“ಚುನಾವಣಾ ಖರ್ಚಿಗೆ ಐವತ್ತು ಕೋಟಿ ರೂಪಾಯಿ ನೀಡುವಂತೆ ಒತ್ತಡ ಹೇರಲು ಬೆದರಿಕೆ ಹಾಕಲಾಗಿದೆ” ಎಂದು ಆರೋಪಿಸಿರುವ ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಜೆಡಿಎಸ್ ಸಾಮಾಜಿಕ ಜಾಲತಾಣ ವಿಭಾಗದ ಉಪಾಧ್ಯಕ್ಷ ವಿಜಯ್ ಟಾಟಾ, ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ Union Minister HD Kumaraswamy ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬೇಂಗಳೂರಿನ ಅಮೃತಹಳ್ಳಿಯ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ನೀಡಿರುವ ವಿಜಯ್ ಟಾಟಾ, “ನಾನು ಉದ್ಯಮಿಯಾಗಿದ್ದು, ವ್ಯವಹಾರದಲ್ಲಿ ಮುನ್ನಡೆ ಸಾಧಿಸುತ್ತಿದ್ದೇನೆ. ಆದರೆ ಕುಮಾರಸ್ವಾಮಿ ₹50 ಕೋಟಿ ನೀಡಲು ಒತ್ತಡ ಹಾಕುತ್ತಿದ್ದಾರೆ. ಅವರು ಬೆದರಿಕೆ ಸಹ ಹಾಕಿದ್ದಾರೆ” ಎಂದು ಆರೋಪಿಸಿದ್ದಾರೆ.
Union Minister HD Kumaraswamy ಕುಮಾರಸ್ವಾಮಿ ಜತೆಗೆ, ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಗೌಡರ ಹೆಸರನ್ನೂ ಟಾಟಾ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದು, “ರಮೇಶ್ ಗೌಡ ನನ್ನಿಂದ ಹಣ ವಸೂಲಿ ಮಾಡಲು ಪ್ರಯತ್ನಿಸಿದ್ದಾರೆ” ಎಂದು ವಿವರಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ವಿಜಯ್ ಟಾಟಾ, ಕುಮಾರಸ್ವಾಮಿ ವಿರುದ್ಧ ಗಂಭೀರ ಆರೋಪಗಳನ್ನನ್ನೂ ಮಾಡಿದ ನಂತರ, ಅವರು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. “ಕೆಲ ದಿನಗಳ ಹಿಂದೆ, ಕುಮಾರಸ್ವಾಮಿ ಅವರ ಆಪ್ತರಾದ ರಾಜ್ಯಸಭೆ ಸದಸ್ಯ ರಮೇಶ್ ಗೌಡ ನನ್ನನ್ನು ಕರೆಸಿ, ನಿಖಿಲ್ ಕುಮಾರಸ್ವಾಮಿ ಉಪಚುನಾವಣೆಗೆ ನಿಂತಿರುವುದರಿಂದ ₹50 ಕೋಟಿ ಕೊಡಬೇಕು ಎಂದು ಬೇಡಿಕೆ ಇಟ್ಟರು” ಎಂದು ಅವರು ಹೇಳಿದರು.
“ನಾನು ಹಣ ನೀಡಲು ನಿರಾಕರಿಸುತ್ತಿರುವಾಗ, ರಮೇಶ್ ಗೌಡ ಮೂಲಕ ಅವರು ಬೆದರಿಕೆ ಹಾಕಿದರು: ‘ಹಣ ನೀಡಲಿಲ್ಲವಷ್ಟೆ, ನಿನ್ನ ಮುಂದೆ ಬೆಂಗಳೂರಿನಲ್ಲಿ ಬದುಕುವುದು ಕಷ್ಟ’ ಎಂದು ಹೇಳಿದರು” ಎಂದು ಉದ್ಯಮಿ ಟಾಟಾ ಆರೋಪಿಸಿದ್ದಾರೆ.
ಇದನ್ನೂ ಓದಿ: ವಿಜಯಪುರ | ಗಾಂಧೀಜಿ ತತ್ವ ಸಿದ್ಧಾಂತಗಳಿಗೆ ಬದ್ದರಾಗೋಣ -ಡಾ. ಆನಂದ ಕುಲಕರ್ಣಿ