ತಿಕೋಟಾ: ಲಿಂಗೈಕ್ಯ ಬಸವಂತರಾಯ ಮಹಾರಾಜರರು ಹಾಗು ಲಿಂಗೈಕ್ಯ ಬಸವರಾಜ ಮೇಲುಪ್ಪರಗಿಮಠ ನಿರಂತರ ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣಕ್ಕಾಗಿ ದುಡಿದು ತಮ್ಮ ಜೀವನವನ್ನು ಸಾರ್ಥಕ ಮಾಡಿಕೊಂಡ ಮಹಾನ ಸಾಧಕರು (ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ) ಎಂದು ಹಿರಿಯ ಪ್ರವಚನಕಾರ ಬಾಬುರಾವ ಮಹಾರಾಜ ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದು ಹೊನವಾಡ ಗ್ರಾಮದ ಶ್ರೀ ವಿಠ್ಠಲ ಮಂದಿರದಲ್ಲಿ ಲಿಂ:ಬಸವಂತರಾಯ ಮಹಾರಾಜರ ಹಾಗು ಲಿಂ: ಬಸವರಾಜ ಮೇಲುಪ್ಪರಗಿಮಠ ಅವರ ದತ್ತಿನಿಧಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡುತ್ತಾ ಹೊನವಾಡ ಗ್ರಾಮದ ಈ ಇಬ್ಬರು ಸಾಧಕರಿಂದ ಶೈಕ್ಷಣಿಕ ಹಾಗು ಆಧ್ಯಾತ್ಮಿಕ ಚಿಂತನೆಗಳಿಂದ ಪ್ರಗತಿ ಹೊಂದಲು ಸಾಧ್ಯವಾಯಿತು ಎಂದರು.
ಇದನ್ನೂ ಓದಿ: ವಿಜಯಪುರ ಜಿಲ್ಲೆಯಲ್ಲಿ ಎಷ್ಟು ಪ್ರಮಾಣದಲ್ಲಿ ಮಳೆಯಾಗಿದೆ ಗೋತ್ತಾ ? ಹಾನಿ ಎಷ್ಟು ?
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಶತಮಾನದ ಇತಿಹಾಸವಿದೆ. ಕನ್ನಡ ನಾಡು-ನುಡಿಯು ಅತ್ಯಂತ ಶ್ರೀಮಂತವಾಗಿದೆ. ಸಾಹಿತ್ಯದಿಂದ ಸಾಮಾಜಿಕ ಮೌಲ್ಯ ಕಾಪಾಡಲು ಸಾಧ್ಯ.
ದತ್ತಿ ನಿಧಿ ಕಾರ್ಯಕ್ರಮದಲ್ಲಿ ವಚನ ಸಾಹಿತ್ಯ ಹಾಗು ಜಾನಪದ ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದೇವೆ ಎಂದರು. ಉಪನ್ಯಾಸಕ ಡಿ ಬಿ ಡೇಮ್ರಿ ಲಿಂ ಬಸವಂತರಾಯ ಮಹಾರಾಜರ ಕುರಿತು ಉಪನ್ಯಾಸ ನೀಡಿ ಗ್ರಾಮೀಣ ಸಮಾಜದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರಾಧ್ಯಾನತೆ ನೀಡಿ ಹೊನವಾಡದಲ್ಲಿ ಪ್ರೌಢ ಶಾಲೆ ಹಾಗು ಪದವಿಪೂರ್ವ ಕಾಲೇಜು ಸ್ಥಾಪಿಸಿ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಕಾರಣರಾದರು. ಅರವಿಂದ ಆದಶ9 ಪಾಲನೆ ಮಾಡಿ ಅದರಂತೆ ನಡೆದರು ಎಂದರು.
ಇದನ್ನೂ ಓದಿ: ಹೊರಗುತ್ತಿಗೆ ನೌಕರರ ವೇತನದಲ್ಲಿ ಲೋಪವಾದಲ್ಲಿ ಶಿಸ್ತು ಕ್ರಮ : ತಿಮ್ಮಾಪೂರ
ಲಿಂ ಬಸವರಾಜ ಮೇಲುಪ್ಪರಗಿಮಠ ದತ್ತಿ ವಿಷಯ ಜ್ಞಾನ ದಾಸೋಹ ಕುರಿತು ಮಾತನಾಡಿದ ಎಂ ಎಸ್ ಖೋದ್ನಾಪೂರ ಮಾತನಾಡಿ ಬಸವರಾಜ ಮೇಲುಪ್ಪರಗಿಮಠ ವಿಜಯಪುರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಹಾಗು ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾಗಿ ನಿರಂತರ ಸಾಹಿತ್ಯದ ಚಟುವಟಿಕೆಗಳನ್ನು ಮಾಡಿದರು. (ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ) ಹೊನವಾಡ ಗ್ರಾಮದಲ್ಲಿ ವಿದ್ಯಾವರ್ಧಕ ಸಂಘ ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳ ಬದುಕನ್ನು ಕಟ್ಟಿದವರು ಎಂದರು.
ಹಿರಿಯರಾದ ವಿಜಯಕುಮಾರ ಹಿರೇಮಠ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಗಳಾದ ಅಭಿಷೇಕ ಚಕ್ರವರ್ತಿ..ಬಿಜ್ಜರಗಿ ಗ್ರಾಮ ಪಂಚಾಯತ ಅಧ್ಯಕ್ಷ ಸುಭಾಷಗೌಡ ಪಾಟೀಲ ಮಾತನಾಡಿದರು. ತಿಕೋಟಾ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ರಾಮಯ್ಯ ಲಕ್ಕುಂಡಿಮಠ ಪ್ರಾಸ್ತಾವಿಕ ಮಾತನಾಡಿದರು.
ಇದೇ ಸಂದರ್ಭದಲ್ಲಿ ದತ್ತಿ ದಾನಿಗಳಾದ ಗೌರಿಶಂಕರ ಹಿರೇಮಠ ಹಾಗು ವೆಂಕಪ್ಪ ಉಪ್ಪಾರ ಇವರನ್ನು ಪರಿಷತ್ತಿನಿಂದ ಸನ್ಮಾನಿಸಲಾಯಿತು.
ಡಾ: ಸಿದ್ದಲಿಂಗಪ್ಪಾ ಸಾರವಾಡ. ಅವಿನಾಶ ಮೇಲುಪ್ಪರಗಿಮಠ. ಮಹಾದೇವ ಜಾಧವ. ಸಾಬು ಕಾತ್ರಾಳ ಧರೆಪ್ಪ ಯಚ್ಚಿ. ಸಿದ್ದು ಬೆಳಗಾವಿ ವೇದಿಕೆಯ ಮೇಲಿದ್ದರು.
ಆನಂದ ಹೊನವಾಡ ಪ್ರಾರ್ಥಿಸಿದರು.ಶರಣಮ್ಮ ಹಾದಿಮನಿ ಸ್ವಾಗತಿಸಿದರು. ಲಕ್ಷ್ಮಿ ಕಾತ್ರಾಳ ಕವನ ವಾಚಸಿದರು. ಹಣಮಂತ ಮೋಹಿತೆ ವಂದಿಸಿದರು. ಲಿಂಗರಾಜ ಪಾಟೀಲ. ಶರಣು ಕಂಠಿ. ಬಸವರಾಜ ನಾವಿ. ಮುರಿಗೆಪ್ಪ ಕೋಟಿ. ದರೆಪ್ಪ ಚಾವರ. ಬಸವರಾಜ ಐಗಳಿಮಠ. ನಚಿಕೇತ ಹಿರೇಮಠ. ಶ್ರೀಶೈಲ ಮಾಲಗಾರ. ಸಚೀನ ಸಾವಂತ. ಶ್ರೀಕಾಂತ ಕಂಟೇಕಾರ.ಬಸು ಏಕನಾಟಿ. ಚಿದಾನಂದ ಅರಮೋಟಿ. ಉಮೇಶ ಮೂರಕಲಿ. ಚಿದಾನಂದ ಗೊರವರ. ಬಾಪು ದೇವನಾಯಕ. ಪುಟ್ಟು ಮಠಪತಿ.ಶಿವಾಜಿ ಜಾಧವ. ಆನಂದ ಕೊರಬು. ಅಕ್ಬರ ತಿಕೋಟಿ ಮುಂತಾದವರು ಉಪಸ್ಥಿತರಿದ್ದರು.