ಬಿಜೆಪಿ ಸದಸ್ಯತ್ವ ಅಭಿಯಾನ : ಡಾ. ವೀರಣ್ಣ ಚರಂತಿಮಠದ ಚಾಲನೆ

ಸದಸ್ಯತ್ವ ಅಭಿಯಾನದಲ್ಲಿ ಜಿಲ್ಲೆಯಿಂದ 4ಲಕ್ಷ 31 ಸಾವಿರ ಜನರನ್ನು ಹಾಗೂ ಬಾಗಲಕೊಟೆ ಮತಕ್ಷೇತ್ರದಿಂದ 63 ಸಾವಿರ ಸದಸ್ಯರನ್ನು ನೊಂದಣಿ ಮಾಡಿ ರಾಜ್ಯದಲ್ಲಿಯೇ 4ನೇ ಸ್ಥಾನದಲ್ಲಿದ್ದಿದ್ದು ನಮ್ಮ ಹೆಗ್ಗಳಿಕೆ.

0
54

ಬಾಗಲಕೊಟೆ: ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿ ದೇಶದಲ್ಲಿ ಸದೃಡ ಹಾಗೂ ಸಮರ್ಥ ಆಡಳಿತ ನೀಡುತ್ತಿದೆ, ಬಿಜೆಪಿ ಸದಸ್ಯತ್ವ ಅಭಿಯಾನ ಮತ್ತೊಂದು ದಾಖಲೆಯಾಗಲಿ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು. ಅವರು ಭಾರತೀಯ ಜನತಾ ಪಕ್ಷ ನಗರಮಂಡಲ ವತಿಯಿಂದ ನವನಗರದ 20ನೇ ವಾರ್ಡಿನ ಸೆಕ್ಷರ್ ನಂ 50ರಲ್ಲಿನ 187 ನೇ ಬೂತ್ ಅಧ್ಯಕ್ಷ ಮಂತೇಶ ಬಾದೋಡಗಿ ಅವರ ಮನೆಯ ಆವರಣದಲ್ಲಿ ಸೋಮವಾರ ನಡೆದ 2024ರ ಬಿಜೆಪಿ ರಾಷ್ಟ್ರಿಯ ಸದಸ್ಯತ್ವ ಅಭಿಯಾನಕ್ಕೆ ಭಾರತಮಾತೆಗೆ ಪುಷ್ಪಾಂಜಲಿ ಸಲ್ಲಿಸಿ. ಮೋಬೈಲನಿಂದ ಸದಸ್ಯತ್ವ ನೋಂದಣಿ ನಂಬರಿಗೆ ಕಾಲ್ ಮಾಡುವ ಮೂಲಕ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಹಿಂದಿನ ಸದಸ್ಯತ್ವ ಅಭಿಯಾನದಲ್ಲಿ ಜಿಲ್ಲೆಯಿಂದ 4ಲಕ್ಷ 31 ಸಾವಿರ ಜನರನ್ನು ಹಾಗೂ ಬಾಗಲಕೊಟೆ ಮತಕ್ಷೇತ್ರದಿಂದ 63 ಸಾವಿರ ಸದಸ್ಯರನ್ನು ನೊಂದಣಿ ಮಾಡಿ ರಾಜ್ಯದಲ್ಲಿಯೇ 4ನೇ ಸ್ಥಾನದಲ್ಲಿದ್ದಿದ್ದು ನಮ್ಮ ಹೆಗ್ಗಳಿಕೆ, ಅಂದು ಬಿಜೆಪಿ ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿತ್ತು, ಇಂದು ದೇಶದಲ್ಲಿ ಬಿಜೆಪಿ ಸದೃಡ ಹಾಗೂ ಸಮರ್ಥ ಆಡಳಿತ ನೀಡುತ್ತಿದೆ, ಆದ್ದರಿಂದ ಈ ಅಭಿಯಾನ ಇಂದು ಪ್ರಾರಂಭವಾಗಿ ಅಕ್ಟೋಬರ 15ರ ವರೆಗೆ ಇರುವುದರಿಂದ ಮತಕ್ಷೇತ್ರದಲ್ಲಿ 75ಸಾವಿರಕ್ಕೂ ಹೆಚ್ಚು ಹೊಸ ಸದಸ್ಯರ ನೊಂದಣಿ ಮಾಡಿಸುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಇದನ್ನೂ ಓದಿ: ಆಹಾರ ಸುರಕ್ಷತೆ: ಪರಿಶೀಲಿಸಿ ನೋಟಿಸ್ ಜಾರಿ

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸವಿತಾ ಲಂಕೆನ್ನವರ,ಉಪಾಧ್ಯಕ್ಷೆ ಶೋಭಾ ರಾವ್,ನಗರಸಭೆ ಸದಸ್ಯೆ ನಾಗರತ್ನಾ ಹೆಬ್ಬಳ್ಳಿ, ಭಾಗೀರಥಿ ಪಾಟೀಲ,ಲಕ್ಷ್ಮೀ ನಾರಾಯಣ ಕಾಸಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಶಿವಾನಂದ ಟವಳಿ, ಸತ್ಯನಾರಾಯಣ ಹೆಮಾದ್ರಿ, ಅನಿತಾ ಸರೋದೆ, ಜಿ.ಎಸ್.ಬಡಿಗೇರ,ವಿಶ್ವನಾಥ ಪಾಟೀಲ, ರಾಮನ್ಣ ಜುಮನಾಳ, ಗಣೇಶ ಲಗಳಿ, ಸಾಗರ ಬಂಡಿ, ಯಲ್ಲಪ್ಪ ನಾರಾಯಣಿ, ಶಿವು ಹನಮಕ್ಕನವರ,ದಶರಥ ಪತಂಗೆ, ಆನಂದ ಕೋಟಗಿ, ನಗರಮಂಡಲ ಅಧ್ಯಕ್ಷ ಬಸವರಾಜ ಹುನಗುಂದ,ಉಮೇಶ ಹಂಚಿನಾಳ, ಶ್ರೀಧರ ನಾಗರಬೆಟ್ಟ ಸೇರಿದಂತೆ ಅನೇಕರು ಭಾಗವಹಿಸದ್ದರು.


LEAVE A REPLY

Please enter your comment!
Please enter your name here