ಸಾಕ್ಷರತಾ ದಿನಾಚರಣೆ 2024: ವಿಚಾರಣಾ ಬಂಧಿಗಳು ಕಾರ್ಯಕ್ರಮದಲ್ಲಿ ಭಾಗಿ.

“ಮನೆಯನ್ನು ಬೆಳಗಲು ಹಣತೆ ಬೇಕು, ಮನ ಬೆಳಗಲು ಶಿಕ್ಷಣ ಬೇಕು” ಸಾಕ್ಷರತೆ ಎಲ್ಲಿ ಇದೆಯೋ ಅಲ್ಲಿ ಅಭಿವೃದ್ಧಿ ಇದೆ.

0
62
ಸಾಕ್ಷರತಾ ದಿನಾಚರಣೆ image
ವಿಜಯಪುರ: ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ 2024 ಜಿಲ್ಲಾ ಕಾರಾಗೃಹ ವಿಜಯಪುರದಲ್ಲಿ ಜರುಗಿತು. ಮಾನ್ಯ ಡಾ|| ಐ.ಜೆ.ಮ್ಯಾಗೇರಿ, ಅಧೀಕ್ಷಕರು, ಕೇಂದ್ರ ಕಾರಾಗೃಹ, ವಿಜಯಪುರ ರವರ ಅಧ್ಯಕ್ಷತೆಯಲ್ಲಿ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಜರುಗಿತು. ಮುಖ್ಯ ಅತಿಥಿಗಳಾಗಿ, ಶ್ರೀಮತಿ ಉಮಾದೇವಿ ಸೊನ್ನದ, ಉಪನಿರ್ದೇಶಕರು, (ಅಭಿವೃದ್ಧಿ), ಜಿಲ್ಲಾ ಮತ್ತು ತರಬೇತಿ ಸಂಸ್ಥೆ, ವಿಜಯಪುರ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಗಳು ಹಾಗೂ ಸಿಬ್ಬಂದಿ, ಕಾರಾಗೃಹ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ  ಸಜಾ & ವಿಚಾರಣಾ ಬಂಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು,
ಮೊದಲಿಗೆ ಶ್ರೀಮತಿ ಉಮಾದೇವಿ ಸೊನ್ನದ, ಉಪನಿರ್ದೇಶಕರು, (ಅಭೀವೃದ್ಧಿ), ಜಿಲ್ಲಾ ಮತ್ತು ತರಬೇತಿ ಸಂಸ್ಥೆ, ವಿಜಯಪುರ ಇವರು ಸದರಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡುತ್ತಾ “ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ” ಎಂದು ಹೇಳುತ್ತಾ, ಸಮಾಜದಲ್ಲಿಯ ಅನಕ್ಷರಸ್ಥರನ್ನು ಗರುತಿಸಿ, ಅಕ್ಷರಸ್ಥರನ್ನಾಗಿ ಮಾಡುವ ಉಲ್ಲಾಸ್ ಎನ್‍ಐಎಲ್‍ಪಿ, 1000 ಸಂಪೂರ್ಣ ಗ್ರಾಮ ಪಂಚಾಯತಿ ಹಾಗೂ ಲಿಂಕ್ ಡಾಕ್ಯುಮೆಂಟ್ ಸಾಕ್ಷರತಾ ಕಾರ್ಯಕ್ರಮಗಳ ಮೂಲಕ ಸಾಕ್ಷರರನ್ನಾಗಿ ಮಾಡುವ ಕಾರ್ಯ ಅತ್ಯಂತ ಯಶಸ್ವಿಯಾಗಿ ನಡೆದಿರುವುದು ನಮ್ಮ ಜಿಲ್ಲೆಗೆ ಹೆಮ್ಮೆಯ ವಿಷಯವೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಡಾ|| ಐ.ಜೆ.ಮ್ಯಾಗೇರಿ ಮಾತನಾಡುತ್ತಾ ಯಾವ ವ್ಯೆಕ್ತಿ ಜ್ಞಾನವೆಂಬ ಜ್ಯೋತಿಯನ್ನು ತನ್ನ ಜೀವನದಲ್ಲಿ ಬೆಳಗಿಸಿಕೊಳ್ಳುತ್ತಾನೋ ಆತನು ಸಮಾಜಕ್ಕೆ ತನ್ನದೇ ಆದ ವಿಶೇಷ ಕೊಡುಗೆ ನೀಡುತ್ತಾನೆ. ನಿಮ್ಮಿಂದಲೇ ಈ ಬಂಧಿಖಾನೆ ಎಂಬ ವಿಷಯ ಕೊನೆಯಾಗಬೇಕು,  ನಿವೇಲ್ಲರೂ ನಿಮ್ಮ ಮಕ್ಕಳಿಗೆ ಶಿಕ್ಷಣ ನೀಡುವುದರ ಮುಖಾಂತರ ಸ್ವುಸ್ತಿರ ಸಮಾಜ ನಿರ್ಮಿಸಲು ಕೈಜೋಡಿಸಬೇಕು, ಇದಕ್ಕಾಗಿ ನಾವೆಲ್ಲರೂ ಸದಾ ನಿಮ್ಮ ಜೊತೆ ಇರುತ್ತೇವೆ ಎಂದು ಮಾರ್ಮಿಕವಾಗಿ ಮಾತನಾಡಿದರು.
ಪ್ರತಿಜ್ಞಾವಿಧಿ ಬೋಧಿಸಿದ ಶ್ರೀ ಸುರೇಶ ಕುಪ್ಪಿ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು ಮಾತನಾಡುತ್ತಾ ಜಿಲ್ಲೆಯಲ್ಲಿಯ ಅನಕ್ಷರಸ್ಥರನ್ನು ಹೋಗಲಾಡಿಸಿ ಮೂಲ ಸಾಕ್ಷರತೆ ನೀಡುವ ಮೂಲಕ ಪ್ರತಿಯೊಬ್ಬರನ್ನೂ ಸಾಕ್ಷರರನ್ನಾಗಿ ಮಾಡುವ ಸಂಕಲ್ಪ ನಾವೆಲ್ಲರೂ ಮಾಡೋಣ ಎಂದು ಹೇಳಿದರು ಹಾಗೂ ಸಾಕ್ಷರತಾ ದಿನಾಚರಣೆ ಮಹತ್ವದ ಬಗ್ಗೆ ವಿವರಿಸಿದರು, “ ಮನೆಯನ್ನು ಬೆಳಗಲು ಹಣತೆ ಬೇಕು, ಮನ ಬೆಳಗಲು ಶಿಕ್ಷಣ ಬೇಕು” ಸಾಕ್ಷರತೆ ಎಲ್ಲಿ ಇದೆಯೋ ಅಲ್ಲಿ ಅಭಿವೃದ್ಧಿ ಇದೆ ವಿದ್ಯಾವಂತ ಸಮುದಾಯದವರು ಅನಕ್ಷರಸ್ಥರಿಗೆ, ಅಕ್ಷರ ಜ್ಞಾನ ನೀಡುವ ಕೆಲಸವು ಆಗಬೇಕು ಅಂದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಹಾಗೂ ಸಪ್ತಾಹ ಕಾರ್ಯಕ್ರಮವು ಸಪ್ಟೆಂಬರ್ 01 ರಿಂದ 08 ರ ವರೆಗೆ ಜಿಲ್ಲಾದ್ಯಂತ ನಡೆದಿದ್ದು, ಪ್ರತಿಜ್ಞಾವಿಧಿ, ಪ್ರಬಾತ್‍ಪೇರಿ, ರಸಪ್ರಶ್ನೆ, ಪ್ರಭಂದ ಸ್ಪರ್ದೆ, ಚಿತ್ರಕಲಾ ಸ್ಪರ್ದೆ ತಜ್ಞರಿಂದ ಶೈಕ್ಷಣಿಕ  ಚಿಂತನೆ ಗೋಷ್ಟಿ ಇನ್ನಿತರ ಕಾರ್ಯಕ್ರಮಗಳು ಜರುಗಿದವು. ಕೇಂದ್ರ ಕಾರಾಗೃಹದಲ್ಲಿ ಸ್ಪರ್ದೆಗಳಲ್ಲಿ ಭಾಗವಹಿಸಿದವರಿಗೆ ಬಹುಮಾನ ವಿತರಿಸಲಾಯಿತು. ಹಾಗೂ ಅನಕ್ಷರಸ್ಥ ಕೈಧಿಗಳೆಲ್ಲರಿಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.

ಶ್ರೀ ಜಿ.ಎಸ್.ಕಾಪಸೆ, ಕಾರ್ಯಕ್ರಮ ಸಹಾಯಕರು, ಜಿ.ವ.ಶಿ.ಇ, ಇವರು ಕಾರ್ಯಕ್ರಮದಲ್ಲಿ ಸ್ವಾಗತಿಸಿದರು. ಸಾಕ್ಷರ ಗೀತೆಯನ್ನು, ಶ್ರೀ ಮೌನೇಶ ಮಾದರ, ಸಜಾ ಬಂಧಿ, ಇವರು ಹಾಡಿದರು, ಶ್ರೀಮತಿ ಶಖಿನಾ ನದಾಫ್, ಕಾರ್ಯಕ್ರಮ ನಿರೂಪಿಸಿದರು, ವೇದಿಕೆಯಲ್ಲಿ ಜೈಲರ್‍ಗಳಾದ ಶ್ರೀ ಎ.ಕೆ.ಅನ್ಸಾರಿ, ಶ್ರೀ ಜಿ.ಕೆ.ಕುಲಕರ್ಣಿ, ಶ್ರೀಮತಿ ಸವಿತಾ ಬೆಳ್ಳುಂಡಗಿ, ಶಿಕ್ಷಕರಾದ ಶ್ರೀ ಡಿ.ಎಸ್.ದಿಕ್ಷಿತ್ , ಶ್ರೀಮತಿ ಸವಿತಾ ಕುಲಕರ್ಣಿ ಇನ್ನಿತರು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here