ವಿಜಯಪುರ ಸೆ.30: ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಕ್ರಿಕೇಟ ಬೆಟ್ಟಿಂಗ್ ನಡೆಸುತ್ತಿದ್ದ ಮೂವರನ್ನು ಬಂದಿಸಲಾಗಿದೆ ಎಂದು ಎಸ್ಪಿಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
ರಾಮ್.ಎಲ್ ಅರಸಿದ್ದಿ, ಹೆಚ್ಚುವರಿ ಜಿಲ್ಲಾ ಪೊಲೀಸ ಅಧೀಕ್ಷಕರು ಅವರ ನೇತೃತ್ವದಲ್ಲಿ ಸಿ.ಬಿ ಬಾಗೇವಾಡಿ ಪಿಐ ಡಿಸಿಐಬಿ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡವು ಆರೋಪಿಗಳಾದ ಶಿವಪುತ್ರ ಬಗಲಿ (31), ಚಂದ್ರಕಾಂತ ಪಾಟೀಲ್ (24), ಸಾಯಬಣ್ಣ ಮೂರಮನ (34) ಆರೋಪಿತರಿಂದ 3,00,000/- ರೂಪಾಯಿ, 10 ಮೋಬೈಲ್ ಪೋನ್, ಒಂದು ಟಿ.ವ್ಹಿಯನ್ನು ವಶಪಡಿಸಿಕೊಳ್ಳಲಾಗಿದೆ.