ವಿಜಯಪುರ: ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು ಜಿಲ್ಲಾ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ವಿಜಯಪುರ ಹಾಗೂ ತಾಲೂಕಾ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಬಬಲೇಶ್ವರ ಸಂಯುಕ್ತಾಶ್ರಯದಲ್ಲಿ ಶಿಕ್ಷಕರ ದಿನೋತ್ಸವ 2024 ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭ ಕಾರ್ಯಕ್ರಮ ಶ್ರೀ ಬಾಪೂಜಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜರುಗಲಿದೆ.
ಕಾರ್ಯಕ್ರಮಕ್ಕೆ ದಿವ್ಯ ಸಾನ್ನಿಧ್ಯವನ್ನು ಗುಣದಾಳದ ಕಲ್ಯಾಣೇೀಶ್ವರ ಹಿರೇಮಠದ ಪೂಜ್ಯ ಶ್ರೀ ಡಾ. ವಿವೇಕಾನಂದ ದೇವರು ವಹಿಸಲಿಕೊಳ್ಳಲಿದ್ದಾರೆ ಮತ್ತು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಲಭ್ಯಗಳ ಅಭಿವೃದ್ಧಿ ಸಚಿವರಾದ ಡಾ. ಎಂ.ಬಿ. ಪಾಟೀಲ ಉದ್ಘಾಟಿಸಲಿದ್ದಾರೆ.
ಇದನ್ನೂ ಓದಿ: ವಿಜಯಪುರ ಕೋರ್ಟ್ನಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ಅರ್ಜಿ ಆಹ್ವಾನ
ಶಿಕ್ಷಕರ ದಿನೋತ್ಸವ 2024 ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ನವದೆಹಲಿ ಹಾಗೂ ವಿಧಾನ ಪರಿಷತ್ ಶಾಸಕ ಪ್ರಕಾಶ ಹುಕ್ಕೇರಿ ಡಾ. ರಾಧಾಕೃಷ್ಣನ್ ಭಾವಚಿತ್ರಕ್ಕೆಪುಷ್ಪಾರ್ಚನೆ ನೆರವೇರಿಸಲಿದ್ದಾರೆ. ನಂತರ ಬಬಲೇಶ್ವರ ಗ್ರಾಮಾಂತರ ವಿದ್ಯಾವಧರ್ಕ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ವ್ಹಿ.ಎನ್. ಬಿರಾದಾರ ಜ್ಯೋತಿ ಬೆಳಗಿಸಲಿದ್ದಾರೆ. ವಿಧಾನ ಪರಿಷತ್ ಶಾಸಕರಾದ ಹಣಮಂತ ಆರ್. ನಿರಾಣಿ, ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷರಾದ ಸಂಗಮೇಶ ಬಬಲೇಶ್ವರ ಅವರು ಪ್ರಶಸ್ತಿಯನ್ನು ಪ್ರಧಾನ ಮಾಡಲಿದ್ದಾರೆ.
ಜಿಲ್ಲಾ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಶಿವಾನಂದ ಹಿರೇಕುರುಬರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಶಾಲಾ ಶಿಕ್ಷಕರ ಸಂಘ (ರಿ) ರಾಜ್ಯಾಧ್ಯಕ್ಷರಾದ ಎನ್. ರಾಜಗೋಪಾಲ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಲಿದ್ದಾರೆ. ಅತಿಥಿಗಳಾಗಿ ಹಲವಾರು ಗಣ್ಯ ಮಾನ್ಯರು, ಅಧಿಕಾರಿಗಳು, ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ಲಾಭದಲ್ಲಿ ದಾನಶ್ರೀ ಸೌಹಾರ್ದ ಸಹಕಾರಿ ಸಂಘ 9ನೇ ವಾರ್ಷಿಕ ಸಭೆ- ಅಪ್ಪು ಇಟ್ಟಂಗಿ ಹೇಳಿಕೆ
ಇದೇ ಸಂದರ್ಭದಲ್ಲಿ ಬಸನಗೌಡ ಬಿರಾದಾರ ತಾಲೂಕು ವಿಜಯಪುರ ನಗರ, ಬಿಸ್ಮಿಲ್ಲಾ ರಹಿಮಾನ್ ಸಿಕ್ಕಲಗಾರ ಚಡಚಣ, ಬಸವರಾಜ ಶಂಕರ ಮಾಡ್ಯಾಳ ತಾಲೂಕು ಇಂಡಿ, ಚಂದ್ರಶೇಖರ ಖೀರು ಲಮಾಣಿ ಬಸವನ ಬಾಗೇವಾಡಿ ತಾಲೂಕು, ಶ್ರೀಮತಿ ಕಮಲಾ ಅ ಕೋಟ್ಯಾಳ ತಾಲೂಕು ಬಬಲೇಶ್ವರ, ಎಚ್. ಎಮ್. ಬೋರಾವತ ತಾಲೂಕು ವಿಜಯಪುರ ನಗರ,ಎಂ.ಜಿ.ಚೌಧರಿ ತಾಲೂಕು ಸಿಂದಗಿ, ಪ್ರಕಾಶ ಲಕ್ಷ್ಮಪ್ಪ ಕಟ್ಟಿಮನಿ ತಾಲೂಕು ತಾಳಿಕೋಟಿ, ನಾಗಪ್ಪ ದೊಡ್ಡಪ್ಪ ಬೇನೂರ್ ತಾಲೂಕು ವಿಜಯಪುರ ಗ್ರಾಮೀಣ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಕರಾಅಪ್ರಾ ಶಾಲಾ ಶಿಕ್ಷಕ ಸಂಘ ಬಬಲೇಶ್ವರ ತಾಲೂಕಾ ಅಧ್ಯಕ್ಷರಾದ ಶ್ರೀಶೈಲಗೌಡ ಬಿರಾದಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.