ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹ ಜಿಲ್ಲಾ ಬಿಜೆಪಿಯಿಂದ ಬೃಹತ ಪ್ರತಿಭಟನೆ | ಆರ್.ಎಸ್.ಪಾಟೀಲ ಕೂಚಬಾಳ

ರಾಮಕೃಷ್ಣ ಹೆಗಡೆ,ದೇವೇಗೌಡ, ಪಟೇಲ್ ಅವರಂತಹ ಮೌಲ್ಯಯುತ ರಾಜಕಾರಣಿಗಳ ಸಂಸ್ಕಾರದಲ್ಲಿ ಬೆಳೆದ ಸಿದ್ಧರಾಮಯ್ಯ ನಿಮಗೆ ಈಂತಹ ಘಟನೆ ಶೋಭೆ ತರುವದಿಲ್ಲ.

0
34

ವಿಜಯಪುರ: ಮುಡಾ ಹಗರಣದಲ್ಲಿ ರಾಜ್ಯ ಹೈಕೋರ್ಟ್ ತೀರ್ಪನ್ನು ಗೌರವಿಸಿ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾ ಬಿಜೆಪಿ ಘಟಕದಿಂದ ಬುಧವಾರ ನಗರದಲ್ಲಿ ಬಿಜೆಪಿಯಿಂದ ಬೃಹತ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿ,ಮುಡಾನಲ್ಲಿ ಅಕ್ರಮವಾಗಿ 14 ಸೈಟ ಪಡೆದಿರುವುದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿವೇಶನದಲ್ಲಿ ಬಿಜೆಪಿಯಿಂದ ನಿಲುವಳಿ ಸೂಚನೆಗೆ ಉತ್ತರ‌ ಕೊಡದೆ ಪಲಾಯನ ಮಾಡಿದರು. ರಾಮಕೃಷ್ಣ ಹೆಗಡೆ,ದೇವೇಗೌಡ, ಪಟೇಲ್ ಅವರಂತಹ ಮೌಲ್ಯಯುತ ರಾಜಕಾರಣಿಗಳ ಸಂಸ್ಕಾರದಲ್ಲಿ ಬೆಳೆದ ಸಿದ್ಧರಾಮಯ್ಯ ನಿಮಗೆ ಈಂತಹ ಘಟನೆ ಶೋಭೆ ತರುವದಿಲ್ಲ. ನೈತಿಕ ಹೊಣೆ ಹೊತ್ತಿ ತಕ್ಷಣವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.

ಇದನ್ನೂ ಓದಿ: ಕನ್ನಡ ಸಾಹಿತ್ಯ ಪರಿಷತ್ತಿಗೆ ಶತಮಾನದ ಇತಿಹಾಸವಿದೆ: ಹಾಸಿಂಪೀರ ವಾಲಿಕಾರ

ಮುಖ್ಯಮಂತ್ರಿ ಪದವಿ ನಿಮ್ಮ ಅಥವಾ ಕಾಂಗ್ರೆಸ್ ನ ಆಸ್ತಿ ಅಲ್ಲ. ಅದು ರಾಜ್ಯದ 7 ಕೋಟಿ ಕನ್ನಡಿಗರ ಜನರ ಸೇವೆಗೆ ಇರುವ ಅವಕಾಶ. ಪ್ರತಿ ಸಲ ನಮಗೆ 136 ಸ್ಥಾನ ಬಂದಿವೆ ಎನ್ನುವ ಕಾಂಗ್ರಸ್ಸಿಗರು ಅಷ್ಟು ಬಹುಮತ ಬಂದರೆ ನೀವು ಮಾಡಿದ ತಪ್ಪನ್ನು ಕ್ಣಮಿಸಬೇಕೆ, ರಾಜ್ಯಪಾಲರ ವಿರುದ್ಧ ಮಾತನಾಡಿ ದಬ್ಬಾಳಿಕೆ ಮಾಡಿದ್ದೀರಿ.

ಆದರೆ ಹೈಕೋರ್ಟ್ ರಾಜ್ಯಪಾಲರ ನಿರ್ಣಯವನ್ನು ಎತ್ತಿ ಹಿಡಿದಿದೆ. 30 ಗಂಟೆಗಳ ಕಾಲ ವಾದ-ವಿದಾದ ನಡೆದು ತಾವು ಪಡೆದ ಸೈಟಗಳು ಅಕ್ರಮ ಎಂದು ತನಿಖೆ ಆದೇಶಿಸಿದೆ ಆದ್ದರಿಂದ ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಇದನ್ನೂ ಓದಿ: ವಿಜಯಪುರ ಜಿಲ್ಲೆಯಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆಯಾಗಿದೆ ಗೋತ್ತಾ ? ಹಾನಿ ಎಷ್ಟು ?

ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಮಾತನಾಡಿ, ಸಿಎಂ ಸೇರಿದಂತೆ ಕಾಂಗ್ರೆಸ್ ನಾಯಕರು ಸಂವಿಧಾನದ ಪುಸ್ತಕ ಕೈಯಲ್ಲಿ ಹಿಡಿದು ಹೋಗುತ್ತಿದ್ದರು ಇದೇ ಏನು ನೀವು ಸಂವಿಧಾನಕ್ಕೆ ಕಾನೂನಿಗೆ ಬೆಲೆ ಕೊಡುವ ರೀತಿ ಎಂದು ಪ್ರಶ್ನಿಸಿದರು. ಮುಡಾದಲ್ಲಿ ಅಕ್ರಮವಾಗಿ ನಿವೇಶನ ಪಡೆದಿದ್ದಾಗಿ ಹೈಕೋರ್ಟ್ ತನಿಖೆ ಆದೇಶಿಸಿದರೂ ನೀವು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡದೆ ಭಂಡತನ ಪ್ರದರ್ಶನ ಮಾಡುತ್ತಿರುವರಿ ಎಂದು ಕೆಣಕಿದರು.

ಬಿಜೆಪಿಯಿಂದ ಬೃಹತ ಪ್ರತಿಭಟನೆ , 40 ವರ್ಷಗಳ ನಿಮ್ಮ ಸುದೀರ್ಘ ರಾಜಕಿಯದಲ್ಲಿ ಹೆಗಡೆ ಪಟೇಲ್ ಅವರಂತಹ ಗರಡಿಯಲ್ಲಿ ಪಳಗಿ ರಾಜೀನಾಮೆ ನೀಡದಿರುವದು ಸಂವಿಧಾನ ವಿರೋಧಿ ಧೋರಣೆಯಾಗಿದೆ. ಆದ್ದರಿಂದ ತಕ್ಷಣವೇ ನಿಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ವಿಜುಗೌಡ ಪಾಟೀಲ್, ಕಾಸುಗೌಡ ಬಿರಾದಾರ್, ಪ್ರಧಾನ ಕಾರ್ಯದರ್ಶಿಗಳಾದ ಮುಳುಗುಡ ಪಾಟೀಲ್, ಈರಣ್ಣ ರಾವೂರ್, ಸಾಬು ಮಾಶಾಳ, ಸಂಜಯ ಐಹೊಳೆ, ಉಮೇಶ್ ಕೋಳ್ಕೂರ್, ಗೋಪಾಲ್ ಘಟಕಾಂಬಳೆ, ಶಂಕರ್ ಹೂಗಾರ, ಮಹಾನಗರ ಪಾಲಿಕೆ ಸದಸ್ಯರಾದ ರಾಹುಲ್ ಜಾದವ್, ಕರಡಿ,

ಜವಹಾರ ಗೋಸಾವಿ, ರವಿಕಾಂತ ಬಗಲಿ, ಗುರುಲಿಂಗಪ್ಪ ಅಂಗಡಿ, ಮಹೇಂದ್ರ ನಾಯಕ್, ಸುರೇಶ್ ಬಿರಾದಾರ್, ಈರಣ್ಣ ಪಟ್ಟಣಶೆಟ್ಟಿ, ಭೀಮಾಶಂಕರ್ ಹದನೂರು, ಶೀಲವಂತ ಉಮರಾಣಿ, ಬಸವರಾಜ ಹೂಗಾರ, ಚಿದಾನಂದ ಚಲವಾದಿ, ಸಪ್ನಾ ಕಣ್ಮುಚ್ಚಿನಾಳ ಮಲ್ಲಮ್ಮ ಜೋಗುರು ಲಕ್ಷ್ಮಿ ಕನ್ನೊಳ್ಳಿ ಗೀತಾ ಕುಕನೂರು, ಕಾಂತು ಸಿಂಧೆ, ವಿಜಯ ಜೋಶಿ, ಬಿಜೆಪಿಯಿಂದ ಬೃಹತ ಪ್ರತಿಭಟನೆ

ಬಸು ಬೈಚುವಾಳ ರಾಜಕುಮಾರ್ ಸಗಾಯಿ, ಜಗದೀಶ್ ಮುಚ್ಚಂಡಿ, ಪ್ರವೀಣ್ ಕೂಡುಗಿ, ಹರ್ಷ ಗೌಡ ಪಾಟೀಲ್, ಪಾಪು ಸಿಂಗ್ ರಜಪೂತ್, ಭರತ್ ಕೋಳಿ, ಸಂಗು ಉಕ್ಕಲಿ, ಆನಂದ್ ಮುಚ್ಚಂಡಿ ಕಲ್ಮೇಶ್ ಹಿರೇಮಠ್, ವಿಠ್ಠಲ್ ನಡುವಿನಕೇರಿ ಬಾಬು ಶಿರಶ್ಯಾಡ, ಪವನ ಕುಲಕರ್ಣಿ, ಅನೀಲ ಉಪ್ಪಾರ, ಶರಣಬಸು ಕುಂಬಾರ,

ರಾಮಚಂದ್ರ ಚವ್ಹಾಣ, ಪ್ರವೀಣ ನಾಟೀಕಾರ, ವಿನಾಯಕ್ ದಹಿಂದೆ ಸೇರಿದಂತೆ ಎಲ್ಲಾ ಮಂಡಲದ ಅಧ್ಯಕ್ಷರು ಮಹಾನಗರ ಪಾಲಿಕೆ ಸದಸ್ಯರು, ಮಹಿಳಾ ಮೋರ್ಚಾ ಪದಾಧಿಕಾರಿ, ಯುವ ಮೋರ್ಚಾ ಪದಾಧಿಕಾರಿಗಳು ಸೇರಿದಂತೆ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.


"ಅಪ್ಪ ಹೇಳಿದ ಆರ್ಮೀ ಕಥೆಗಳು" image

LEAVE A REPLY

Please enter your comment!
Please enter your name here