ವಿಜಯಪುರ: ಗಾಂಧಿಜೀಯವರ ಮೌಲ್ಯಗಳನ್ನು ಸ್ಮರಿಸುತ್ತಾ ಅವುಗಳನ್ನು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರತಿಜ್ಞೆ ಮಾಡೋಣ ಪ್ರೀತಿ, ದಯೇ, ಸಹಾನುಭೂತಿಯನ್ನು ಹರಡೋಣ ಭಾರತವನ್ನು ಹಾಗೂ ಸುತ್ತ ಮುತ್ತಲಿನ ಪರಿಸರವನ್ನು ಸ್ವಚ್ಛ ಹಸಿರು ಸ್ಥಳವನ್ನಾಗಿ ಮಾಡೋಣ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ T. Bhubalan ಕರೆ ನೀಡಿದರು.
ಇಂದು ನಗರದ ಆನಂದ ಮಹಲ್ ಆವರಣದಲ್ಲಿ ಜಿಲ್ಲಾಡಳಿತ ನೆಹರು ಯುವ ಕೇಂದ್ರ, ವಿಜಯಪುರ ಲಾಡ್ಲೀ ಪೌಂಡೇಶನ್ ನವದೆಹಲಿ, ಜಿಲ್ಲಾ ಎನ್.ಎಸ್.ಎಸ್. ಘಟಕ, ಕ್ಷೇತ್ರ ಸಂವಹನ ಇಲಾಖೆ, ಸ್ಪಂಧನಾ ಸೇವಾ ಸಂಸ್ಥೆ, ಸಮಪ್ರಭ ಸಂಸ್ಥೆಯವರ ಸಂಯುಕ್ತಾಶ್ರಯದಲ್ಲಿ “ಸ್ವಚ್ಛತಾ ಹಿ ಸೇವಾ“ ಜನಾಂದೋಲನವನ್ನು ಗಾಂಧೀ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾಗಿತ್ತು.
ಇದನ್ನೂ ಓದಿ: Vijayapur News | ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಕೊಡುಗೆ ಅಪಾರ – T. Bhubalan
ನಾವು ಗಾಂಧಿ ಜಯಂತಿಯನ್ನು ಆಚರಿಸುತ್ತಿರುವಾಗ ಸ್ವಚ್ಛ ಭಾರತ ಅಭಿಯಾನಕ್ಕೆ ನಮ್ಮ ಬದ್ಧತೆ ಕೊಡುಗೆ ನೀಡಬೇಕಾಗಿದೆ. ಗಾಂಧಿಜೀಯವರು ಹಾಕಿಕೊಟ್ಟ ಅಹಿಂಸಾ ಮಾರ್ಗದಲ್ಲಿ ನಡೆದುಕೊಂಡು ಸ್ವಚ್ಛತೆ ಮತ್ತು ಸಮಾಜ ಸೇವೆಗೆ ಅಣಿಯಾಗಬೇಕಾಗಿದೆ. ಸ್ವಚ್ಛತೆಯ ಬಗ್ಗೆ ಕೇವಲ ಸರ್ಕಾರ ಗಮನಿಸಿದರೆ ಸಾಲದು ಸಾರ್ವಜನಿಕರು ಕೂಡಾ ತಮ್ಮ ಜವಾಬ್ದಾರಿ ಅರಿತುಕೊಂಡು ಭಾಗಿಯಾಗಬೇಕೆಂದು ಕರೆ ನೀಡಿದರು.
ಲಾಡ್ಲೀ ಪೌಂಡೇಶನ್ ಟ್ರಸ್ಟ್ದ ಡಾ|| ಜಾವೀದ ಜಮಾದಾರ ಮಾತನಾಡಿ, ಸ್ವಚ್ಛ ಭಾರತವನ್ನು ವಾಸ್ತವಗೊಳಿಸಲು ನಾವು ನಮ್ಮ ಸುತ್ತ ಮುತ್ತಲಿನ ಪ್ರದೇಶಗಳನ್ನು ಮಾತ್ರವಲ್ಲದೇ ನಮ್ಮ ಮನ ಸ್ಥೀತಿಯನ್ನು ಬದಲಾಯಿಸಬೇಕು ಸ್ವಚ್ಛತೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ಎಂದು ಅರ್ಥಮಾಡಿಕೊಳ್ಳಬೇಕ. ರಸ್ತೆಗಳಲ್ಲಿ ಕಸ ಹಾಕದಿರುವ, ಹಾಗೂ ಕಸದ ತೊಟ್ಟಿಗೆಗಳನ್ನು ತ್ಯಾಜ್ಯ ವಿಲೇವಾರಿ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳುವುದು ಅತ್ಯಗತ್ಯ. ಈ ಸಣ್ಣ ಬದಲಾವಣೆಯು ನಮ್ಮ ಪರಿಸರ ಮತ್ತು ಸಮಾಜದ ಮೇಲೆ ಭಾರಿ ಪರಿಣಾಮ ಬೀರಬಹುದು ಯುವಕರು ಗಾಂಧೀಜಿಯವರು ಹಾಕಿಕೊಟ್ಟಂತಹ ಮಾರ್ಗದಲ್ಲಿ ಮುನ್ನಡೆಯಲು ಪಣ ತೊಡಬೇಕಾಗಿದೆ ಎಂದರು.
ಇದನ್ನೂ ಓದಿ: ಐಪಿಎಸ್ ಅಧಿಕಾರಿ ಚಂದ್ರಶೇಖರ ಅವಹೇಳನಕಾರಿ ಪದ ಬಳಕೆ ಖಂಡಿಸಿ ಅವರನ್ನು ಅಮಾನತುಗೊಳಿಸಲು ಆಗ್ರಹ
T. Bhubalan ವೇದಿಕೆಯ ಮೇಲೆ ನೆಹರು ಯುವ ಕೇಂದ್ರ ಜಿಲ್ಲಾ ಯುವ ಅಧಿಕಾರಿ ರಾಹುಲ ಡೋಂಗೆ, ಎನ್.ಎಸ್.ಎಸ್. ನೂಡಲ್ ಅಧಿಕಾರಿ ಪ್ರಕಾಶ ರಾಠೋಡ, ಲಾಡ್ಲಿ ಪೌಂಡೇಶನ್ ಟ್ರಸ್ಟ್ ಮುಖ್ಯ ಯೋಜನಾಧಿಕಾರಿ ಸುರಭಿಸಿಂಗ್ ಇವರು ಮಾತನ್ನಾಡಿದರು. ಸಂಘ ಸಂಸ್ಥೆಗಳು ಒಕ್ಕೂಟದ ಕಾರ್ಯದರ್ಶಿ ಸುರೇಶ ಬಿಜಾಪೂರ ಕ್ಷೇತ್ರ ಸಂವಹನಾ ಅಧಿಕಾರಿ ಸುರೇಶ ಸಿ.ಕೆ. ಸ್ಪಂಧನಾ ಸಂಸ್ಥೆಯ ಮಹದೇವ ದೇವರ, ಆರ್.ಬಿ.ಉಪಾಸೇ, ಡಾ|| ಶಿವಕುಮಾರ ನಾಯಕ, ಶೇಖರ ಕುಮಾರ ಜಾ, ಎಸ್.ಯು. ಜಮಾದಾರ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉತ್ತಮ ಕಾರ್ಯ ಮಾಡಿದಂತಹ ಮಹಾನಗರ ಪಾಲಿಕೆಯ 40 ಪೌರಕಾರ್ಮಿಕರನ್ನು ಗುರುತಿಸಿ ಲಾಡ್ಲಿ ಪೌಂಡೇಶನ್ ವತಿಯಿಂದ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಹಾಗೂ ಎನ್.ಎಸ್.ಎಸ್. ಸ್ವಯಂ ಸೇವಕರ ತಲಾ 100 ಜನರ 8 ತಂಡಗಳನ್ನು ರಚಿಸಿ ನಗರದ ಕೇಂದ್ರ ಬಸ್ ನಿಲ್ದಾಣ, ಗಗನ ಮಹಲ್, ಜಿಲ್ಲಾಧಿಕಾರಿಗಳ ಕಛೇರಿ ಆವರಣ, ಬಾರಾಕಮಾನ, ಗಾಂಧಿಚೌಕ ನರಸಿಂಹ ದೇವಸ್ಥಾನ, ಹಳೇ ತಹಶೀಲ್ದಾರ, ಆಫೀಸ್, ಎಲ್.ಬಿ.ಎಸ್. ಮಾರ್ಕೆಟ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಸುಮಾರು ಒಂದು ಕ್ವಿಂಟಲ್ನಷ್ಟು ಕಸವನ್ನು ಸಂಗ್ರಹಿಸಿ ಮಹಾನಗರ ಪಾಲಿಕೆಯ ಸ್ವಚ್ಛತಾ ವಾಹನಕ್ಕೆ ಹಸ್ತಾಂತರಿಸಲಾಯಿತು.
ಇದನ್ನೂ ಓದಿ: Vijayapur News | ಕರ್ನಾಟಕ ಸಂಭ್ರಮ-50 ಆಚರಣೆ | ಕನ್ನಡಿಗರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ
ಆನಂದ ಮಹಲ್ ಆವರಣದಿಂದ ಬೃಹತ್ ಜಾಗೃತಿ ಜಾಥಾ ಪ್ರಾರಂಭಿಸಿ ಡಾ|| ಬಿ.ಆರ್.ಅಂಬೇಡ್ಕರ್ ಸರ್ಕಲ್, ಬಸವೇಶ್ವರ ಸರ್ಕಲ್ ಮುಖಾಂತರ ಗಾಂಧಿ ಚೌಕ್ ತಲುಪಿಸಿ ಮಾನವ ಸರಪಳಿ, ನಿರ್ಮಿಸಿ ಮಹಾತ್ಮ ಗಾಂಧೀಜಿಯವರ ಪುತ್ಥಳಿಗೆ ಗೌರವ ಸಮರ್ಪಣೆ ಮಾಡಲಾಯಿತು. ಪ್ರೆಸಿಡೆನ್ಸಿ ಕಾಲೇಜಿನ ಪ್ರಾಚಾರ್ಯ ಡಾ|| ಸುಮಾ ಬೊಳರೆಡ್ಡಿ, ಚೇತನಾ ಕಾಲೇಜಿನ ಪುರುಷೋತ್ತಮ, ವೇದಾಂತ ಕಾಲೇಜಿನ ಎ.ಎಸ್. ಹೂಗಾರ, ಎ.ಎಸ್.ಪಾಟೀಲ ಕಾಮರ್ಸ್ ಕಾಲೇಜಿನ ವಿಜಯಕುಮಾರ ತಳವಾರ, ಮತ್ತು ಪ್ರದೀಪ ಕುಂಬಾರ ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯದ ಡಾ|| ಬಿ.ಎಸ್. ಹಿರೇಮಠ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೊದಲಿಗೆ ಪ್ರಶಾಂತ ದೇಶಪಾಂಡೆ ಸ್ವಾಗತಿಸಿದರು. ನೆಹರು ಯುವ ಕೇಂದ್ರದ ಕಾರ್ಯಕ್ರಮ ಸಹಾಯಕಿ ಬೇಬಿ ದೊಡಮನಿ ವಂದಿಸಿದರು. ಸಂಗಮೇಶ ರಾಮಗೊಂಡ ನಿರೂಪಿಸಿದರು.