನಾಳ್, ನಿರಂತರ 24 ಗಂಟೆಗಳ ಕಾಲವೂ ಹಬ್ಬದ ದಿನ ನಾವು ಪಟಾಕಿ ಹೊಡೆದ್ದೇವೆ ಯಾವ ಕ್ರಮ ಕೈಗೊಳ್ಳುತ್ತಾರೋ ಕೈಗೊಳ್ಳಲಿ, ಅದೇನು ಮಾಡುತ್ತಾರೋ ಮಾಡಲಿ ಎಂದು ಸವಾಲು ಹಾಕಿದರು.

ದೀಪಾವಳಿಗೆ ಅಡೆತಡೆ ಮಾಡಿದರೆ ಜೈಲ್ ಬರೋ ಮಾಡುತ್ತೇವೆ, ಸಚಿವ ಖಂಡ್ರೆ ಮಾತು ಕೇಳಿ ನಾವು ಪಟಾಕಿ ಹೊಡೆಯಲ್ಲ, ಮೊದಲು ಹಿಂದುಗಳ ಮತ ಬಿದ್ದ ನಂತರ ಮುಸ್ಲಿಮರ ಮತ ಬಿದ್ದಿವೆ, ಹಿಂದೂಗಳ ಮತಗಳೇ ಬೀಳಲಿಲ್ಲ ಎಂದರೆ ಇವರು ಹೇಗೆ ಆಯ್ಕೆಯಾಗುತ್ತಿದ್ದರು ಎಂದು ಶಾಸಕ ಯತ್ನಾಳ್ ಪ್ರಶ್ನಿಸಿ, ಸರ್ಕಾರದ ನಿಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.


LEAVE A REPLY

Please enter your comment!
Please enter your name here