ಜೆಡಿಎಸ್ ಪದಾಧಿಕಾರಿಗಳ ನೇಮಕಾತಿ

0
192

ವಿಜಯಪುರ ಮಾ 12: ಜೆಡಿಎಸ್ ಯುವ ಜನತಾದಳ ಜಿಲ್ಲಾ ಮತ್ತು ನಗರ ಪದಾಧಿಕಾರಿಗಳ ನೇಮಕಾತಿ ಜೆಡಿಎಸ್ ಕಾರ್ಯಾಲಯದಲ್ಲಿ ಇಂದು ನಡೆಯಿತು.

ಜಯಕಾಂತ ವಾಗ್ಮೋರೆ ಅವರನ್ನು ಜಿಲ್ಲಾ ಜೆಡಿಎಸ್ ಯುವ ಜನತಾದಳ (ಜಾತ್ಯಾತೀತ)ದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನಾಗಿ, ಅಬ್ದುಲ್ ಹಮೀದ ಇಂಡೀಕರ ಅವರನ್ನು ಜಿಲ್ಲಾ ಜೆಡಿಎಸ್ ಯುವ ಜನತಾದಳ (ಜಾತ್ಯಾತೀತ)ದ ಜಿಲ್ಲಾ ಸಹ ಕಾರ್ಯದರ್ಶಿಯನ್ನಾಗಿ, ಹುಸೇನ ಪೈಗಂಬರ ಅರಬ ಅವರನ್ನು ಜಿಲ್ಲಾ ಜೆಡಿಎಸ್ ಯುವ ಜನತಾದಳ (ಜಾತ್ಯಾತೀತ)ದ ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ, ಮಾಳಿಂಗರಾಯ ಹೂ. ಹೊನಗೊಂಡ ಅವರನ್ನು ನಗರ ಕಾರ್ಯದರ್ಶಿಯಾಗಿ ಯುವ ಜನತಾ ದಳದ ಅಧ್ಯಕ್ಷರಾದ ಸುನೀಲ ಆರ್. ಕೆ. ರಾಠೋಡ ಅವರು ನೇಮಕ ಮಾಡಿ ಆದೇಶ ಹೊರಡಿಸಿ ನೇಮಕಾತಿ ಪತ್ರ ವಿತರಿಸಿದರು.

ಈ ಸಂದರ್ಭದಲ್ಲಿ ಅನ್ವರ ಮಕಾಂದಾರ, ಸಾಜೀದ ರಿಸಾಲ್ದಾರ, ಮನೋಜ ಬಿರಾದಾರ, ಶಿವಾನಂದ ಹಿರೇಕುರಬರ, ಮುಕಂದಾಸ ಇನಾಂದಾರ, ಚಂಧ್ರಕಾಂತ ತಾರನಾಳ ಯುವ ಜನತಾದಳ ಎಲ್ಲ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here